ಧಾರವಾಡ | ಪಂಜಾ ಕೂರಿಸಿ ಮೊಹರಂ ಆಚರಣೆ; ಮುಸ್ಲಿಂಯೇತರ ಕುಟುಂಬ ಚಾಲನೆ

Date:

Advertisements

ಕರ್ಬಲಾದಲ್ಲಿ‌ ಘೋರವಾಗಿ ಮೃತಪಟ್ಟಿದ್ದ ಪ್ರವಾದಿ ಪೈಗಂಬರ್ ವಂಶಸ್ಥರ ನೆನಪಿಗಾಗಿ ಪ್ರತಿ ವರ್ಷ ಪಂಜಾಗಳನ್ನು‌ ಕೂರಿಸಿ ಆಚರಣೆಗೈದು ಹಿಂದೂ ಮುಸ್ಲಿಂ ಭಾವೈಕ್ಯೆತೆಯನ್ನು ಸಾರಲಾಗುತ್ತಿದೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಗುರಪ್ಪ ಗೊಲ್ಲರ ಮನೆಯಲ್ಲಿ ಬೀಬಿ ಫಾತೀಮಾ ಅವರು ಪಂಜಾ ಕೂರಿಸಿ ಮೊಹರಂ ಆಚರಣೆಗೆ ಚಾಲನೆ ನೀಡಿದರು.

ಈ ದಿ‌ನ.ಕಾಮ್‌ನೊಂದಿಗೆ ಗುರಪ್ಪ ಗೊಲ್ಲರ್ ಮಾತನಾಡಿ‌, “ನಾವು ನಮ್ಮ ತಂದೆಯವರ ಕಾಲದಿಂದಲೂ ಈ ಮೊಹರಂ ಆಚರಣೆ ನಡೆಸುತ್ತಿದ್ದೇವೆ. ಕಳೆದ ನಾಲ್ಕು ವರ್ಷದ ಹಿಂದೆ ಭಕ್ತರು ಪಂಜಾವನ್ನು‌ ಮಾಡಿಸಿ ಕೊಟ್ಟಿದ್ದಾರೆ. ಅಲ್ಲಿಂದ ಪಂಜಾವನ್ನು ಮನೆಯಲ್ಲಿಯೇ ಕೂರಿಸಿ ಪೂಜೆ, ಫಾತೇಹಾವನ್ನು‌ಮಾಡಲಾಗುತ್ತದೆ” ಎಂದರು.

Advertisements

“ಈ ಆಚರಣೆಯನ್ನು ಮಾಡಲು ನಮ್ಮಲ್ಲಿ ಹಿಂದೂ-ಮುಸ್ಲಿಂ ಬೇಧದ ವಿಚಾರವೇ ಹೊಳೆಯುವುದಿಲ್ಲ. ಕಾರಣ, ಮೊಹರಂ ಆಚರಣೆಯು ಪರಸ್ಪರ ಸೌಹಾರ್ದತೆ ಬೆಳೆಸುವಲ್ಲಿ ಸಹಕಾರಿಯಾಗುತ್ತದೆ. ಹೀಗಾಗಿ ನಾವೆಲ್ಲ ಒಂದೇ ತಾಯಿಯ ಮಕ್ಕಳಂತೆ ಸಾಗುತ್ತಿದ್ದೇವೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಹಿರಿಯ ರೈತರಿಗೆ ಪಿಂಚಣಿ, ಸರ್ಕಾರಿ ಶಾಲಾ ಮಕ್ಕಳಿಗೆ ಕೃಪಾಂಕ ನೀಡಿ: ಶಾಸಕ ಬಿ ಆರ್ ಪಾಟೀಲ್

ರಾಯಸಾಬ ಕುನ್ನೂರ ಮಾತನಾಡಿ, “ನಾನು ಸಣ್ಣವನಿದ್ದಾಗಿನಿಂದಲೂ ಈ ಮೊಹರಂ ಆಚರಣೆ ನೋಡುತ್ತಿದ್ದೇನೆ. ಎಂದಿಗೂ ಕೂಡಾ ಜಾತಿ ಧರ್ಮವೆಂದು ಹೊಡೆದಾಡಿಲ್ಲ. ಜಗಳವಾಡಿ ಛಿದ್ರವಾಗಿದ್ದರೂ ಮೊಹರಂ ಬಂದಾಗ ಸಹಜವಾಗಿ ಒಂದೇ ಕುಟುಂಬದವರಂತೆ ಒಂದಾಗುತ್ತಾರೆ. ನಮ್ಮ ದೇವರು ನಿಮ್ಮ ದೇವರು ಅಂತ ಜಗಳವಾಡಿದ್ದನ್ನು ನಾನಿಲ್ಲಿ ನೋಡಿಲ್ಲ. ಎಪ್ಪತ್ತು ವರ್ಷದ ನನ್ನ ಆಯುಷ್ಯದಲ್ಲಿ ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಶಾಂತಿಯುತವಾಗಿ ಸಾಗಿದ್ದೇವೆ. ಇನ್ನು ಮುಂದಿನ ಪೀಳಿಗೆಯು ಹೀಗೆ ಭಾವೈಕ್ಯೆತೆ ಕಾಪಾಡಲು ಶಾಂತಿ ಮತ್ತು ಸೌಹಾರ್ದತೆಯಿಂದ ಮುನ್ನಡೆಯಬೇಕು” ಎಂದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

ತುಮಕೂರು | ಒಳ ಮೀಸಲಾತಿ : ಅಲೆಮಾರಿಗಳಿಗೆ ನ್ಯಾಯ ಸಮ್ಮತ ಪಾಲು ನೀಡಲು ಒತ್ತಾಯ

ಒಳ ಮೀಸಲಾತಿ ಕಲ್ಪಿಸುವಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿಯ 59 ಸಮುದಾಯಗಳಿಗೆ ಆಗಿರುವ...

ಗುಬ್ಬಿ | ರೈತನ ಕೃಷಿ ಚಟುವಟಿಕೆಗೆ ಜೇನು ಸಾಕಾಣಿಕೆ ವರದಾನ : ಪುಷ್ಪಲತಾ

ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಘಟವಾದ ಪರಾಗಸ್ಪರ್ಶ ಕ್ರಿಯೆಗೆ...

ಮಂಗಳೂರು | ಆ. 23: ಅಲ್ ವಫಾ ಚಾರಿಟೇಬಲ್ ಟ್ರಸ್ಟ್‌ನಿಂದ 15 ಜೋಡಿಗಳ ಸರಳ ಸಾಮೂಹಿಕ ವಿವಾಹ

ಮಂಗಳೂರು ಭಾಗದಲ್ಲಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಅಲ್ ವಫಾ ಚಾರಿಟೆಬಲ್ ಟ್ರಸ್ಟ್...

Download Eedina App Android / iOS

X