ಶಿವಮೊಗ್ಗ ರೌಂಡ್ ಟೇಬಲ್, ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್ ಮತ್ತು ಮಲ್ನಾಡ್ ಮಾಸ್ಟರ್ಸ್ ವತಿಯಿಂದ ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ‘ನೈಟ್ಸ್ ಇನ್ ಖಾಕಿ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ 12 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಈ ಸಂದರ್ಭದಲ್ಲಿ ಗೌರವಿಸಿ ಅಭಿನಂದಿಸಲಾಯಿತು.

ಸನ್ಮಾನಿತರ ವಿವರ ಸಂತೋಷ್ ಆರ್, ಸಿಪಿಸಿ, ಮಹಿಳಾ ಪೊಲೀಸ್ ಠಾಣೆ,ಆದರ್ಶ್ ಹೆಚ್. ಡಿ, ಸಿಪಿಸಿ, ಕುಂಸಿ ಪೊಲೀಸ್ ಠಾಣೆಪದ್ಮರಾಜ್ ಎಸ್. ಕೆ, ಹೆಚ್.ಸಿ, ಶಿವಮೊಗ್ಗ ಸಂಚಾರ ಪೂರ್ವ ಪೊಲೀಸ್ ಠಾಣೆ ರಾಘವೇಂದ್ರ ಜಿ, ಹೆಚ್.ಸಿ, ಹಳೆನಗರ ಪೊಲೀಸ್ ಠಾಣೆ ತಿರುಕಪ್ಪ, ಹೆಚ್.ಸಿ, ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ಕೃಷ್ಣಮೂರ್ತಿ, ಸಿಪಿಸಿ, ಸಾಗರ ಟೌನ್ ಪೊಲೀಸ್ ಠಾಣೆ ಕಿರಣ್ ಕುಮಾರ್, ಹೆಚ್.ಸಿ, ಪೊಲೀಸ್ ಠಾಣೆ ವೀಣಾ ಹೆಚ್.ಸಿ, ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿ, ಡಿಎಸ್ಬಿ ಶಾಖೆ ಜನಾರ್ದನ್ ಎಲ್, ಹೆಚ್.ಸಿ (ನಿಸ್ತಂತು), ಕಂಟ್ರೋಲ್ ರೂಂ ಶಿವಮೊಗ್ಗ ರಮೇಶ್ ನಾಯ್ಕ್, ಎಎಸ್ಐ, ಫಿಂಗರ್ ಪ್ರಿಂಟ್ ಯೂನಿಟ್ ಶಿವಮೊಗ್ಗ ರಾಘವೇಂದ್ರ, ಎಪಿಸಿ, ಡಿಎಆರ್ ಶಿವಮೊಗ್ಗ ಸಂತೋಷ್ ಕುಮಾರ್, ಎಪಿಸಿ, ಡಿಎಆರ್ ಶಿವಮೊಗ್ಗ.
ಈ ಕಾರ್ಯಕ್ರಮದಲ್ಲಿ ಎಂ.ಎಲ್.ಸಿ ಡಾ ಧನಂಜಯ್ ಸರ್ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ-1 ಅನಿಲ್ ಕುಮಾರ್ ಭೂಮರಡ್ಡಿ, ಎವಿಸಿ ಸುಶ್ರುತ್ ಬೆಳಗೂರ್, ಚೇರ್ಮನ್ಗಳಾದ ಪ್ರಶಾಂತ್ ಕೆ, ಆದಿತ್ಯ ಆಚಾರ್ಯ, ಮತ್ತು ರೋಹನ್ ಎಎಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್ ಮತ್ತು ರೌಂಡ್ ಟೇಬಲ್ನ ಪದಾಧಿಕಾರಿಗಳು, ಅವರ ಕುಟುಂಬ ಸದಸ್ಯರು ಹಾಗೂ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
