ಬೀದರ್‌ | ಅಕ್ಕ ಮಹಾದೇವಿ ವಚನ ಮನುಕುಲಕ್ಕೆ ದಾರಿದೀಪ : ಪ್ರಭುದೇವ ಸ್ವಾಮೀಜಿ

Date:

Advertisements

ವಚನಕಾರ್ತಿ ಅಕ್ಕ ಮಹಾದೇವಿ ವಚನಗಳು ಆಧ್ಯಾತ್ಮಿಕ ಆಗರವಾಗಿದ್ದು, ಮನುಕುಲಕ್ಕೆ ದಾರಿದೀಪವಾಗಿವೆ ಎಂದು ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.

ಲಿಂಗಾಯತ ಮಹಾ ಮಠದ ವತಿಯಿಂದ ಇಲ್ಲಿಯ ಬಸವಗಿರಿಯಲ್ಲಿ ಶನಿವಾರ ನಡೆದ ಅಕ್ಕ ಮಹಾದೇವಿ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿ, ʼಅಕ್ಕನ ಆದರ್ಶ ಮೈಗೂಡಿಸಿಕೊಂಡವರ ಬಾಳು ಬಂಗಾರವಾಗುತ್ತದೆʼ ಎಂದು ತಿಳಿಸಿದರು.

ʼಅಕ್ಕ ಉಡುತಡಿಯಲ್ಲಿ ಜನಿಸಿ, ಕೈ ಹಿಡಿಯಲು ಮುಂದಾದ ರಾಜ ಕೌಶಿಕನನ್ನು ಧಿಕ್ಕರಿಸಿ, ದೇವನೆ ಪತಿಯೆಂದು ಬಸವಣ್ಣನವರ ಕಲ್ಯಾಣಕ್ಕೆ ಆಗಮಿಸಿದ್ದು ಬಹು ರೋಚಕ ಹೆಜ್ಜೆ. ಅನೇಕ ಕಷ್ಟ-ನಷ್ಟಗಳನ್ನು ಅನುಭವಿಸಿ, ಲಿಂಗಾಂಗ ಸಾಮರಸ್ಯದ ಗುರಿ ಸಾಧಿಸಿದ್ದು ವಿಶೇಷ. ಪ್ರಭುದೇವರ ಪರೀಕ್ಷೆ ಎದುರಿಸಿ, ಸೈ ಎನಿಸಿಕೊಂಡು ಅನುಭವ ಮಂಟಪದ ಮಾಣಿಕ್ಯವಾಗಿ ಪ್ರಜ್ವಲಿಸಿದರು. ಶ್ರೀಶೈಲ ಸಮೀಪದ ಕದಳಿಯಲ್ಲಿ ಐಕ್ಯವಾದ ಅಕ್ಕ ವಿಶ್ವದ ಮೊದಲ ಕವಯತ್ರಿʼ ಎಂದು ಬಣ್ಣಿಸಿದರು.

Advertisements

ಶಿವಯೋಗ ಸಾಧಕರ ಕೂಟದಿಂದ ಆಯೋಜಿಸಿದ್ದ ಸಾಮೂಹಿಕ ಶಿವಯೋಗದಲ್ಲಿ ಪ್ರಾಣ ಲಿಂಗಾರ್ಚನೆ ಹೇಳಿಕೊಟ್ಟ ಸಾಹಿತಿ ರಮೇಶ ಮಠಪತಿ ಅವರು ಮಾತನಾಡಿ, ʼಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆಗೈದ ಜಗದಕ್ಕ ಅಮರಳಾದಳು. ಅಕ್ಕ ಆತ್ಮವಿಶ್ವಾಸ, ಧೈರ್ಯದ ಸಂಕೇತ. ಅಕ್ಕನ ಪ್ರತಿ ಉಸಿರು ಹೋರಾಟಮಯʼ ಎಂದು ಹೇಳಿದರು.

ʼ900 ವರ್ಷಗಳ ಹಿಂದೆ ಯೌವ್ವನದಲ್ಲಿ ಏಕಾಂಗಿಯಾಗಿ ಉಡುತಡಿಯಿಂದ ಕಲ್ಯಾಣಕ್ಕೆ, ಕಲ್ಯಾಣದಿಂದ ಕದಳಿ ವರೆಗೆ ಕಾಲ್ನಡಿಗೆಯಲ್ಲೇ ಸಂಚರಿಸಿದ್ದು ಅಸಾಮಾನ್ಯ. ಅಕ್ಕನಂಥ ಧೀರ ಮಹಿಳೆ ಇತಿಹಾಸದಲ್ಲಿ ಮತ್ತಾರನ್ನು ಕಾಣಲಾರೇವು. ಅಕ್ಕ ಮಹಾದೇವಿ ಕನ್ನಡ ನಾಡಿನವರೆಂಬುದು ಹೆಮ್ಮೆಯ ಸಂಗತಿ. ಅಕ್ಕನ ದರ್ಶನದಿಂದ ಜೀವನ ಪಾವನವಾಗುತ್ತದೆʼ ಎಂದು ತಿಳಿಸಿದರು.

ನೀಲಮ್ಮನ ಬಳಗದ ಸಹೋದರಿಯರು ಅಕ್ಕನ ತೊಟ್ಟಿಲು ಇಟ್ಟು, ಜೋಗುಳ ಹಾಡಿ ನಲಿದರು. ಪ್ರತಿ ಮನೆಯಲ್ಲಿ ಅಕ್ಕ ಮಹಾದೇವಿ ಜನಿಸಿ ಬರಲೆಂದು ಹರಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಕನ್ನಡ ಸಾಹಿತ್ಯ ಹೊರ ಜಗತ್ತಿಗೆ ಪಸರಿಸುವ ಅಗತ್ಯವಿದೆ : ವಿಕ್ರಮ ವಿಸಾಜಿ

ಪ್ರಮುಖರಾದ ಅಶೋಕ ಎಲಿ, ಮಾಣಿಕಪ್ಪ ಗೋರನಾಳೆ, ರಾಜಕುಮಾರ ಪಾಟೀಲ, ಚನ್ನಬಸಪ್ಪ ಹಂಗರಗಿ, ಅಣವೀರ ಕೊಡಂಬಲ, ಮಾರುತಿ ಪಾಟೀಲ, ಜಗನ್ನಾಥ ಚಿಮಕೋಡೆ, ವೈಜಿನಾಥ ಹುಣಸಗೇರಿ, ವೀರೇಶ್ ರೂಗನ್, ಅಭಿಷೇಕ ಮಠಪತಿ ಉಪಸ್ಥಿತರಿದ್ದರು.
ಪರುಷ ಕಟ್ಟೆಯ ಚನ್ನಬಸವಣ್ಣ ಪ್ರಾರ್ಥನೆ ನಡೆಸಿಕೊಟ್ಟರು. ಶ್ರೀದೇವಿ ಮಠಪತಿ, ನೀಲಮ್ಮ ರೂಗನ್, ಲಾವಣ್ಯ ಹಂಗರಗಿ, ಶಾಮಲಾ ಎಲಿ ಸುಶ್ರಾವ್ಯವಾಗಿ ವಚನ ಗಾಯನ ಮಾಡಿದರು. ಸಿ.ಎಸ್. ಗಣಾಚಾರಿ ಭಕ್ತಿ ದಾಸೋಹಗೈದರು. ಸಂಗೀತಾ ಗಣಚಾರಿ ಸ್ವಾಗತಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ : ಗಾಂಜಾ ಮಾರಾಟ ಮಾಫಿಯಾ 9 ಮಂದಿ ಅರೆಸ್ಟ್ : ರೂ 30 ಲಕ್ಷ ಮೌಲ್ಯದ ಗಾಂಜಾ ವಶ

ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಜಾಲ ಬಯಲಾಗಿದ್ದು, ಬೆಳಗಾವಿ ಪೊಲೀಸರು ದೊಡ್ಡ...

ಬಾಗಲಕೋಟೆ | ಬಿಜೆಪಿ ಮತಗಳ್ಳತನ ವಿರುದ್ಧ ವ್ಯಾಪಕ ಹೋರಾಟ: ಮಾಜಿ ಸಚಿವ ವಿನಿಯಕುಮಾರ್

ಬಿಜೆಪಿ ಮತಗಳ್ಳತನ ನಡೆಸಿ ಚುನಾವಣೆ ಅಕ್ರಮ ಎಸಗಿರುವ ಬಗ್ಗೆ ವ್ಯಾಪಕವಾಗಿ ಹೋರಾಟ...

ಶಿವಮೊಗ್ಗ | KSRTC ನಗರ ಸಾರಿಗೆ ಬಸ್ ಮಲವಗೊಪ್ಪದ, ಚೆನ್ನಬಸವೇಶ್ವರ ದೇವಸ್ಥಾನ ಬಳಿ ಕಡ್ಡಾಯ ನಿಲುಗಡೆಗೆ ಆದೇಶ

ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

Download Eedina App Android / iOS

X