ಉಡುಪಿ | ಬೋಟ್ ಮಾಲೀಕನ ಪಾತ್ರವಿಲ್ಲ, ಆದರೂ ಸಿಕ್ಕಿಸಿದ್ದಾರೆ- ದಯಾನಂದ್ ಸುವರ್ಣ

Date:

Advertisements

ಮಲ್ಪೆ ಬಂದರಿನ ನಿರ್ವಹಣೆಯ‌ನ್ನು ಸಂಘ ಸಂಸ್ಥೆಗೆ ಕೊಡಬೇಕು. ಸಂಘ ಸಂಸ್ಥೆಗಳ ಕೈಗೆ ನೀಡಿದರೆ ನಿಸ್ವಾರ್ಥ ಸೇವೆ ಮಾಡುತ್ತಾರೆ. ಖಾಸಗಿಯವರಿಗೆ ನೀಡುವುದರಿಂದ ಕೇವಲ ಲಾಭ ಮಾತ್ರ ನೋಡುತ್ತಾರೆ. ಮಲ್ಪೆ ಬಂದರಿನಲ್ಲಿ 30 ಸೆಕ್ಯುರಿಟಿ ಗಾರ್ಡ್ ಇರಬೇಕಿತ್ತು. ಆದರೆ ಇಲ್ಲ. ಸರಿಯಾದ ಸಿಸಿ ಕ್ಯಾಮರ ಕೂಡ ಇಲ್ಲ. ಪ್ರತಿದಿನ ಬೋಟ್ ಬ್ಯಾಟರಿ ಕಳ್ಳತನ, ಮೀನು ಕಳ್ಳತನ ನಡೆಯುತ್ತಲೇ ಇರುತ್ತದೆ. ಇದರ ಬಗ್ಗೆ ಹಲವಾರು ಬಾರಿ ಪೊಲೀಸ್ ಕೇಸುಗಳು ಕೂಡ ದಾಖಲಾಗಿದೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ದಯಾನಂದ್ ಸುವರ್ಣ ಹೇಳಿದರು.

1004779112

ಅವರು ಇಂದು ಮಲ್ಪೆ ಬಂದರಿನಲ್ಲಿ ನಡೆದ ಮಲ್ಪೆ ಬಂದರಿನ ಮೀನುಗಾರರ ಬಗ್ಗೆ ಆದ ಅಪಪ್ರಚಾರದ ವಿರುದ್ಧ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು‌.

ಮೊನ್ನೆ ನಡೆದ ಘಟನೆಯನ್ನು ಸಂಘವಾಗಲಿ, ಮೀನುಗಾರರಾಗಲಿ ಯಾರೂ ಕೂಡ ಸಮರ್ಥನೆ ಮಾಡುವುದಿಲ್ಲ. ಆ ಘಟನೆಯಲ್ಲಿ ಬೋಟಿನ ಮಾಲೀಕನ ಯಾವುದೇ ಪಾತ್ರವಿಲ್ಲ, ಆದರೂ ಇದರಲ್ಲಿ ಸಿಕ್ಕಿಸಿದ್ದಾರೆ.

Advertisements
1004779123

ಮೊದಲನೇ ದಿನ ರಾಜಿಪಂಚಾಯ್ತಿ ಮೂಲಕ ಮಲ್ಪೆ ಪೊಲೀಸ್ ಠಾಣೆಯಲ್ಲಿ ಇತ್ಯರ್ಥ ಆಗಿತ್ತು. ಆದರೆ ಮಾರನೇ ದಿನ ಯಾವುದೋ ಕಾಣದ ಕೈಗಳು ವೀಡಿಯೋವನ್ನು ವೈರಲ್ ಮಾಡಿ ಹರಿಯ ಬಿಟ್ಟರು. ಕೇವಲ ವೀಡಿಯೋ ನೋಡಿ ಕಾನೂನು ಕ್ರಮ ಮಾಡುವುದಾ? ಸಣ್ಣ ಪುಟ್ಟ ಕಾನೂನು ಕ್ರಮ ಆದರೆ ಓಕೆ, ಆದರೆ ಇದು ದೊಡ್ಡ ಮಟ್ಟದ ಕ್ರಮ ಸರಿಯಲ್ಲ. ವಿಡಿಯೋದಲ್ಲಿ ಒಂದು ಮುಖ ಮಾತ್ರ ನೋಡಬಹುದು. ಆದರೆ ನಿಜವಾಗಿ ಮಲ್ಪೆ ಬಂದರಿನಲ್ಲಿ ಇರುವ ಸೌಹಾರ್ದತೆ ಬಗ್ಗೆ ಯಾರು ತೋರಿಸುತ್ತಿಲ್ಲ.

ಮೊನ್ನೆ ಆದ ಘಟನೆಯಿಂದ ಮೀನುಗಾರರ ಸಮುದಾಯಕ್ಕೆ ಒಂದು ಕಳಂಕ ತರುವಂತೆ ಬಿಂಬಿಸಿದ್ದಾರೆ. ಇದು ನಮಗೆ ಬಹಳಷ್ಟು ಬೇಸರವಾಗಿದೆ ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X