ಶಿವಮೊಗ್ಗ | ಬಾಕಿ ಶುಲ್ಕ ಪಾವತಿಸಿಲ್ಲವೆಂದು ಮಗುವಿನ ಮೇಲೆ ಹಲ್ಲೆ, ಜಾತಿನಿಂದನೆ; ಜೈನ್ ಪಬ್ಲಿಕ್ ಶಾಲೆ ವಿರುದ್ಧ ಕ್ರಮಕ್ಕೆ ಆಗ್ರಹ

Date:

Advertisements


ಶಾಲೆಯ ಬಾಕಿ ಶುಲ್ಕವನ್ನು ಪಾವತಿಸಿಲ್ಲವೆಂಬ ಕಾರಣಕ್ಕೆ ಶಿಕ್ಷಕರು ಮೂರನೇ ತರಗತಿ ಮಗುವಿನ ಮುಂದಲೆ ಕೂದಲು ಕತ್ತರಿಸಿ, ಮಗುವಿನ ಮೇಲೆ ಹಲ್ಲೆ ಮಾಡಿ, ಜಾತಿನಿಂದನೆ ಮಾಡಿ ಅವಮಾನಿಸಿರುವ ಘಟನೆ ಶಿವಮೊಗ್ಗದ ಜೈನ್ ಪಬ್ಲಿಕ್ ಶಾಲೆಯಲ್ಲಿ ನಡೆದಿದೆ.

ಜೈನ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಪ್ರಿಯಾ, ಪಿಇ ಶಿಕ್ಷಕ ಸಂತೋಷ್‌, ಸಿಬ್ಬಂದಿ ಶರತ್‌ ಸೇರಿದಂತೆ ವಿದ್ಯಾರ್ಥಿ ಯನ್ನು ತಮ್ಮ ಕಚೇರಿಗೆ ಕರೆದು, ನಿಮ್ಮಪ್ಪ, ಅಮ್ಮ ಇನ್ನೂ ಬಾಕಿ ಫೀಸ್‌ ಕಟ್ಟಿಲ್ಲ, ಫೋನ್‌ ಮಾಡಿದರೆ ಪೋನ್‌ ತೆಗೆಯುವುದಿಲ್ಲವೆಂದು ಸುಳ್ಳು ಹೇಳಿ ನನ್ನ ಮಗನಿಗೆ ದೈಹಿಕ ಹಲ್ಲೆಮಾಡಿ, ಮಗುವಿನ ಕೂದಲು ಕತ್ತರಿಸಿ ಅವಮಾನ ಮಾಡಿದ್ದಾರೆಂದು ಸಂತ್ರಸ್ತ ತಾಯಿ ಅವಲತ್ತುಕೊಂಡಿದ್ದಾರೆ.

ಮಗುವಿನ ತಾಯಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಜೈನ್ ಪಬ್ಲಿಕ್ ಶಾಲೆಯಲ್ಲಿ ನನ್ನ ಮಗ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಅವನ ಶಾಲೆ ಶುಲ್ಕ ₹40,000ವನ್ನು ಪಾವತಿಸಿದ್ದೇವೆ. ಆದರೂ ಇನ್ನು ₹5,000 ಬಾಕಿ ಹಣವನ್ನು ಕಟ್ಟಿರೆಂದು ಕರೆ ಮಾಡಿದ್ದರು. ₹40,000 ಪೂರ್ತಿ ಪಾವತಿಸಿದ್ದೇವೆ. ಮತ್ತೆ ಹಣ ಕಟ್ಟಲು ಹೇಳಿತ್ತಿದ್ದೀರಲ್ಲ. ನಮಗೆ ಒಂದುವಾರ ಕಾಲಾವಕಾಶ ಕೊಡಿ ಕಟ್ಟುತ್ತೇವೆಂದು ತಿಳಿಸಿದ್ದೆ. ಆದರೆ ಮಗು ಶಾಲೆಗೆ ಹೋದಾಗ ಕ್ಲಾಸ್ ರೂಂಗೆ ಹೋಗಲು ಬಿಡದೆ ದೈಹಿಕ ಶಿಕ್ಷಕ ಸಂತೋಷ್ ಮಗುವಿನ ಕಿವಿ, ಕೂದಲು ಹಿಡಿದು ದರದರ ಎಳೆದಾಡಿ ಎಳೆದುಕೊಂಡು ಪ್ರಿನ್ಸಿಪಲ್ ರೂಂಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲೇ ಇದ್ದ ಸಿಬ್ಬಂದಿ ಶರತ್ ಬಾಯಿಗೆ ಬಂದಂತೆ ಆವಾಚ್ಯ ಶಬ್ದಗಳಿಂದ ಬೈದು ಫೀಸ್ ಕಟ್ಟುವುದಕ್ಕೆ ಆಗದೇ ಇದ್ದ ಮೇಲೆ ಸ್ಕೂಲ್‌ಗೆ ಏತಕ್ಕೆ ಬರುತ್ತೀಯೋ ಎಂದು ಬೆನ್ನಿಗೆ ಗುದ್ದಿ ಕೆನ್ನೆಗೆ ಹೊಡೆದು, ಅವನ ಭುಜ ಹಿಡಿದು ಹಿಚುಕಿ ಹಿಂಸಿಸಿದ್ದಾರೆ” ಎಂದು ಆರೋಪಿಸಿದರು.

Advertisements

ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಸರ್ಕಾರಿ ರಜೆ ಇಲ್ಲದಿದ್ದರೂ ಸ್ವಯಂ ರಜೆ ಘೋಷಿಸಿಕೊಂಡ ಜಿಲ್ಲಾಡಳಿತ; ಸಾರ್ವಜನಿಕರ ಆಕ್ರೋಶ

“ಮಗು ಅಳುತ್ತಿರುವಾಗ ಪ್ರಿನ್ಸಿಪಲ್‌ ಪ್ರಿಯಾ, ʼನೀವು ಎಸ್‌ಸಿ/ಎಸ್‌ಟಿಯವರೇ ಇಷ್ಟು. ಎಷ್ಟುಸಾರಿ ಹೇಳಿದರೂ ಬುದ್ದಿಕಲಿಯುವುದಿಲ್ಲ. ನಿಮ್ಮಂತಹ ಜಾತಿಯವರನ್ನು ನಮ್ಮ ಶಾಲೆಗೆ ಸೇರಿಸಿಕೊಳ್ಳುವುದೇ ತಪ್ಪುʼ ಅಂತ ಎಲ್ಲ ಮಕ್ಕಳ ಎದುರು ಜಾತಿನಿಂದನೆ ಮಾಡಿ ಅವಮಾನಿಸಿ, ಎಲ್ಲರೆದುರು ಮಗುವಿನ ತಲೆ ಕೂದಲು ಕತ್ತರಿಸಿದ್ದಾರೆ” ಎಂದು ತಾಯಿ ನೋವು ತೋಡಿಕೊಂಡರು.

“ಮಗು ಸಂಜೆ 4-45ಕ್ಕೆ ಮನೆಗೆ ಅಳುತ್ತ ಬಂದಾಗ ವಿಚಾರಿದೆ. ಆಗ ಅವನು ಅವರ ಪೈಶಾಚಿಕ ಕೃತ್ಯವನ್ನು ಹೇಳಿದ್ದಾನೆ. ಮಕ್ಕಳಿಗೆ ಜಾತಿನಿಂದನೆ ಮಾಡುವ ಇಂಥ ಶಾಲೆಯ ಪರವಾನಗಿಯನ್ನು ರದ್ದುಮಾಡಬೇಕು. ನಮಗೆ ನ್ಯಾಯ ಕೊಡಿಸಬೇಕು. ಇಲ್ಲವಾದಲ್ಲಿ ಜೈನ್‌ ಶಾಲೆಯ ವಿರುದ್ಧ ತೀವ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X