ಗದಗ | ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಾಮೇನಹಳ್ಳಿ ಶಾಲೆಯಲ್ಲಿ ಪರಿಸರ ವಚನ ವಾಚನ ಗೋಷ್ಠಿ

Date:

Advertisements

“ಮಕ್ಕಳಲ್ಲಿ ಪರಿಸರ ಕುರಿತು‌ ಅರಿವು ಮೂಡಿಸದಿದ್ದರೆ ಭವಿಷ್ಯದಲ್ಲಿ ಉತ್ತಮ ಪರಿಸರ ನಿರೀಕ್ಷಿಸಲು ಸಾಧ್ಯವಿಲ್ಲ.  ಹಸಿರು ನಮ್ಮೆಲ್ಲರ ಉಸಿರಾಗಬೇಕು. ಶಾಲೆ, ಕಚೇರಿಗಳು, ಸಾರ್ವಜನಿಕ ಸ್ಥಳಗಳಲ್ಲಿ  ಅವಕಾಶವಿರುವಲ್ಲೆಲ್ಲ ಸರಿಗಳನ್ನು ನೆಟ್ಟು ಪೋಷಿಸಿ ಬೆಳೆಸಬೇಕು ಎಂದು” ಕ್ಷೇತ್ರಶಿಕ್ಷಣಾಧಿಕಾರಿ ಎಫ್.ಎಂ. ಫಡ್ನೇಸಿ ‌ಹೇಳಿದರು.

ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮೇನಹಳ್ಳಿಯ  ಸರ್, ಜಗದೀಶಚಂದ್ರ ಭೋಸ್ ಇಕೋಕ್ಲಬ್ ವತಿಯಿಂದ  ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ  ‘ಪರಿಸರ ವಚನ ವಾಚನಗೋಷ್ಟಿ’ಯನ್ನು ಉದ್ಘಾಟಿಸಿ ಮಾತನಾಡಿದರು. 

“ಪರಿಸರ ಪ್ರೇಮಿ ಸಿ.ಎಸ್ ಅರಸನಾಳ ಅವರ ರಚನೆಯ ‘ಹಸಿರಿಲ್ಲದೆ ಉಸಿರಿಲ್ಲ’ ಪರಿಸರ ವಚನಗಳ ಕೃತಿಯಿಂದ ಆಯ್ದ ವಚನಗಳನ್ನು ವಾಚಿಸುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಜಾಗೃತಗೊಳಿಸುತ್ತಿರುವುದು ಸ್ತುತ್ಯಾರ್ಹ ಕಾರ್ಯವಾಗಿದ್ದು ಮಕ್ಕಳು ವಚನಗಳಲ್ಲಿ ಪ್ರಸ್ತಾಪಿಸಿದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆಚರಣೆಯಲ್ಲಿತರಬೇಕು” ಎಂದರು.

Advertisements

ಮುಖ್ಯ ಅತಿಥಿಗಳಾಗಿ ವಚನಕಾರ ಸಿ.ಎಸ್. ಅರಸನಾಳ ಮಾತನಾಡಿ, “ಕಪ್ಪತಗುಡ್ಡ ನಮ್ಮ ಅತ್ಯತ್ತಮ ಪರಿಸರ ತಾಣ. ಈ ತಾಣವನ್ನು ರಕ್ಷಿಸುವತ್ತ ಸದಾ ಜಾಗೃತಿವಹಿಸುವುದು ಅಗತ್ಯ” ಎಂದರು.

“ಈ ವರ್ಷದ ಜಾಗತಿಕ ಘೋಷವಾಕ್ಯದಂತೆ ಸಾಕಷ್ಟು ಅರಣ್ಯ ಬೆಳೆಸಬೇಕು ಹಾಗೂ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಜಾಗೃತಿವಹಿಸಿ ಬಳಕೆಯನ್ನು ಕಡಿಮೆ ಮಾಡಬೇಕು” ಎಂದರು.

ಪ್ಲಾಸ್ಟಿಕ್ ಬಳಕೆಯಿಂದ ಆಗುವ ಅವಗಡಗಳ ಕುರಿತು, ಬಿಸಿಯಾದ ಆಹಾರವನ್ನು ಪ್ಲಾಸ್ಟಿಕ್ ನಲ್ಲಿ ಹಾಕಿ ಬಳಸದಿರುವ, ಪ್ಲಾಸ್ಟಿಕ್ ಸುಡದಿರುವ ಕುರಿತು ಹಲವು ದೃಷ್ಟಾಂತಗಳೊಂದಿಗೆ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿದರು. 

ಪ್ಲಾಸ್ಟಿಕ್ಚೀಲಗಳ ಬದಲು ಬಟ್ಟೆ ಚೀಲ ಬಳಸುವುದು, ಹೊಟೆಲ್ ನಿಂದ ಪಾರ್ಸಲ್ ತರುವಾಗ ಮನೆಯಿಂದ ಡಬ್ಬ ಒಯ್ಯುವ ಕುರಿತು ಸಲಹೆ ನೀಡಿದರು. ತಾವು ಪರಿಸರದ ಕುರಿತು ಬರೆದ ವಚನಗಳನ್ನು ವಾಚಿಸಿ, ಮಕ್ಕಳು ವಾಚಿಸಿದುದರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. 

ಇನ್ನೋರ್ವ ಅತಿಥಿ ಕ್ಷೇತ್ರಸಂಪನ್ಮೂಲ ಕೇಂದ್ರದ  ಸಮನ್ವಯಾಧಿಕಾರಿ ಗಂಗಾಧರ ಅಣ್ಣಿಗೇರಿ ಮಾತನಾಡಿ, “ಮಕ್ಕಳು ಪರಿಸರದ ಕತೆ, ಕವಿತೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ನಾಡಿನ ಹೆಸರಾಂತ ಕವಿಗಳೆಲ್ಲ ಪ್ರಕೃತಿ ಪರಿಸರದ ಕುರಿತು ಕಾವ್ಯ ಕಟ್ಟಿದ್ದಾರೆ, ಕಥೆ ಬರೆದಿದ್ದಾರೆ. ಇಂತ ಸಾಹಿತ್ಯ ಓದಿನೊಂದಿಗೆ ಪರಿಸರ ಸ್ನೇಹಿಯಾಗಿ ಬೆಳೆಯುವಂತೆ ಶಾಲೆಯಲ್ಲಿ ಮಕ್ಕಳಿಗೆ ಮುಕ್ತ ವಾತಾವರಣ ಕಲ್ಪಿಸಿಕೊಟ್ಟಿರುವುದು ಮಕ್ಕಲಿಗೆ  ಸ್ವಯಂ ಕಲಿಕೆಗೆ ದಾರಿಮಾಡಿಕೊಡುತ್ತದೆ” ಎಂದರು. 

ಈ ಸುದ್ದಿ ಓದಿದ್ದೀರಾ? ಧಾರವಾಡ | ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ; 5 ವರ್ಷದ ಬಾಲಕ ಸೇರಿ ಇಬ್ಬರ ಸಾವು

ವಿದ್ಯಾರ್ಥಿಗಳಾದ ಶ್ರೇಯಾ, ವಿಜಯಾ, ಶಶಿಧರ, ಮಮತಾ, ಅಮೃತಾ, ಯಲ್ಲಮ್ಮ, ಭರತ, ಸುಧಾ, ನಂದಿತಾ, ಶೃತಿ, ಕಾವೆರಿ, ಕುಮಾರಸ್ವಾಮಿ, ಕೊಟ್ರೆಶ್ ಮೊದಲಾದವರು  ಸಿ.ಎಸ್. ಅರಸನಾಳ ಅವರ ಪರಿಸರದ ವಚನಗಳನ್ನು ವಾಚಿಸಿದರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಮಹೇಶ ಬಾಗಳಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಮುಖ್ಯೋಪಾಧ್ಯಾಯ ಡಾ. ನಿಂಗು ಸೊಲಗಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿ.ಎಚ್. ಹಲವಾಗಲಿ, ಶಿವಲೀಲಾ ಅಬ್ಬಿಗೇರಿ ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ಪಿ.ಆರ್. ಗಾಡದ ಸ್ವಾಗತಿಸಿದರು. ಪಿ.ಎಂ.ಲಾಂಡೆ  ಕಾರ್ಯಕ್ರಮ ನಿರೂಪಿಸಿದರು. ಎಂ.ಆರ್. ಗುಗ್ಗರಿ ವಂದಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X