‘ಮಾನಸಿಕ ರೋಗಗಳಲ್ಲಿ ಸ್ಕಿಜೋಫ್ರೇನಿಯಾ ವಿಭಿನ್ನವಾದ ಖಾಯಿಲೆಯಾಗಿದ್ದು, ಸಕಾಲದಲ್ಲಿ ಗುರುತಿಸಿ ಚಿಕಿತ್ಸೆ ಪಡೆದಲ್ಲಿ ಯಾವುದೇ ತೊಂದರೆ ಇಲ್ಲ’ ಎಂದು ಡಾ ಭಾರತಿ ತಿಳಿಸಿದರು.
ಬಳ್ಳಾರಿ ತಾಲೂಕಿನ ಮೋಕ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ಕಿಜೋಫ್ರೇನಿಯಾ ದಿನದ ಆಂಗವಾಗಿ ಸಸಿಗೆ ನೀರು ಎರೆಯುವ ಮೂಲಕ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾಡಿದರು.
ಅರವಳಿಕೆ ತಜ್ಞ ವೈದ್ಯ ಡಾ ನಿತೀಶ್ ಕುಮಾರ್ ಮಾತನಾಡಿ, “ಸ್ಕಿಜೋಫ್ರೇನಿಯಾ ಇದು ಮಾನಸಿಕ ಖಾಯಿಲೆಯಾಗಿದೆ” ಎಂದ ಅವರು ಮಲ್ಟಿ ಪರ್ಸನಾಲಿಟಿ ಡಿಸೋರ್ಡರ್ ಹಾಗೂ ಇತರ ರೋಗ ಲಕ್ಷಣಗಳ ಬಗ್ಗೆ ತಿಳಿಸಿದರು.
ಮಕ್ಕಳ ತಜ್ಞ ವೈದ್ಯೆ ಡಾ ರೂಪ ಮಾತನಾಡಿ, “ಸ್ಕಿಜೋಫ್ರೇನಿಯಾ ಖಾಯಿಲೆಯು ಸಾಮಾನ್ಯವಾಗಿ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಚಿಕಿತ್ಸೆ ಹಾಗೂ ಆಪ್ತಸಮಾಲೋಚನೆ ಜತೆಗೆ ಕುಟುಂಬಸ್ಥರ ಸಾಕಾರದಿಂದ ಸಂಪೂರ್ಣವಾಗಿ ಗುಣ ಹೊಂದಬಹುದು” ಎಂದರು.
ಇದನ್ನೂ ಓದಿದ್ದೀರಾ? ಬಳ್ಳಾರಿ | ಸ್ವತಂತ್ರ ಭಾರತಕ್ಕೆ ನೆಹರೂ ಕೊಡುಗೆ ಅಪಾರವಾದದ್ದು: ಕೆ ಇ ಚಿದಾನಂದಪ್ಪ
ದಂತ ವೈದ್ಯರಾದ ಡಾ ಅರ್ಜುಮುನ್ನಿಸಾ, ಮೋಕಾ ಕ್ಷೇತ್ರ ಅರೋಗ್ಯ ಶಿಕ್ಷಣ ಅಧಿಕಾರಿ ಖುರ್ಶಿದ್ ಬೇಗಮ್, ಸಂತೋಷ್ ಕುಮಾರ್, ನರ್ಸಿಂಗ್ ಅಧಿಕಾರಿ ಎಂ ಉಷಾರಾಣಿ, ಹಿರಿಯ ಅರೋಗ್ಯ ನಿರೀಕ್ಷಣಾ ಅಧಿಕಾರಿ ಬಸವರಾಜ್, ಸಮುದಾಯ ಅರೋಗ್ಯ ಅಧಿಕಾರಿ ತ್ರಿಪುನ್ ಕುಮಾರ್ ಹಾಗೂ ಆಸ್ಪತ್ರೆ ವಿವಿಧ ವೃಂದ ಸಿಬ್ಬಂದಿ ಸೇರಿದಂತೆ ಗ್ರಾಮದ ಸಾರ್ವಜನಿಕರು ಇದ್ದರು.