ವಿಮೆನ್ ಪ್ರೀಮಿಯರ್‌ ಲೀಗ್‌ | 2ನೇ ಬಾರಿ ಪ್ರಶಸ್ತಿ ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್‌

Date:

Advertisements

ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರ ಆಕರ್ಷಕ ಅರ್ಧಶತಕದ ಫಲವಾಗಿ ಮುಂಬೈ ಇಂಡಿಯನ್ಸ್‌ ತಂಡ ಮುಂಬೈನ ಬ್ರಬೊರ್ನ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ ಫೈನಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮಣಿಸಿ ಪ್ರತಿಷ್ಟಿತ ಪ್ರಶಸ್ತಿ ಗೆದ್ದುಕೊಂಡಿತು. ಡೆಲ್ಲಿ 8 ರನ್‌ಗಳಿಂದ ಸೋಲು ಅನುಭವಿಸಿ ಸತತ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಎಡವಿತು.

44 ಎಸೆತಗಳಲ್ಲಿ 66 ರನ್‌ ಪೇರಿಸಿದ ಹರ್ಮನ್‌ಪ್ರೀತ್‌ ಕೌರ್‌ ಫೈನಲ್‌ ಪಂದ್ಯಕ್ಕಾಗಿಯೇ ತಮ್ಮ ಆಟವನ್ನು ಮೀಸಲಿಟ್ಟರು. ಮುಂಬೈ ಪಂದ್ಯ ಗೆಲ್ಲುವಲ್ಲಿ ಅವರ ಕೊಡುಗೆ ನಿರ್ಣಾಯಕವಾಯಿತು. ತಂಡದ ಉಳಿದ ಬ್ಯಾಟರ್‌ಗಳು ವಿಫಲರಾದಾಗ 149 ರನ್ ಗುರಿ ನೀಡುವಲ್ಲಿ ಹರ್ಮನ್ ಬ್ಯಾಟಿಂಗ್ ನೆರವಿಗೆ ಬಂತು.

149 ರನ್ ಸಾಧಾರಣ ಗುರಿ ಎಂಬತ್ತಿದ್ದರೂ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ್ತಿಯರು ಅನಪೇಕ್ಷಿತ ಒತ್ತಡ ಹೇರಿಕೊಂಡರು. ಹಾಗಾಗಿ, 9 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿ ಸೋಲೊಪ್ಪಿಕೊಂಡತು. ತಂಡದ ಪರ ಮಾರಿಜಾನ್ ಕಾಪ್ ಮತ್ತು ಯುವ ಆಟಗಾರ್ತಿ ಕನ್ನಡತಿ ನಿಕಿ ಪ್ರಸಾದ್ ಅವರ ಸಾಹಸ ಫಲ ನೀಡಲಿಲ್ಲ.

Advertisements

ಇದಕ್ಕೂ ಮುನ್ನ ಮುಂಬೈ ಪರಿಣಾಮಕಾರಿ ಆಟಗಾರ್ತಿ ನಾಟ್‌ ಸಿವರ್‌ ಬ್ರಂಟ್‌ ಅವರನ್ನು ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್‌ ಆಫ್ ಕಟ್ಟರ್ ಮೂಲಕ ಔಟ್ ಮಾಡಿದರು. ಸ್ಫೋಟಕ ಆಟಗಾರ್ತಿ ಶೆಫಾಲಿ ವರ್ಮಾ ಅವರನ್ನು ಶಬ್ನಿಮ್ ಇಸ್ಮಾಯಿಲ್ ಪೆವಿಲಿಯನ್ ಸೇರಿಸುವಲ್ಲಿ ಯಶಸ್ವಿಯಾದರು. ಹೀಗಾಗಿ, ಡೆಲ್ಲಿ ಆರಂಭಿಕ ಯಶಸ್ಸು ಪಡೆಯಿತು. ಆದರೆ ತಂಡದ ಖುಷಿ ಹೆಚ್ಚು ಕಾಲ ನಿಲ್ಲಲಿಲ್ಲ.

ಈ ಸುದ್ದಿ ಓದಿದ್ದೀರಾ? ಜನಪ್ರಿಯವಾಗುತ್ತಿರುವ ವಿಮೆನ್ ಪ್ರೀಮಿಯರ್‌ ಲೀಗ್‌: ದೇಶದ ಉದ್ದಕ್ಕೂ ಮಹಿಳಾ ಕ್ರಿಕೆಟ್ ಪಸರಿಸಲಿ!

ಸಾಕಷ್ಟು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿರುವ ಅನುಭವವನ್ನೆಲ್ಲ ಮುಂಬೈ ನಾಯಲಿ ಹರ್ಮನ್‌ಪ್ರೀತ್ ಈ ಪಂದ್ಯದಲ್ಲಿ ಧಾರೆ ಎರೆದರು. ಪ್ರಶಸ್ತಿ ಗೆಲ್ಲಲೇಬೇಕೆಂದು ಪಣ ತೊಟ್ಟಂತಿದ್ದ ಅವರು ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದು ಮಾತ್ರವಲ್ಲದೇ, ತಮ್ಮ ತಂಡದಲ್ಲಿದ್ದ ಬೌಲಿಂಗ್ ಅಸ್ತ್ರಗಳನ್ನು ಅತ್ಯಂತ ಪರಿಣಾಮಕಾರಿ ಬಳಸಿ ಎದುರಾಳಿ ತಂಡ ಗುರಿ ತಲುಪದಂತೆ ನೋಡಿಕೊಂಡರು.

6 ಕೋಟಿ ರೂಪಾಯಿ ಬಹುಮಾನ

ಮಹಿಳಾ ಪ್ರೀಮಿಯರ್ ಲೀಗ್‌ ಚಾಂಪಿಯನ್ ಮುಂಬೈ ತಂಡದ ಆಟಗಾರರು ಪದಕಗಳೊಂದಿಗೆ 6 ಕೋಟಿ ರೂ ಬಹುಮಾನದ ಚೆಕ್ ಪಡೆದರು. ನಾಯಕಿ ಹರ್ಮನ್‌ ಆಕರ್ಷಕ ಟ್ರೋಫಿ ಸ್ವೀಕರಿಸಿದರು. ಇದರ ಜೊತೆಗೆ, ಲಿಮಿಟೆಡ್‌ ಎಡಿಷನ್ ಕೈಗಡಿಯಾರವನ್ನು ತಂಡದ ಎಲ್ಲ ಸದಸ್ಯರಿಗೂ ನೀಡಲಾಯಿತು.

ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್‌ ಆಟಗಾರ್ತಿಯರು ಮೆಡಲ್‌ಗಳೊಂದಿಗೆ 3 ಕೋಟಿ ರೂಪಾಯಿ ಬಹುಮಾನದ ಚೆಕ್ ಮತ್ತು ಶೀಲ್ಡ್ ಸ್ವೀಕರಿಸಿದರು. ಇದರೊಂದಿಗೆ ಆಟಗಾರ್ತಿಯರಿಗೆ ಲಿಮಿಟೆಡ್‌ ಎಡಿಷನ್ ಕೈ ಗಡಿಯಾರವನ್ನು ಉಡುಗೊರೆಯಾಗಿ ಪಡೆದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X