ವಿಜಯನಗರ | ಮಹಿಳಾ ಶಿಕ್ಷಣಕ್ಕೆ ಪೆಟ್ಟು ಕೊಡಲು ಹುಟ್ಟಿದ ತಂತ್ರ‍ ‘ಹಿಜಾಬ್’: ಶಾರದಾ ಉಡುಪಿ

Date:

Advertisements

ಹಿಜಾಬ್ ಒಂದು ಸಮುದಾಯದ ಮಹಿಳೆಯರ ಶಿಕ್ಷಣಕ್ಕೆ ಪೆಟ್ಟು ಕೊಡಲು ಹುಟ್ಟಿದ ತಂತ್ರ ಎಂದು ನಿವೃತ್ತ ಪ್ರಾಂಶುಪಾಲೆ ಶಾರದಾ ಉಡುಪಿ ಅಭಿಪ್ರಾಯಪಟ್ಟರು.

ವಿಜಯನಗರದ ಹೊಸಪೇಟೆ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

“ಧರ್ಮ, ಹಿಜಾಬ್ ಬಗ್ಗೆ ನಾವು ಮಾತನಾಡಲೇಬೇಕು. ಸದ್ಯ ಹಿಜಾಬ್ ವಿಷಯ ಮುನ್ನಲೆಗೆ ಬಂದಿದ್ದು ಒಂದು ಸಮುದಾಯದ ಮಹಿಳೆಯರ ಶಿಕ್ಷಣಕ್ಕೆ ಪೆಟ್ಟು ಕೊಡಲು ಹುಟ್ಟಿದ ಬಹುದೊಡ್ಡ ತಂತ್ರವಾಗಿದೆ. ಮಹಿಳೆಯರು ಪ್ರಶ್ನೆ ಮಾಡದೇ ಯಾವುದಕ್ಕೂ ಉತ್ತರ ಸಿಗೋದಿಲ್ಲ. ಅತ್ಯಾಚಾರಕ್ಕೊಳಗಾದ ಹೆಣ್ಣು ಠಾಣೆಗೆ ಪಿರ್ಯಾದಿ ಕೊಡಲು ಹೋದರೆ, ಮತ್ತೆ ಪೊಲೀಸ್‌‌ರಿಂದಲೇ ಅತ್ಯಾಚಾರಕ್ಕೊಳಗಾಗುವ ದರಿದ್ರ ಪರಿಸ್ಥಿತಿಯಲ್ಲಿದ್ದೀವಿ” ಎಂದು ಕಳವಳವ್ಯಕ್ತಪಡಿಸಿದರು.

Advertisements
WhatsApp Image 2025 03 07 at 4.30.32 PM 1

ಡಾ. ಭಾನುಮತಿ ಕಲ್ಲೂರಿ ಮಾತನಾಡಿ, “ಕಾರ್ಖಾನೆಯ ಹೊಗೆಯಿಂದ ಮಹಿಳೆಯರು ಗರ್ಭಕೋಶದ ತೊಂದರೆಗೆ ಈಡಾಗುತ್ತಿದ್ದಾರೆ. ಗಣಿಗಾರಿಕೆಗಳು ಸಾಮಾನ್ಯ ಜನರ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತವೆ. ಸಾಲದಂತೆ ಅಂತರ್ಜಲ ಮಟ್ಟ ಕಡಿಮೆಯಾಗುತ್ತದೆ. ಪರ್ಯಾಯ ಸಂಪನ್ಮೂಲಗಳ ಜತೆ ಹೆಚ್ಚು ತೊಡಗಿಸಿಕೊಳ್ಳುವುದರ ಮೂಲಕ ಉತ್ತರ ಕರ್ನಾಟಕದಲ್ಲಿ ವಲಸೆ ಹೋಗುವ ಪ್ರಮಾಣವನ್ನು ಕಡಿಮೆ ಮಾಡಬೇಕು” ಎಂದರು.

ಡಾ.ಜೋಗತಿ ಮಂಜಮ್ಮ ಮಾತನಾಡಿ, “ಸಮಾನತೆ ಜೊತೆಗೆ ಇಕ್ವಿಟಿ ಕೊಟ್ಟರೆ ಮಾತ್ರ ಸಮಾನತೆ ಆಗುತ್ತದೆ. ಇಲ್ಲಿ ಎಲ್ಲಾ ಲಿಂಗದವರು ಇದ್ದಾರೆ ಇದು ಸಮಾನತೆ ಆಗುತ್ತದೆ. ನನ್ನಂತ ಮಗು ಹುಟ್ಟಿದರೆ ಆ ಮಗುವನ್ನ ಬೀದಿಗೆ ಬಿಡಬೇಡಿ, ಆ ಮಗುವಿಗೆ ಉ‌ನ್ನತ ಶಿಕ್ಷಣ‌ಕೊಡಿ. ಅದು ನಿಮ್ಮ ಗೌರವವನ್ನು ಹೆಚ್ಚು ಮಾಡುತ್ತದೆ. ಆ ಮೂಲಕ ಸಮಾನತೆ ಕೊಟ್ಟ ಸಂವಿಧಾನಕ್ಕೆ ಗೌರವ ಕೊಡೋಣ, ಅದನ್ನ‌ರಕ್ಷಿಸೋಣ” ಎಂದರು.

WhatsApp Image 2025 03 07 at 4.30.34 PM

ಇದನ್ನೂ ಓದಿ: ವಿಜಯನಗರ | ಲಿಂಗ ಸಮಾನತೆ ನಮ್ಮ ಹೊಣೆ: ಪ್ರೊ. ರೋನಿತ್ ಕಾರ್ಕ

ಕಾರ್ಯಕ್ರಮದಲ್ಲಿ ಸೌಭಾಗ್ಯ ಎಚ್ ಸೇರಿದಂತೆ ಒಕ್ಕೂಟದ ಮುಖಂಡರು ಉಪಸ್ಥಿತರಿದ್ದರು.

WhatsApp Image 2025 03 07 at 4.30.34 PM 1
ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X