ದಲಿತರು ಬುದ್ಧನನ್ನು ಬಿಡುಗಡೆಯ ಬೆಳಕು ಎಂದು ನಂಬಿದ್ದಾರೆ ಎಂದು ದಲಿತ ನಾಯಕ ಪತ್ರಿಕೆಯ ಸಂಪಾದಕ ಬಸವರಾಜ ಕಟ್ಟಿಮನಿ ಹೇಳಿದರು.
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ʼಬುದ್ಧ ಪೂರ್ಣಿಮʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ದೀನದಲಿತರ ಬದುಕಿನ ಉದ್ಧಾರಕ್ಕಾಗಿ ಬುದ್ದ ತಮ್ಮ ಇಡೀ ಜೀವನವನ್ನು ಸಮರ್ಪಿಸಿಕೊಂಡಿದ್ದಾರೆ. ಇಂತಹ ವ್ಯಕ್ತಿಗಳು ತಮಗೆ ಸ್ಪೂರ್ತಿದಾಯಕ ಹಾಗೂ ಇಂದಿನ ಪೀಳಿಗೆಗೆ ಇವರ ಮೌಲ್ಯಗಳು ಮತ್ತು ಆದರ್ಶಗಳನ್ನು ಹೇಳಿಕೊಡುವ ಕೆಲಸವಾಗಬೇಕಿದೆ. ಬುದ್ಧ ದೇವರ ಅವತಾರವಲ್ಲ. ತಾತ್ವಿಕವಾಗಿ ನಮ್ಮೆಲ್ಲರಿಗಿಂತ ದೊಡ್ಡವನು ಎಂದರೂ ತಪ್ಪಾಗಲಾರದು” ಎಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಹೇಶ ಚಲವಾದಿ, ಬುದ್ಧನ ಮೂರು ತತ್ವಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ಮತ್ತು ಅವುಗಳನ್ನು ನಾವು ಮೈಗೂಡಿಸಿಕೊಳ್ಳುವ ಕೆಲಸವಾಗಬೇಕಿದೆ ಎಂದರು.
ಇದನ್ನೂ ಓದಿ: ವಿಜಯಪುರ | ಮೇ 14ರಂದು ರಾಜ್ಯಮಟ್ಟದ ಜನ ಹೋರಾಟ
ಈ ವೇಳೆ ತಾಳಿಕೋಟೆ ತಾಲೂಕಿನ ತಹಶೀಲ್ದಾರ್ ಡಾ. ವಿನಯ ಹೂಗಾರ, ದಲಿತ ಸಂಘರ್ಷ ಸಮಿತಿ ನಾಗವಾರ ಬಣದ ವಿಭಾಗೀಯ ಸಂಚಾಲಕ ದೇವೇಂದ್ರ ಹಾದಿಮನಿ, ದಲಿತ ವಿದ್ಯಾರ್ಥಿ ಒಕ್ಕೂಟ ಜಿಲ್ಲಾ ಸಂಚಾಲಕ ನಾಗೇಶ ಕಟ್ಟಿಮನಿ, ಅಶೋಕ ಪಡೆಕನವರ, ಸಿದ್ದಪ್ಪ ಕೊನ್ನೂರು, ಬಸವರಾಜ ತಳವಾರ, ಶಾಂತಪ್ಪ ಕೊಡಗನೂರ, ಸಂಜೀವಕುಮಾರ ಕಟ್ಟಿಮನಿ, ಮಾನವ ಬಂದುತ್ವ ವೇದಿಕೆಯ ತಾಲೂಕು ಮುಖಂಡ ಕಾಶಿನಾಥ ಕಟ್ಟಿಮನಿ, ಬಸು ಕಟ್ಟಿಮನಿ, ಬಿ ಆರ್ ಸಿ ರಾಜು ವಿಜಯಪುರ, ಅಂಬೇಡ್ಕರ್ ಸೇನೆ ತಾಲೂಕು ಅಧ್ಯಕ್ಷ ಗೋಪಾಲ ಕಟ್ಟಿಮನಿ ಹಾಗೂ ಸಿದ್ದಪ್ಪ ಬಸರಿಕಟ್ಟಿ ಇದ್ದರು.