VIDEO | ಶಂಕರಾಚಾರ್ಯರ ಜಯಂತಿಯ ಭಾಷಣಕ್ಕೆ ಬ್ರಾಹ್ಮಣರ ಆಕ್ಷೇಪ; ಸುಮ್ಮನಿದ್ದ ಸಚಿವದ್ವಯರು!

Date:

Advertisements
"ನನಗೆ ಅವರ ಅವಹೇಳನಕಾರೀ ವರ್ತನೆಯಿಂದಾದ ಅವಮಾನಕ್ಕಿಂತಲೂ ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಕಾಪಾಡಬೇಕಾದ ಸರ್ಕಾರಿ ವ್ಯವಸ್ಥೆಯೇ ಇವರ ಗೂಂಡಾಗಿರಿಯನ್ನು ಕಂಡು ಮೌನವಾಗಿ ನಿರ್ವೀರ್ಯವಾಗಿ ಕೂತಿದ್ದುದು ವಿಷಾದಕರವೆನಿಸಿತು" ಎಂದು ಡಾ.ವಾಸುದೇವಮೂರ್ತಿ ಬೇಸರ ಹೊರಹಾಕಿದ್ದಾರೆ

ಮೇ 2ನೇ ತಾರೀಕಿನಂದು ಸರ್ಕಾರದ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಶಂಕರಾಚಾರ್ಯರ ಜಯಂತಿಯ ವೇಳೆ ಮುಖ್ಯ ಭಾಷಣಕಾರರಿಗೆ ಬ್ರಾಹ್ಮಣ ಮುಖಂಡರು ಅಡ್ಡಿಪಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶಂಕರಾಚಾರ್ಯರ ಕುರಿತು ಭಾಷಣ ಮಾಡಲು ಆಹ್ವಾನಿತರಾಗಿದ್ದ ಆದಿಚುಂಚನಗಿರಿ ವಿಶ್ವ ವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಟಿ.ಎನ್. ವಾಸುದೇವಮೂರ್ತಿಯವರ ಭಾಷಣಕ್ಕೆ ಅಡ್ಡಿಪಡಿಸಿ, ವೇದಿಕೆಯಿಂದ ಕೆಳಗಿಳಿಸಲಾಗಿದೆ. ಆದರೆ ವೇದಿಕೆಯಲ್ಲೇ ಆಸೀನರಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಘಟನೆಗೆ ಆಕ್ಷೇಪ ಎತ್ತದೆ ಮೂಕಪ್ರೇಕ್ಷಕರಾಗಿದ್ದಕ್ಕೆ ವಾಸುದೇವಮೂರ್ತಿಯವರು ಬೇಸರ ಹೊರಹಾಕಿದ್ದಾರೆ.

“ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಕೃತಿ ಇಲಾಖೆಯ ಸಚಿವ ಶ್ರೀ ಶಿವರಾಜ್‌ ತಂಗಡಗಿ, ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಚಿವ ದಿನೇಶ್‌ ಗುಂಡೂರಾವ್‌, ಇಲಾಖೆಯ ನಿರ್ದೇಶಕಿ ಶ್ರೀಮತಿ ಗಾಯತ್ರಿ ಮುಂತಾದವರು ಕಾರ್ಯಕ್ರಮ ಹಳಿ ತಪ್ಪುತ್ತಿದೆ ಎಂದು ಗೊತ್ತಿದ್ದೂ ಬೆದರು ಬೊಂಬೆಗಳಂತೆ ಮೌನವಾಗಿ ಕೂತಿದ್ದರು. ನನಗೆ ಅವರ ಅವಹೇಳನಕಾರೀ ವರ್ತನೆಯಿಂದಾದ ಅವಮಾನಕ್ಕಿಂತಲೂ ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಕಾಪಾಡಬೇಕಾದ ಸರ್ಕಾರಿ ವ್ಯವಸ್ಥೆಯೇ ಇವರ ಗೂಂಡಾಗಿರಿಯನ್ನು ಕಂಡು ಮೌನವಾಗಿ ನಿರ್ವೀರ್ಯವಾಗಿ ಕೂತಿದ್ದುದು ವಿಷಾದಕರವೆನಿಸಿತು” ಎಂದು ತಿಳಿಸಿದ್ದಾರೆ.

Advertisements

ಇದನ್ನೂ ಓದಿರಿ: “ಸೋನು ನಿಗಮ್ ನನ್ನು ತಕ್ಷಣ ಬಂಧಿಸಿ”- ಸರ್ಕಾರಕ್ಕೆ ಕರವೇ ನಾರಾಯಣ ಗೌಡ ಒತ್ತಾಯ

ಘಟನೆಯ ಕುರಿತು ‘ಈದಿನ.ಕಾಮ್’ ಜೊತೆಯಲ್ಲಿ ಡಾ. ವಾಸುದೇವಮೂರ್ತಿಯವರು ಪತ್ರವೊಂದನ್ನು ಹಂಚಿಕೊಂಡಿದ್ದು, ಸರ್ಕಾರದ ಪ್ರತಿನಿಧಿಗಳ ಮೌನವನ್ನು ಪ್ರಶ್ನಿಸಿದ್ದಾರೆ.

ವಾಸುದೇವಮೂರ್ತಿಯವರ ಪತ್ರ ಹೀಗಿದೆ:

ಮೇ 2ನೇ ತಾರೀಖು 2025ರಂದು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ʼಶ್ರೀ ಶಂಕರಾಚಾರ್ಯ ಜಯಂತಿಯ ಕಾರ್ಯಕ್ರಮ’ಕ್ಕೆ ಮುಖ್ಯ ಭಾಷಣಕಾರನನ್ನಾಗಿ ಇಲಾಖೆಯವರು ನನ್ನನ್ನು ಆಹ್ವಾನಿಸಿದ್ದರು. ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಷಣದ ಮಧ್ಯೆಯೇ ನನ್ನ ಮಾತುಗಳನ್ನು ಆಕ್ಷೇಪಿಸಿ ನನ್ನನ್ನು ವೇದಿಕೆಯಿಂದ ಕೆಳಗಿಳಿಸಲಾಯಿತು.

ಅಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ಜಾನಪದ ನೃತ್ಯ ಮತ್ತು ಸಂಗೀತ ಮೇಳದೊಂದಿಗೆ ಶಂಕರರ ರಥವನ್ನು ಮೆರವಣಿಗೆಯ ಮೂಲಕ ಹಡ್ಸನ್‌ ವೃತ್ತದಿಂದ ರವೀಂದ್ರ ಕಲಾಕ್ಷೇತ್ರದವರೆಗೆ ಎಳೆದು ತರಲಾಯಿತು. ಸಂಜೆ 6ಕ್ಕೆ ಕಾರ್ಯಕ್ರಮದಲ್ಲಿ ನನ್ನ ಭಾಷಣ ಪ್ರಾರಂಭವಾಯಿತು. ಶಂಕರರ ಅನುಯಾಯಿಗಳಾದ ಬ್ರಾಹ್ಮಣರೇ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.

ಇದನ್ನೂ ಓದಿರಿ: ಶಂಕರಾಚಾರ್ಯ ಸಮಾನತೆಯ ಪ್ರತಿಪಾದಕರೇ? ಜಸ್ಟಿಸ್ ಎನ್.ಕುಮಾರ್ ಮುಚ್ಚಿಟ್ಟ ಕಟು ಸತ್ಯಗಳೇನು?

ಭಾರತವನ್ನು ಬೌದ್ಧಿಕವಾಗಿ ಒಗ್ಗೂಡಿಸಿದ, ಭಾರತದ ಬೌದ್ಧಿಕತೆಗೆ ಒಂದು ಪ್ರಖರವಾದ ಹೊಳಪು ನೀಡಿದ ಶಂಕರರು ಈ ನಾಡಿನ ವಿವಿಧ ದಾರ್ಶನಿಕರೊಂದಿಗೆ, ವಿವಿಧ ದಾರ್ಶನಿಕ ಧಾರೆಗಳೊಂದಿಗೆ ಹೇಗೆ ಅನುಸಂಧಾನ ನಡೆಸಿದ್ದರು ಎಂದು ವಿವರಿಸುತ್ತಿದ್ದೆ. ಕಮ್ಯುನಿಸ್ಟ್‌ ನಾಯಕ ನಂಬೂದಿರಿಪಾಡ್‌ ಶಂಕರರ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ನಿರೂಪಿಸುತ್ತಿದ್ದೆ (ಅವರು ಶಂಕರರನ್ನು ಗ್ರೀಕ್‌ ತತ್ವಜ್ಞಾನಿ ಪ್ಲೇಟೋಗೆ ಹೋಲಿಸುತ್ತಾರೆ), ಬುದ್ಧನ ಸರ್ವಶೂನ್ಯವಾದಕ್ಕೂ ಶಂಕರರ ಬ್ರಹ್ಮವಿವರ್ತವಾದದ ಕಲ್ಪನೆಗೂ ಇರುವ ಸಂಬಂಧವನ್ನು ವಿಶ್ಲೇಷಿಸುತ್ತಿದ್ದೆ. ಮಧ್ವಾಚಾರ್ಯ ಹಾಗೂ ಶಂಕರಾಚಾರ್ಯರ ನಡುವೆ ಇದೆ ಎನ್ನಲಾಗಿರುವ ಭಿನ್ನಾಭಿಪ್ರಾಯ ಹೇಗೆ ಯಥಾರ್ಥವಾದುದಲ್ಲ ಎಂದು ವಿವರಿಸುತ್ತಿದ್ದೆ. ಹೀಗೆ ಸುಮಾರು ಹದಿನೈದು ನಿಮಿಷಗಳ ಕಾಲ ಮಾತನಾಡಿದ್ದೆ.

ಇದನ್ನೂ ಓದಿರಿ: ಸಮಾಜಘಾತಕ ಶಕ್ತಿಗಳನ್ನು ಮಟ್ಟಹಾಕಲು ವಿಶೇಷ ಪಡೆಯ ಅಗತ್ಯವಿದೆ: ಸಿಎಂ ಸಿದ್ದರಾಮಯ್ಯ

ಸಭೆಯಲ್ಲಿ ಹಾಜರಿದ್ದ ಶಂಕರರ ಅನುಯಾಯಿಗಳು ನನ್ನ ಮಾತುಗಳಿಂದ ಇದ್ದಕ್ಕಿದ್ದಂತೆ ವ್ಯಗ್ರರಾದರು. ತಮಗೆ ಪಥ್ಯವಲ್ಲದ ಬೇರೆ ಬೇರೆ ದಾರ್ಶನಿಕರನ್ನು, ಚಿಂತಕರನ್ನು ಉಲ್ಲೇಖಿಸಕೂಡದೆಂದು ಆಕ್ಷೇಪಿಸಿದರು. ಹಾಗೆ ನೋಡಿದರೆ ನಾನು ಶಂಕರರನ್ನು ಎಲ್ಲಿಯೂ ಟೀಕಿಸಿರಲಿಲ್ಲ, ಎಲ್ಲಿಯೂ ಅವರ ಹಿರಿಮೆಯನ್ನು ಅವಗಣನೆ ಮಾಡಿರಲಿಲ್ಲ (ಅದರ ವೀಡಿಯೋ ತುಣುಕನ್ನು ನಿಮಗೆ ಕಳಿಸಿದ್ದೇನೆ). ಆದರೆ ನನ್ನ ಭಾಷಣ ಶಂಕರರ ಭಜನೆ, ಹೊಗಳಿಕೆಗಳಿಗೆ ಮಾತ್ರ ಸೀಮಿತವಾಗಬೇಕು ಎಂಬುದು ಅವರ ಆಗ್ರಹವಾಗಿತ್ತು.

ಅವರ ಮನೆಯಲ್ಲೋ ಅಥವಾ ಮಠದಲ್ಲೋ ಅವರ ಅಪೇಕ್ಷೆಗೆ ತಕ್ಕಂತೆ ಮಾತನಾಡಬೇಕೆಂದು ಆಗ್ರಹಿಸಿದರೆ ಅದು ಯುಕ್ತವಾಗಬಹುದು. ಆದರೆ ಒಂದು ಸಾರ್ವಜನಿಕ ಸಭೆಯಲ್ಲಿ, ಅದೂ ಸರ್ಕಾರದ ಸಂಸ್ಕೃತಿ ಇಲಾಖೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರ ಹೀಗೆಯೇ ಮಾತನಾಡತಕ್ಕದ್ದು ಎಂದು ಆಗ್ರಹಿಸುವುದು ಸಭ್ಯತೆಯಲ್ಲ, ಸಂಸ್ಕೃತಿಯಲ್ಲವೆಂದು ನಾನು ಅವರಿಗೆ ತಿಳಿ ಹೇಳಿದೆ. ಆದರೆ ಆ ಗುಂಪಿನವರು ಯಾವ ಮಾತುಗಳನ್ನೂ ಕೇಳುವ ಮನಃಸ್ಥಿತಿಯಲ್ಲಿ ಇರಲಿಲ್ಲ. “ನೀನು ಶಂಕರರನ್ನು ಅವಮಾನಿಸುತ್ತಿರುವೆ; ಈ ಕ್ಷಣವೇ ವೇದಿಕೆಯಿಂದ ಕೆಳಗಿಳಿಯಬೇಕು” ಎಂದು ಕೂಗಾಡಲಾರಂಭಿಸಿದರು. ಮತ್ತೊಬ್ಬರ ಅಭಿಪ್ರಾಯಕ್ಕೆ ಸ್ಪಂದಿಸದ ಸಭೆಯಲ್ಲಿ ಮಾತು ಮುಂದುವರಿಸಿದರೆ ಅದು ಮೊಂಡುತನವಾಗುತ್ತದೆ ಎಂದು ಮನಗಂಡು ಅರ್ಧದಲ್ಲೇ ವೇದಿಕೆಯಿಂದ ಕೆಳಗಿಳಿದೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಕೃತಿ ಇಲಾಖೆಯ ಸಚಿವ ಶ್ರೀ ಶಿವರಾಜ್‌ ತಂಗಡಗಿ, ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಚಿವ ದಿನೇಶ್‌ ಗುಂಡೂರಾವ್‌, ಇಲಾಖೆಯ ನಿರ್ದೇಶಕಿ ಶ್ರೀಮತಿ ಗಾಯತ್ರಿ ಮುಂತಾದವರು ಕಾರ್ಯಕ್ರಮ ಹಳಿ ತಪ್ಪುತ್ತಿದೆ ಎಂದು ಗೊತ್ತಿದ್ದೂ ಬೆದರು ಬೊಂಬೆಗಳಂತೆ ಮೌನವಾಗಿ ಕೂತಿದ್ದರು. ನನಗೆ ಅವರ ಅವಹೇಳನಕಾರೀ ವರ್ತನೆಯಿಂದಾದ ಅವಮಾನಕ್ಕಿಂತಲೂ ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಕಾಪಾಡಬೇಕಾದ ಸರ್ಕಾರೀ ವ್ಯವಸ್ಥೆಯೇ ಇವರ ಗೂಂಡಾಗಿರಿಯನ್ನು ಕಂಡು ಮೌನವಾಗಿ ನಿರ್ವೀರ್ಯವಾಗಿ ಕೂತಿದ್ದುದು ವಿಷಾದಕರವೆನಿಸಿತು.

ಇದನ್ನೂ ಓದಿರಿ: ಮಂಗಳೂರು | ಸುಹಾಸ್‌ ಶೆಟ್ಟಿಯನ್ನು ರೌಡಿಶೀಟರ್‌ ಮಾಡಿದ್ದು ಬಿಜೆಪಿಯವರೇ: ವಿಪ ಸದಸ್ಯ ಮಂಜುನಾಥ್ ಭಂಡಾರಿ

ಇದು ನಿನ್ನೆಯ ಸಮಾರಂಭದಲ್ಲಿ ನನಗೆ ವೈಯಕ್ತಿಕವಾಗಿ ತೇಜೋವಧೆಯಾದ ಅಹಿತಕರ ಘಟನೆಯ ಪ್ರಶ್ನೆಯಲ್ಲ. ಇಂತಹ ಅನುಭವವಾದ ಮೇಲೆ ಮಾನ ಮರ್ಯಾದೆ ಇರುವವರು ಈ ಬಗೆಯ ಕಾರ್ಯಕ್ರಮಗಳಿಂದ ಎಂದೆಂದಿಗೂ ಅಂತರ ಕಾಯ್ದುಕೊಳ್ಳಬೇಕೆಂದು ತೀರ್ಮಾನಿಸಿಕೊಂಡು ನನ್ನಂತಹವರು ಸುಮ್ಮನಾಗಬಹುದು. ಆದರೆ ಸರ್ಕಾರಗಳು ಮತಕ್ಕಾಗಿ ಈ ತರಹದ ಜಯಂತಿಗಳಿಂದ ಪ್ರಜೆಗಳನ್ನು ಜಾತಿಕೂಪದೊಳಗೆ ಇನ್ನಷ್ಟು ಆಳಕ್ಕೆ ಮುಳುಗಿಸಿ ಕಟ್ಟಿಹಾಕುವುದು, ಮತಲಾಭಕ್ಕಾಗಿ ಪ್ರಜೆಗಳ ಅಸಭ್ಯ, ಅವಿವೇಕದ ವರ್ತನೆಗಳಿಗೆ ಪರೋಕ್ಷ ಬೆಂಬಲ ನೀಡುವುದು ಇವೆಲ್ಲ ಒಳ್ಳೆಯ ಬೆಳವಣಿಗೆಗಳಲ್ಲ. ಇಂತಹ ಕುತಂತ್ರಗಳು ಸಮಾಜದ ಸ್ವಾಸ್ಥ್ಯ ಹದಗೆಡುತ್ತದೆ ಮತ್ತು ಸರ್ಕಾರದ ನೈತಿಕತೆ ಅಧೋಗತಿಗೆ ತಲುಪುತ್ತದೆ.

ಪ್ರತಿವರ್ಷ ಮಹರ್ಷಿ ವಾಲ್ಮೀಕಿ, ಕನಕದಾಸ, ಬಸವಣ್ಣ, ಆದಿಶಂಕರಾಚಾರ್ಯ ಮುಂತಾದ ಮಹಾತ್ಮರ ಜಯಂತಿ, ಹುಟ್ಟುಹಬ್ಬಗಳನ್ನು ಆಚರಿಸುವ ಉಪಕ್ರಮವನ್ನು ಯಾರೂ ಆಕ್ಷೇಪಿಸುವುದಿಲ್ಲ. ಇಂತಹ ಜಯಂತಿಗಳನ್ನು ಖಾಸಗಿ ಸಂಸ್ಥೆಗಳು, ಮಠಮಾನ್ಯಗಳು, ಜಾತಿ ಸಂಘಟನೆಗಳು ಆಚರಿಸುವುದಕ್ಕೂ, ಆಳುವ ಸರ್ಕಾರ ಆಚರಿಸುವುದಕ್ಕೂ ಬಹಳ ದೊಡ್ಡ ವ್ಯತ್ಯಾಸವಿದೆ. ಜಾತಿ ಹಾಗು ಕೋಮು ಸಂಘಟನೆಗಳು ಈ ಐತಿಹಾಸಿಕ, ಪೌರಾಣಿಕ ವ್ಯಕ್ತಿಗಳನ್ನು ತಮ್ಮ ಜಾತಿ ಹಾಗು ಕೋಮಿಗೆ ಸೀಮಿತಗೊಳಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತವಾಗುವ ಸರ್ಕಾರಗಳು ಆಯೋಜಿಸುವ ಕಾರ್ಯಕ್ರಮಗಳಿಂದಾಗಿ ಇವರನ್ನು ಜಾತಿಯ ಪರಿಧಿಯಾಚೆಗೂ ನೋಡಲು ಸಾಧ್ಯವಾಗುತ್ತದೆ. ಇವರು ತಮ್ಮ ತಮ್ಮ ಜಾತಿಯ ಹೊರಗೂ ಮುಖ್ಯರಾಗಿದ್ದಾರೆ ಎಂದು ಮನಗಾಣಲು, ಇವರ ವಿಚಾರಗಳು ಎಲ್ಲ ಕೋಮಿನ ಜನಗಳ ಯೋಗಕ್ಷೇಮಕ್ಕೂ ಹೇಗೆ ಉಪಯುಕ್ತವಾಗುತ್ತದೆ ಎಂಬ ನಿಟ್ಟಿನಲ್ಲಿ ಚರ್ಚೆ ನಡೆಸಲು ಅವಕಾಶವಾಗುತ್ತದೆ. ಪ್ರತಿವರ್ಷ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಸ್ಕೃತಿ ಇಲಾಖೆಯ ಆಶಯ ಮತ್ತು ಬದ್ಧತೆ ಸಹ ಇದೇ ಆಗಿರತಕ್ಕದ್ದು.

-ಟಿ.ಎನ್. ವಾಸುದೇವಮೂರ್ತಿ

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

4 COMMENTS

  1. God..! We the society should really feel ashamed for the happening of such bad incidents.
    Dr vasudev murty is one of the unique writer of kannada literature. His study and knowledge about allama budha, Gaandhi, Shankara, Frederick nietzsche stands with an another level. He translated many english literature into kannada.
    Let’s come to the point.
    I have not seen a single bad thing about Shankara throughout his speech. I tell how vasudevmutry stands different than others..
    Of course a religion, a spiritual man, a devotee always have a good opinion about all daarshanikas.. No doubt in that..
    But vasudevmutry explained the greatness of Shankara by mentioning the opinion of Kerala communal. That matters. Actually the followers should feel happy for that.. He was about to explain the Madwa thought and u 4 people have stopped him. And made us to not listen his golden words..

  2. Haters..
    If u dont want to listen to such nice talks with wisdom, u go and listen to some hate speeches.. If u have a point, raise that on the stage. Discussions should be healthy.
    Stopping such a gentleman’s voice at a middle of show is not a good sign of great society.
    And dear politicians… U could have stopped this..
    I don’t know, what was running in your mind..
    We should respect people like Dr Vasudevmutry. For their knowledge and wisdom.
    It should never repeat. .

    ..

  3. Those who have no culture and samskara made the celebration of Shankara Jayanthi a mockery of the event.
    The government is made a laughing stock by the organisers as well as by those who prevented the chief guest while addressing the gathering.
    This is highly condemnable behaviour.
    The chief guest is learned and gentle personality.
    The government representatives are also kept dumb which is not appropriate.

  4. ಸಾಂವಿಧಾನಿಕ ಜಾತಿಯಿಂದ ಆದ ಬ್ರಾಹ್ಮಣರು ತಮ್ಮ ವಿಚಾರಧಾರೆಗಳಿಂದ ಒಮ್ಮತ ಮೂಡಿಸಬೇಕೆ ವಿನಃ ತಮ್ಮ ಬಗ್ಗೆ ಕಟ್ಟ ಅಭಿಪ್ರಾಯ ಮೂಡುವ ಹಾಗೆ ಆಡಬಾರದಾಗಿತ್ತು. ಇದು ಹಿಟ್ಲರ್ ನಡೆ ಎಂಬುದು ಸಾಬೀತಾಯ್ತ. ಒಂದುವೇಳೆ ಸಂವಿಧಾನ ಇಲ್ಲದೇ ಹೋಗಿದ್ದರೆ ಎಲ್ಲಾ ಕಛೇರಿಗಳಲ್ಲಿ ಅವರೇ ತುಂಬಿರುತ್ತಿದ್ದರು. ಇದು ಕಟು ಸತ್ಯ. ಇದನ್ನೆಲ್ಲ ನಾನು ಹೇಳಬಾರದು ಆದರೂ ಅನಿವಾರ್ಯ. ನನ್ನ ಸುತ್ತಲು ಅವರೇ ಇರೋದು.
    ಇರಲಿ ಅವರಿಗೆ ಬುದ್ಧಿ ಬರಲಿ.
    ದೇಶ ಉದ್ಧಾರ ಮಾಡುವ ಕಾರ್ಯದಲ್ಲಿ ಕೈಜೋಡಿಸಲಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

ಬಿಜೆಪಿ-ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ...

Download Eedina App Android / iOS

X