ಈ ದಿನ ಕವಿತೆ | ಮಣಿಪುರಕ್ಕೆ

Date:

Advertisements

ಸತ್ಯವದು
ಚಕ್ರಾಧಿಪತಿಯ ಹೊಸ ದಿರಿಸು ಧರಿಸಿದಡೆ
ಬೀದಿಯಲಿ ಬೆತ್ತಲೆಯ ಮೆರವಣಿಗೆ
ದಿರಿಸೇ ನಾಗರೀಕತೆಯ ಮೊದಲೆಜ್ಜೆ
ಬಿಡುಬೀಸಿನ ಹಿನ್ನಡೆ

ಪಂದ್ಯವಾಗದೆ ಜಟ್ಟಿ ಕಾಳಗ
ವಿಜಯ ಸದಾ ಒಂದೆಡೆ

ಹರಾಜಾದಳು ನಿತ್ಯ ಆಕೆ
ಬಂಡವಾಳಶಾಹಿಯ ತೆಕ್ಕೆಗೆ
ಅಂಗಾಂಗ ಅಂಶ ಮರುನಾಮಕರಣ
ಗಿಣಿದನಿಯ ಒಡತಿಯಾಕೆ
ಕಾಶ್ಮೀರದಲ್ಲವಳ ಸ್ಪರ್ಶಿಸಿ
ಸಮ್ಮತಿಯ ಆಯ್ಕೆಯೇ ಅವಳಿಗಿಲ್ಲ.

Advertisements

ವಿವಸ್ತ್ರಾವಸ್ಥೆಯ ಆಕ್ರಂದನ
ತುಂಡು ಬಟ್ಟೆಯೇ ವಿಶಾಲ ಅಂಬರ
ಕೃಷ್ಣ ಚೆಲ್ಲಿದ್ದಾನೆ ತುಟಿ ಕೊಂಕಿಸಿ ನಗೆಯ

ಕಾಳಗಗಳೆಲ್ಲ ಕಪೋಲ ಕಲ್ಪಿತ ಜಿಹಾದ್ ನೊಡನೆ
ಘೋರಯುದ್ಧಗಳೆಲ್ಲ ಮರೆಯಾಗಿವೆ ಮಾತಿನ ಮರೆಯ ಓಘದಲ್ಲಿ:
ಬೇಟಿ ಬಚಾವೋ ಬೇಟಿ ಪಡೋ
ಬೇಟಿ ಕೋ ಬಚಾವೋ ಬೇಟೆ ಕೋ ಪಡಾವೋ!
ಜೀವಕೋಶಗಳವು ತಡೆಯಿಲ್ಲದೆ ದೇಹವೆಲ್ಲವ ಆಕ್ರಮಿಸಿ
ಕ್ಯಾನ್ಸರ್ ಪದನಾಮ ಪಡೆಯಲೊಲ್ಲ

ಮಕ್ಕಳಿವರಮ್ಮ ವಿನಾಶ ಪುತ್ರರು
ಮಾತೆಯ ನಗ್ನ ಮೆರವಣಿಗೆಗಾರರು

ಭಾರತಮಾತೆ

ವಸಾಹತುಶಾಹಿ ದೊರೆ ಅತ್ಯಾಚಾರಿ
ಪುತ್ರರಾದರೆ….?

ಇಂಗ್ಲಿಷ್ ಮೂಲ: Rukhaya. M. K.
ಅನುವಾದ:ರಾಜಲಕ್ಷ್ಮೀ.ಎನ್.ಕೆ, ಮಂಗಳೂರು

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

Download Eedina App Android / iOS

X