ಬಳ್ಳಾರಿ | ಕೊಲೆ ಪ್ರಕರಣ; ಮೃತನ ಪತ್ನಿ, ಆಕೆಯ ಪ್ರಿಯಕರ ಸೇರಿ 11 ಮಂದಿ ಬಂಧನ

Date:

Advertisements

ಬಳ್ಳಾರಿ ನಗರದ ರಾಣಿತೋಟ ಪ್ರದೇಶದಲ್ಲಿ ವೆಂಕಟೇಶ್​ ಎಂಬುವವರ ಕೊಲೆ ಪ್ರಕರಣ ಸಂಬಂಧ ಆತನ ಪತ್ನಿ ಹಾಗೂ ಪತ್ನಿಯ ಪ್ರಿಯಕರ ಸೇರಿದಂತೆ 11 ಮಂದಿಯನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಬಳ್ಳಾರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ. ವಿ ಜೆ ಶೋಭಾರಾಣಿ ಮಾತನಾಡಿ, “ಏಪ್ರಿಲ್‌ 4ರಂದು ವೆಂಕಟೇಶ್​ ಪತ್ನಿ ನೀಲವೇಣಿ, ʼದುಷ್ಕರ್ಮಿಗಳು ನನ್ನ ಪತಿ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆʼ ಎಂದು ದೂರು ಕೊಟ್ಟಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖೆ ಕೈಗೊಂಡಾಗ ವೆಂಕಟೇಶ್​ ಕೊಲೆಯಲ್ಲಿ ಪತ್ನಿ ನೀಲವೇಣಿಯ ಕೈವಾಡ ಇರುವುದೂ ತಿಳಿದುಬಂದಿದೆ” ಎಂದರು.

“ನೀಲವೇಣಿ ಮತ್ತು ಈ ಪ್ರಕರಣದ ಎರಡನೇ ಆರೋಪಿ ಆನಂದ್​ ಸೇರಿ ಶಾಮಿಯಾನದ ವ್ಯವಹಾರ ನಡೆಸುತ್ತಿದ್ದರು. ಇಬ್ಬರ ನಡುವೆ ಆಪ್ತ ಸಂಬಂಧ ಇತ್ತು. ಹೀಗಾಗಿ ಇಬ್ಬರ ಮೇಲೆ ವೆಂಕಟೇಶ್​ಗೆ ಅನುಮಾನವಿದ್ದು, ಪದೇ ಪದೆ ಈ ವಿಚಾರವಾಗಿ ಜಗಳ ನಡೆಯುತ್ತಿತ್ತೆಂದು ಮಾಹಿತಿ ಬಂದಿದೆ. ಏಪ್ರಿಲ್‌ 3ರಂದು ವೆಂಕಟೇಶ್​ ಮನೆಯಲ್ಲಿ ಕಾರ್ಯಕ್ರಮವಿತ್ತು. ಅಂದು ಅವರು ಸಂಬಂಧಿಕರ ಮುಂದೆ ಈ ವಿಚಾರವಾಗಿ ಗಲಾಟೆ ಮಾಡಿದ್ದರು. ನಂತರ ನೀಲವೇಣಿ ಮತ್ತು ಆನಂದ್​ ಸೇರಿ ಕೃತ್ಯ ಎಸಗಿರುವುದಾಗಿ ತನಿಖೆಯಲ್ಲಿ ಗೊತ್ತಾಗಿದೆ” ಎಂದು ಹೇಳಿದರು.

Advertisements

ಈ ಸುದ್ದಿ ಓದಿದ್ದೀರಾ? ಬೀದರ್‌ | ಕಾನೂನು ಬಾಹಿರ ಚಟುವಟಿಕೆ : ಮಾರ್ಚ್ ತಿಂಗಳಲ್ಲಿ 189 ಪ್ರಕರಣ; 431 ಆರೋಪಿಗಳ ಬಂಧನ

“ಈ ಪ್ರಕರಣದಲ್ಲಿ ನೀಲವೇಣಿ, ಆನಂದ್, ಮೊಹಮ್ಮದ್​ ಗೌಸ್​, ಶಿವಶಂಕರ್​ ಅಲಿಯಾಸ್​ ಚಿರು, ಮೊಹಮ್ಮದ್​ ಶಾಯಿದ್​ ಅಲಿಯಾಸ್​ ಜಂಗ್ಲಿ, ದೂದ್ದ, ಮೊಹಮ್ಮದ್​ ಶರೀಫ್​, ಮೊಹಮ್ಮದ್​ ಆಸೀಫ್​ ಮತ್ತು ಮೊಹಮ್ಮದ್​ ಸೊಹೇಲ್​ ಎಂಬುವರನ್ನು ಬಂಧಿಸಲಾಗಿದ್ದು, ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ ಎರಡು ಬೈಕ್​, ಒಂದು ಸ್ಕೂಟರ್​, ಐದು ಮೊಬೈಲ್​, ಎರಡು ಮಚ್ಚು ಸೇರಿದಂತೆ ಕೃತ್ಯಕ್ಕೆ ಬಳಸಿದ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ” ಎಂದು ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

ತುಮಕೂರು | ಒಳ ಮೀಸಲಾತಿ : ಅಲೆಮಾರಿಗಳಿಗೆ ನ್ಯಾಯ ಸಮ್ಮತ ಪಾಲು ನೀಡಲು ಒತ್ತಾಯ

ಒಳ ಮೀಸಲಾತಿ ಕಲ್ಪಿಸುವಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿಯ 59 ಸಮುದಾಯಗಳಿಗೆ ಆಗಿರುವ...

ಗುಬ್ಬಿ | ರೈತನ ಕೃಷಿ ಚಟುವಟಿಕೆಗೆ ಜೇನು ಸಾಕಾಣಿಕೆ ವರದಾನ : ಪುಷ್ಪಲತಾ

ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಘಟವಾದ ಪರಾಗಸ್ಪರ್ಶ ಕ್ರಿಯೆಗೆ...

Download Eedina App Android / iOS

X