ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ಸಾಗರ ತಾಲೂಕು ಸಂಚಾಲಕರಾಗಿ ಬೈರಾಪುರದ ಪ್ರೇಮ್ ಆಯ್ಕೆಯಾಗಿದ್ದಾರೆ.
ಸಾಗರದ ಪ್ರವಾಸಿ ಮಂದಿರದಲ್ಲಿ ದಸಂಸ ಸಮಿತಿಯ ಸರ್ವ ಸದಸ್ಯರ ಸಭೆ ಹಾಗೂ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜನ್ಮದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ತಾಲೂಕು ಸಮಿತಿ ರಚಿಸಿ, ಸಾಗರ ತಾಲೂಕು ನೂತನ ಪದಾಧಿಕಾರಿಯ ಆಯ್ಕೆ ಮಾಡಲಾಗಿದೆ.
ತಾಲೂಕು ಸಂಘಟನಾ ಸಂಚಾಲಕರನ್ನಾಗಿ ತ್ಯಾಗರ್ತಿಯಾ ಸಚಿನ್, ಕಾಗೋಡಿನ ಕೆಎನ್ ಸುಬ್ಬಪ್ಪ, ಕಾಗೋಡು ದಿಂಬದ ಸುಬ್ಬಪ್ಪ, ತಾಳಗುಪ್ಪದ ಲಕ್ಷ್ಮಣ, ಕಾಂಗ್ರೆಸ್ ಅಣ್ಣಪ್ಪ, ತ್ಯಾಗರ್ತಿಯಾ ಮಂಜು, ಕನ್ನೂರಿನ ಮಂಜಪ್ಪ ಹುರುಳಿಯ ನಾಗಪ್ಪ ಇವರುಗಳನ್ನು ಆಯ್ಕೆ ಮಾಡಲಾಗಿದೆ. ಖಜಾಂಚಿಯಾಗಿ ಗಾಂಧಿನಗರದ ಎಚ್. ಸಿ.ಮಂಜಪ್ಪ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ | ಪೊಲೀಸ್ ಇನ್ಸ್ಪೆಕ್ಟರಗಳ ವರ್ಗಾವಣೆ
ಸಮಿತಿಯ ಸದಸ್ಯರನ್ನಾಗಿ ಶೇಖರ್ ಬಾಳಗೋಡು ಅವರನ್ನು ಆಯ್ಕೆ ಮಾಡಲಾಯಿತು. ಶಿವಮೊಗ್ಗ ಜಿಲ್ಲಾ ಸಮಿತಿಯ ಸದಸ್ಯರನ್ನಾಗಿ ಬಂಗಾರಪ್ಪ ಶುಂಠಿಕೊಪ್ಪ ರವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಸಂಘಟನಾ ಸಂಚಾಲಕರನ್ನಾಗಿ ಗೌತಮಪುರದ ಬೂದ್ಯಪ್ಪ ರವರನ್ನು ಆಯ್ಕೆ ಮಾಡಲಾಗಿದೆ.