ಲಿಂಗಸೂಗೂರು ತಾಲ್ಲೂಕು ನಾಗಲಾಪುರ ಗ್ರಾಮದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆರು ದಿನಗಳಿಂದ ಕೆಲಸಕ್ಕೆ ಗೈರು ಹಾಜರಾಗಿದ್ದು ಅಬಿವೃದ್ಧಿ ಕಾರ್ಯಗಳು ಕುಂಠಿತ ಗೊಂಡಿವೆ ಎಂದು ಗ್ರಾಮಸ್ಥರು ಪಂಚಾಯತಗೆ ಮುತ್ತಿಗೆ ಹಾಕಿದರು.
ಗ್ರಾಮಸ್ಥ ಮಾತನಾಡಿ ,ಮೇ 14 ರಿಂದ ಪಿಡಿಒ ಕಚೇರಿಗೆ ಬಂದಿಲ್ಲ.ಅನಧಿಕೃತವಾಗಿ ವಾರಗಳಿಂದ ಗೈರುಹಾಜರಾಗಿದ್ದು ಅಭಿವೃದ್ಧಿ ಕುಡಿಯುವ ನೀರು ಪೂರೈಕೆ ಅಸ್ತವ್ಯಸ್ತಗೊಂಡಿದೆ. ನೈರ್ಮಲ್ಯ ವ್ಯವಸ್ಥೆ ಹದಗೆಟ್ಟಿದೆ, ಬೀದಿದೀಪಗಳೂ ಇಲ್ಲ. ಜನರಿಗೆ ಉದ್ಯೋಗ ಇಲ್ಲ ಎಂದು ಆರೋಪಿಸಿದರು.
ಪಿಡಿಒ ಅವರನ್ನು ಕೇಳಿದರೆ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಆರೋಪಿಸಿದ ಅವರು, ಕಚೇರಿಗೆ ಬಾರದೆ ಗೈರು ಹಾಜರಾಗಿದ್ದರೂ ಪಿಡಿಒ ಮನೆಯಿಂದ ದಾಖಲೆಗಳಿಗೆ ಸಹಿ ಮಾಡಿ ಕೊಡುತ್ತಿದ್ದಾರೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು |ಸಿಡಿಲು ಬಡಿದು ಕುರಿಗಾಹಿ ಸಾವು
ಉದ್ಯೋಗ ಖಾತ್ರಿ ಕೆಲಸ ಕೇಳಿದರೆ ನನಗೂ ನರೇಗಾ ಕೆಲಸಕ್ಕೂ ಸಂಬಂಧವಿಲ್ಲ,ನಾನು ಹೇಳಿದಂತೆ ಕೇಳಬೇಕು ನೀವು ಹೇಳಿದಂತೆ ನಾನು ಕೇಳಲ್ಲ ಎಂದು ಉಡಾಫೆ ಉತ್ತರ ನೀಡುತ್ತಾರೆ.ರಾಜಕೀಯ ಹಿಂಬಾಲಕರನ್ನು ಬಳಸಿಕೊಂಡು ರೈತರ, ಕೂಲಿ ಕಾರ್ಮಿಕರ ಮೇಲೆ ದಬ್ಬಾಳಿಕೆ ಮಾಡುವ ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆರೋಪಿಸಿದರು.
