ಬೆಂಗಳೂರು ಸೇರಿದಂತೆ ರಾಜಧಾನಿಗಳಲ್ಲಿ ಕಚೇರಿಗೆ ಪ್ರಯಾಣಿಸಲು ಜನರು ವ್ಯಯಿಸುವ ಸಮಯವೆಷ್ಟು; ವರದಿ ಹೇಳುವುದೇನು?

Date:

Advertisements

ಬೆಂಗಳೂರು, ಹೈದರಾಬಾದ್ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್)ನಲ್ಲಿರುವ ಜಿಸಿಸಿಯಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ವೃತ್ತಿಪರರು ಕಚೇರಿಗೆ ಒಂದು ಮಾರ್ಗವಾಗಿ ಪ್ರಯಾಣಿಸಲೆಂದೇ 45 ರಿಂದ 55 ನಿಮಿಷಗಳವರೆಗೆ ಕಳೆಯುತ್ತಾರೆ ಎಂದು ಹೊಸ ವರದಿಯೊಂದು ತಿಳಿಸಿದೆ. ಇದರರ್ಥ ಒಬ್ಬ ಉದ್ಯೋಗಿ ತನ್ನ ಜೀವಿತಾವಧಿಯ ಸುಮಾರು ಶೇಕಡ 5ರಷ್ಟು ಸಮಯವನ್ನು ಕೆಲಸದ ಸ್ಥಳಕ್ಕೆ ಪ್ರಯಾಣಿಸಲು ಕಳೆಯುತ್ತಾರೆ.

2025ರ ಮೊದಲ ತ್ರೈಮಾಸಿಕದಲ್ಲಿ ಉದ್ಯೋಗಿಗಳ ಪ್ರಯಾಣದ ಬಗ್ಗೆ ಸಂಶೋಧನೆ ಮಾಡಿರುವ MoveInSync ವರದಿಯ ಪ್ರಕಾರ, ಬೆಂಗಳೂರಿನಲ್ಲಿ, ವೃತ್ತಿಪರರು ಸುಮಾರು 50 ನಿಮಿಷಗಳಲ್ಲಿ 15 ಕಿ.ಮೀ ಪ್ರಯಾಣಿಸುತ್ತಾರೆ. ಇತರೆ ಉದ್ಯೋಗಿಗಳು ಅಷ್ಟೇ ಪ್ರಯಾಣ ಮಾಡಲು 54 ನಿಮಿಷಗಳವರೆಗೆ ಕಳೆಯುತ್ತಾರೆ. ಐಟಿ ವೃತ್ತಿಪರರು ಸ್ವಲ್ಪ ವೇಗವಾಗಿ (ಮೆಟ್ರೋ ಮೊದಲಾದವುಗಳ ಬಳಕೆ) 46 ನಿಮಿಷಗಳು ಪ್ರಯಾಣಕ್ಕಾಗಿ ಕಳೆಯುತ್ತಾರೆ.

ಇದನ್ನು ಓದಿದ್ದೀರಾ? ಬೆಂಗಳೂರು ಬಂದ್ | ರಸ್ತೆಗಿಳಿಯದ ಖಾಸಗಿ ವಾಹನ; ಪ್ರಯಾಣಿಕರ ಪರದಾಟ

Advertisements

ಹೈದರಾಬಾದ್‌ನಲ್ಲಿ ವೃತ್ತಿಪರ ಕ್ಷೇತ್ರದ ಉದ್ಯೋಗಿಗಳು 45 ನಿಮಿಷಗಳಲ್ಲಿ ಸುಮಾರು 16 ಕಿ.ಮೀ ಪ್ರಯಾಣಿಸುತ್ತಾರೆ. ಆದರೆ ಇತರೆ ಉದ್ಯೋಗಿಗಳಿಗೆ ಅಷ್ಟೇ ದೂರ ಪ್ರಯಾಣಿಸಲು 54 ನಿಮಿಷಗಳು ಬೇಕಾಗುತ್ತದೆ.

ದೆಹಲಿ, ಗುರುರಾಮ್, ನೋಯ್ಡಾ ಮತ್ತು ಫರಿದಾಬಾದ್‌ನಲ್ಲಿ 22 ಕಿ.ಮೀ. ಪ್ರಯಾಣಕ್ಕೆ 55 ನಿಮಿಷಗಳವರೆಗೆ ಬೇಕಾಗುತ್ತದೆ. ಅದರಲ್ಲಿ ಆರೋಗ್ಯ ಕ್ಷೇತ್ರದ ವೃತ್ತಿಪರರು ಹೆಚ್ಚು ಕಾಲ ಪ್ರಯಾಣಕ್ಕಾಗಿ ಮುಡಿಪಾಗಿ ಇಡಬೇಕಾಗುತ್ತದೆ. ಆರೋಗ್ಯ ಕ್ಷೇತ್ರದವರಿಗೆ ತಮ್ಮ ಕಚೇರಿಯನ್ನು ತಲುಪಲು ಒಂದು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ.

ಬೆಂಗಳೂರು ಮತ್ತು ಹೈದರಾಬಾದ್ ವೃತ್ತಿಪರರು ಸಾಮಾನ್ಯವಾಗಿ ವಾರದಲ್ಲಿ ಎರಡರಿಂದ ಮೂರು ದಿನಗಳು ಪ್ರಯಾಣಿಸುತ್ತಾರೆ. ಆದರೆ ಎನ್‌ಸಿಆರ್‌ನಲ್ಲಿ ಉದ್ಯೋಗಿಗಳು ಆಗಾಗ್ಗೆ ಪ್ರಯಾಣಿಸುತ್ತಾರೆ. ಬುಧವಾರ ಮೂರು ನಗರಗಳಲ್ಲಿ ಅತ್ಯಧಿಕವಾಗಿ ಕಚೇರಿಗೆ ಪ್ರಯಾಣಿಸಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಸೋಮವಾರ ಮತ್ತು ಶುಕ್ರವಾರಗಳು ಕಡಿಮೆ ಜನಸಂದಣಿ ಇರುತ್ತದೆ ಎಂದು ವರದಿ ಹೇಳುತ್ತದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X