ಗುಬ್ಬಿ | ಸಿದ್ದರಾಮಯ್ಯ ಅಲ್ಲ ಟ್ಯಾಕ್ಸ್ ರಾಮಯ್ಯ : ತುರುವೇಕೆರೆ ಶಾಸಕ ಎಂಟಿಕೆ ವ್ಯಂಗ್ಯ

Date:

Advertisements

ರಾಜ್ಯದ ಜನರಿಗೆ ತೆರಿಗೆ ಮೂಲಕ ಬರೆ ನೀಡಿದ ಮುಖ್ಯಮಂತ್ರಿಗಳು ತಲಾ ವ್ಯಕ್ತಿಗೆ 25 ಕೋಟಿ ರೂಗಳ ಟ್ಯಾಕ್ಸ್ ಹಾಕಿದ್ದಾರೆ. ಅಭಿವೃದ್ದಿ ಕಾಣದ ಈ ಸರ್ಕಾರ ನಡೆಸುವವರು ಸಿದ್ದರಾಮಯ್ಯ ಅಲ್ಲ ಟ್ಯಾಕ್ಸ್ ರಾಮಯ್ಯ ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ವ್ಯಂಗ್ಯವಾಡಿದರು.

ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರದಲ್ಲಿ ಪರಿಶಿಷ್ಟ ಜಾತಿ ಮೀಸಲಿನ 50 ಲಕ್ಷ ಅನುದಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು 80 ರೂಪಾಯಿ ಹಾಲು, ಶೇಕಡಾ 40 ಬಸ್ ಚಾರ್ಜ್ ಏರಿಕೆ, ಶೇಕಡಾ 45 ಮೆಟ್ರೋ ಚಾರ್ಜ್ ಏರಿಕೆ ಮದ್ಯ ಮಾರಾಟಕ್ಕೆ ಮೂರು ಬಾರಿ ತೆರಿಗೆ, ಆಸ್ತಿ ತೆರಿಗೆ ಹೀಗೆ ಅನೇಕ ತೆರಿಗೆ ವಿಧಿಸಿ ಜನರಿಗೆ ಗಾಯದ ಮೇಲೆ ಬರೆ ಎಳೆದಿದ್ದಾರೆ ಎಂದು ಕಿಡಿಕಾರಿದರು.

ಹೆಣ್ಣು ಮಕ್ಕಳಿಗೆ ಭಾಗ್ಯದ ಹೆಸರಿನಲ್ಲಿ ನೀಡುವ ಎಲ್ಲಾ ಹಣವೂ ಪುರುಷರ ದುಡಿಮೆಯ ಹಣವಾಗಿದೆ. ತೆರಿಗೆ ಮೂಲಕ ನಮ್ಮ ದುಡ್ಡು ನಮಗೆ ನೀಡುವ ಕಲೆ ಕಾಂಗ್ರೆಸಿಗರಿಗೆ ಕರಗತವಾಗಿದೆ. ದುಡಿಯುವ ಗಂಡಸಿನ ಹಣವನ್ನು ಮನೆಯಲ್ಲಿನ ಹೆಣ್ಣು ಮಕ್ಕಳಿಗೆ ನೀಡುವ ಈ ಸರ್ಕಾರ ಭ್ರಷ್ಟ ಸರ್ಕಾರ ಎಂದೆನಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಹಿಂದುಳಿದ ಸಮಾಜವನ್ನು ಮುನ್ನಲೆಗೆ ತರುವ ಹಿನ್ನಲೆ 50 ಲಕ್ಷ ರೂಗಳ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮತ್ತೊಮ್ಮೆ 50 ಲಕ್ಷ ಅನುದಾನ ನೀಡಿ ದೊಡ್ಡ ಭವನ ನಿರ್ಮಾಣ ಮಾಡುವ ಉದ್ದೇಶ ಹೊದಿರುವುದಾಗಿ ತಿಳಿಸಿದರು.

Advertisements

ಕೇವಲ ಕಾಲಹರಣ ಮಾಡುವ ಈ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಲು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ತೆರಿಗೆ ರೂಪದಲ್ಲಿ ವಸೂಲಿ ಮಾಡಿ ಗ್ಯಾರಂಟಿ ಯೋಜನೆ ನಡೆಸುವುದು ಸರಿಯಲ್ಲ ಎಂದು ಕಿಡಿಕಾರಿದ ಅವರು ರೈತರಿಗೂ ಯಾವುದೇ ಅನುಕೂಲ ಮಾಡದೆ ರೈತ ವಿರೋಧಿ ಎಂದು ಸಹ ಗುರುತಿಸಿಕೊಂಡಿದೆ ಎಂದು ಟೀಕಿಸಿದ ಅವರು ಸರ್ಕಾರ ಸಾರ್ವಜನಿಕರಿಗೆ ನೀಡಿದ ಯಾವುದೇ ಭವನಗಳನ್ನು ನಿರ್ವಹಣೆ ಮಾಡುವ ಮನೋಭಾವ ಸ್ಥಳೀಯ ಜನರಲ್ಲಿ ಕಾಣಬೇಕು ಎಂದು ಸಲಹೆ ನೀಡಿದರು.

ದೇವರಾಜ್ ಅರಸು ಅವರ ಕಾಲದಿಂದ ನಾನು ನೋಡಿದ ಸರ್ಕಾರಗಳ ಪೈಕಿ ಈಗಿನ ಕಾಂಗ್ರೆಸ್ ಸರ್ಕಾರ ಕೆಟ್ಟ ಸರ್ಕಾರ ಎಂದು ಹೇಳಬಹುದಾಗಿದೆ. ಅಭಿವೃದ್ದಿ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ ಎರಡು ವರ್ಷ ಪೂರೈಸುತ್ತಿದ್ದಾರೆ. ಇಂದಿಗೂ ರಸ್ತೆ ಗುಂಡಿ ಮುಚ್ಚಲು ಬಿಡಿಗಾಸು ನೀಡಿಲ್ಲ ಎಂದು ಕುಟುಕಿದ ಅವರು ಸಿ.ಎಸ್.ಪುರಕ್ಕೆ ಪಾಲಿಟೆಕ್ನಿಕ್ ಕಾಲೇಜು, ತುರುವೇಕೆರೆಯಲ್ಲಿ ಕಾನೂನು ಶಿಕ್ಷಣ ಕಾಲೇಜು, ಉದ್ಯೋಗ ಸೃಷ್ಟಿಸುವ ಕೌಶಲ್ಯ ತರಬೇತಿ ಕಾಲೇಜು ಕೇಳಿದರೂ ಮಂಜೂರು ಮಾಡಿಲ್ಲ. ಸದನದಲ್ಲಿ ಚರ್ಚೆ ಮಾಡುವಾಗ ಮುಖ್ಯಮಂತ್ರಿಗಳೇ ಮಾತು ಕೊಟ್ಟು ಮರೆತಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ದುರ್ಗಮ್ಮ, ಸದಸ್ಯರಾದ ಈಶ್ವರಗೌಡ, ವಿಶಾಲಕ್ಷ್ಮಮ್ಮ, ಸಾವಿತ್ರಮ್ಮ, ರಘು, ಸ್ಥಳೀಯ ಮುಖಂಡರಾದ ನಂಜೇಗೌಡ, ನವೀನ್ ಕುಮಾರ್, ರಾಮು, ದಲಿತ ಮುಖಂಡರಾದ ಗಿರೀಶ್, ರಮೇಶ್, ರಂಗ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

ಬೆಳಗಾವಿ : ಗಾಂಜಾ ಮಾರಾಟ ಮಾಫಿಯಾ 9 ಮಂದಿ ಅರೆಸ್ಟ್ : ರೂ 30 ಲಕ್ಷ ಮೌಲ್ಯದ ಗಾಂಜಾ ವಶ

ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಜಾಲ ಬಯಲಾಗಿದ್ದು, ಬೆಳಗಾವಿ ಪೊಲೀಸರು ದೊಡ್ಡ...

ಬಾಗಲಕೋಟೆ | ಬಿಜೆಪಿ ಮತಗಳ್ಳತನ ವಿರುದ್ಧ ವ್ಯಾಪಕ ಹೋರಾಟ: ಮಾಜಿ ಸಚಿವ ವಿನಿಯಕುಮಾರ್

ಬಿಜೆಪಿ ಮತಗಳ್ಳತನ ನಡೆಸಿ ಚುನಾವಣೆ ಅಕ್ರಮ ಎಸಗಿರುವ ಬಗ್ಗೆ ವ್ಯಾಪಕವಾಗಿ ಹೋರಾಟ...

ಶಿವಮೊಗ್ಗ | KSRTC ನಗರ ಸಾರಿಗೆ ಬಸ್ ಮಲವಗೊಪ್ಪದ, ಚೆನ್ನಬಸವೇಶ್ವರ ದೇವಸ್ಥಾನ ಬಳಿ ಕಡ್ಡಾಯ ನಿಲುಗಡೆಗೆ ಆದೇಶ

ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ...

Download Eedina App Android / iOS

X