ಶಿವಮೊಗ್ಗ | ಭದ್ರಾವತಿ ಗಾಂಜಾ ಪೆಡ್ಲೆರ್ ನಸ್ರು ಮೇಲೆ ಪೊಲೀಸರ ಫೈರಿಂಗ್

Date:

Advertisements

ಶಿವಮೊಗ್ಗ ಪೊಲೀಸರು ಭದ್ರಾವತಿ ತಾಲ್ಲೂಕುನಲ್ಲಿ ಮತ್ತೊಂದು ಪೊಲೀಸ್ ಫೈರ್ ನಡೆಸಿದ್ದು, ಆರೋಪಿಯೊಬನ್ನ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಂಜಾ ಪೆಡ್ಲರ್​ ನಜ್ರುಲ್ಲಾನನ್ನು ಹಿಡಿಯಲು ಹೋಗಿದ್ದ ಪಿಎಸ್​ಐ ಚಂದ್ರಶೇಖರ್ ಆ್ಯಂಡ್ ಟೀಂ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.

ನಸ್ರುಲ್ಲಾ ಅಲಿಯಾಸ್ ನಸ್ರು ಎಂಬ 21 ವರ್ಷದ ಪೆಡ್ಲರ್​ ಗುಂಡೇಟು ತಿಂದ ಆರೋಪಿ. ಈತನ ಭದ್ರಾವತಿಯ ಅನ್ವರ್ ಕಾಲೋನಿ ನಿವಾಸಿ. ಐದು ಕೇಸ್​ಗಳಲ್ಲಿ ಬೇಕಾಗಿದ್ದ ಈ ಆರೋಪಿಯನ್ನು ಹಿಡಿಯಲು ಹೋಗಿದ್ದ ಪೊಲೀಸರ ಮೇಲೆ ನಸ್ರು ಹಲ್ಲೆ ಮಾಡಿದ್ದಾನೆ. ಹೀಗಾಗಿ ಪೊಲೀಸರು ಕಾಲಿಗೆ ಗುಂಡೇಟು ನೀಡಿದ್ದಾರೆ.

ಇನ್ನೂ ನಿನ್ನೆ ದಿನ ಓಲ್ಡ್ ಟೌನ್​ ಪೊಲೀಸ್ ಠಾಣೆ ಪೊಲೀಸರು ಸುಮಾರು 1.4 ಕೆಜಿ ಗಾಂಜಾದ ಜೊತೆಗೆ ನಾಲ್ವರು ಆರೋಪಿಗಳನ್ನು ಹಿಡಿದಿದ್ದರು. ಈ ವೇಳೆ ನಸ್ರು ಎಸ್ಕೇಪ್ ಆಗಿದ್ದ. ಇವತ್ತು ಮುಂಜಾನೆ ಓಲ್ಡ್​ ಟೌನ್​ ಪೊಲೀಸರು, ನ್ಯೂಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಡಗಿದ್ದ ನಸ್ರುಗಾಗಿ ಟ್ರ್ಯಾಪ್​ ರೂಪಿಸಿದ್ದರು.

Advertisements

ಅದರಂತೆ ಆರೋಪಿಯನ್ನು ಇನ್ನೇನು ಹಿಡಿಯಬೇಕು ಎನ್ನುವಷ್ಟರಲ್ಲಿ ನಸ್ರು ಕಂಟ್ರಿಮೇಡ್ ಪಿಸ್ತೂಲ್​ ಹಾಗೂ ಡ್ರ್ಯಾಗರ್​ನಿಂದ ಪೊಲೀಸರ ಮೇಲೆ ಅಟ್ಯಾಕ್ ಮಾಡಿದ್ದಾನೆ. ಈ ವೇಳೆ ಮೌನೇಶ್ ಎಂಬ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಆರೋಪಿ ಕಂಟ್ರಿಮೇಡ್ ಪಿಸ್ತೂಲ್​ ಬಳಸುತ್ತಿದ್ದಂತೆ ಓಲ್ಡ್ ಟೌನ್​ ಪೊಲೀಸ್ ಠಾಣೆಯ ಪಿಎಸ್​ಐ ಚಂದ್ರಶೇಖರ್ ಬುಲೆಟ್ ಫೈರ್ ಮಾಡಿ ಆರೋಪಿಯನ್ನು ಹಿಡಿದಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ವಾಟ್ಸಾಪ್ ಸಂದೇಶದಲ್ಲಿ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಐಎಎಸ್, ಐಪಿಎಸ್ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ; ಅ.ಮು ಲಕ್ಷ್ಮೀನಾರಾಯಣ ಭರವಸೆ

ಕೆಎಎಸ್, ಐಎಎಸ್ ಮತ್ತು ಐಪಿಎಸ್ ಓದಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತ...

ಶಿವಮೊಗ್ಗ | 15 ವರ್ಷದ ಬಳಿಕ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಮಾರುತಿ ವರ್ಗಾವಣೆ!

ಶಿವಮೊಗ್ಗ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕಳೆದ 15...

ಸಿಂಧನೂರು | ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ – ವಿದ್ಯಾರ್ಥಿನಿಯರ ಪ್ರತಿಭಟನೆ

ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ...

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

Download Eedina App Android / iOS

X