ಹಾಸನ | ಗಾಳಿ ಸಹಿತ ಮಳೆ; ಎಲ್ಲೆಲ್ಲಿ ಎಷ್ಟೆಷ್ಟು?

Date:

Advertisements

ರಾಜ್ಯದ ವಿವಿಧ ಭಾಗಗಳಲ್ಲಿ ನಿನ್ನೆ ಸಂಜೆ ಮಿಂಚು, ಗಾಳಿ ಸಹಿತ ಸುರಿದ ಮಳೆಯಿಂದಾಗಿ ಅಲ್ಲಲ್ಲಿ ತಂಪಿನ ವಾತಾವರಣ ನಿರ್ಮಾಣವಾಗಿದೆ. ಅದರಂತೆ ಹಾಸನ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಹ ಹದಮಳೆ ಬಿದ್ದಿದೆ. ಕೆಲವೆಡೆ ಫ್ಲೆಕ್ಸ್‌ಗಳು, ಮರದ ಒಣಗಿದ ಕೊಂಬೆಗಳು ಮುರಿದುಬಿದ್ದಿವೆ. ದಿಢೀರನೆ ಸುರಿದ ಅನಿರೀಕ್ಷಿತ ಮಳೆಯಿಂದ ಸಾರ್ವಜನಿಕರು, ವಾಹನ ಸವಾರರು ಪರದಾಡುವ ಸ್ಥಿತಿ ಉಂಟಾಗಿತ್ತು.

ಇನ್ನು ಜಿಲ್ಲೆಯಾದ್ಯಂತ ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ ಎಂದು ನೋಡುವುದಾದರೆ.. ಸಕಲೇಶಪುರ ಪಟ್ಟಣ 45 ಮಿಮೀ, ಹಳ್ಳಿಮನೆ ಹಾರ್ಲ್ಲೆ ಕೂಡಿಗೆ ಬಳಿ 55 ಮಿಮೀ, ಸುಳ್ಳಕ್ಕಿ 75 ಮಿಮೀ, ಕಟ್ಟಳ್ಳಿ ಹಲಸುಲಿಗೆ 42 ಮಿಮೀ, ದೇವಿಹಳ್ಳಿ ಎಸ್ಟೇಟ್ 68 ಮಿಮೀ, ಹಳೆಬೇಲೂರು 75 ಮಿಮೀ, ಸೋಮವಾರಪೇಟೆ ಬಳಿಯ ಗೋಣಿಮಕೂರು 80 ಮಿಮೀ ಮಳೆಯಾಗಿದೆ.

ಬಂದಳ್ಳಿ ಎಸ್ಟೇಟ್, ಬಿಕ್ಕೋಡು 1.2 ಇಂಚು, ಹೊತ್ತೂರು ಹಾಡ್ಯದಲ್ಲಿ 60 ಮಿಮೀ, ಕ್ಯಾನಳ್ಳಿಯಲ್ಲಿ 1.5 ಇಂಚು, ಮಠಸಾಗರದಲ್ಲಿ 0.85 ಇಂಚು, ಲಕ್ಕುಂದದಲ್ಲಿ 1.35 ಇಂಚು, ಮುಗಳಿಯಲ್ಲಿ 0.35 ಮಿಮೀ , ಉದಯಾವರದಲ್ಲಿ 1.10 ಇಂಚು, ದೊಡ್ಡ ನಾಗರದಲ್ಲಿ 65 ಮಿಮೀ, ಆನೆಮಹಲ್ ನಲ್ಲಿ 10 ಮಿಮೀ, ಹೆಬ್ಬನಹಳ್ಳಿಯಲ್ಲಿ 78 ಮಿಮೀ, ಕಸ್ಕೆಬೈಲ್ ನಲ್ಲಿ 97 ಮಿಮೀ, ಮೂವಾಲ ಬಿಕೋಡು 1.5 ಇಂಚು, ಮೂಡಿಗೆರೆ ತಾಲೂಕಿನ ಬೆಟ್ಟಿಗೆರೆ 1.40 ಇಂಚು ಮಳೆಯಾಗಿದೆ.
ಒಟ್ಟಾರೆ ಬಿಸಿಲಿನ ವಿಪರೀತ ತಾಪದಿಂದ ಕಂಗೆಟ್ಟಿದ್ದ ಜನತೆಗೆ ಸ್ವಲ್ಪ ಸಮಾಧಾನ ತಂದಂತಾಗಿದೆ.

Advertisements

ಇದನ್ನೂ ಓದಿ: ಹಾಸನ | ಶಿರಾಡಿ ಘಾಟ್ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ; ಮಾ.15ರಿಂದ ಏಕಮುಖ ಸಂಚಾರ

ಹೀಗೇ ಒಂದೆರಡು ದಿನ ಮಳೆ ಮತ್ತೆ ಬಂದಲ್ಲಿ ಪರವಾಗಿಲ್ಲ. ಬಿಸಿಲಿನ ಝಳ ಹೆಚ್ಚಾದರೆ ಜನರ ಆರೋಗ್ಯ ಕೆಡುವ ಸಾಧ್ಯತೆ ಇರಬಹುದು. ಏನೇ ಆದರೂ ಈ ಅನಿರೀಕ್ಷಿತ ಮಳೆ ಜನರ ಮೊಗದಲ್ಲಿ ಮುಗುಳ್ನಗೆ ತಂದಿದೆ ಎಂಬುದಂತೂ ಸತ್ಯ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

Download Eedina App Android / iOS

X