ದಲಿತ ಡಿಜಿಪಿಯ ಅಧಿಕಾರಾವಧಿ ರಾಜಸ್ಥಾನದ ರಾಜಕೀಯದಲ್ಲಿ ಚರ್ಚೆ ಉಂಟುಮಾಡಿದೆಯೇ?

Date:

Advertisements

ರಾಜಸ್ಥಾನದ ರಾಜಕೀಯದಲ್ಲಿ ಡಾ. ರವಿ ಪ್ರಕಾಶ್ ಮೆಹರ್ಡಾ ಅವರನ್ನು ಅಲ್ಪಾವಧಿ ಕಾರ್ಯಕಾರಿ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ)ರನ್ನಾಗಿ ನೇಮಕ ಮಾಡಿದ್ದು, ಗಮನಾರ್ಹ ಚರ್ಚೆಯನ್ನು ಹುಟ್ಟುಹಾಕಿದೆ.

ರಾಜಸ್ಥಾನದ ಭಜನ್ ಲಾಲ್ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರವು ದಲಿತ ಸಮುದಾಯದ ಹಿರಿಯ ಐಪಿಎಸ್ ಅಧಿಕಾರಿ ಡಾ. ರವಿಪ್ರಕಾಶ್ ಮೆಹರ್ದಾ ಅವರನ್ನು ಜೂನ್ 12ರಂದು ರಾಜ್ಯದ ಹಂಗಾಮಿ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ)ರನ್ನಾಗಿ ನೇಮಿಸಿತ್ತು. ಇದೀಗ ಅವರ 20 ದಿನಗಳ ಅಧಿಕಾರಾವಧಿ ಜೂನ್ 30ರಂದು ಕೊನೆಗೊಳ್ಳಲಿದ್ದು, ಇದು ದಲಿತರ ಬೆಂಬಲ ಪಡೆಯಲು ಪ್ರಮುಖ ಚುನಾವಣೆಗಳಿಗೆ ಮುಂಚಿತವಾಗಿ ನಡೆದ ಬಿಜೆಪಿಯ ಕುತಂತ್ರವಾಗಿದೆ ಎಂದು ಸ್ಥಳೀಯ ದಲಿತ ನಾಯಕರು ಆರೋಪಿಸಿದ್ದಾರೆ.

ಡಾ. ಮೆಹರ್ಡಾ ಅವರ ಕೇವಲ 20 ದಿನಗಳ(ಜೂನ್ 30, 2025ರವರೆಗೆ) ಅಧಿಕಾರಾವಧಿಯು ದಲಿತ ಸಮುದಾಯ, ರಾಜಕೀಯ ನಾಯಕರು, ನಿವೃತ್ತ ಐಪಿಎಸ್ ಅಧಿಕಾರಿಗಳು ಮತ್ತು ಸಾಮಾಜಿಕ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಅವರ ಅಧಿಕಾರಾವಧಿಯನ್ನು ವಿಸ್ತರಿಸಬೇಕೆಂಬ ಬೇಡಿಕೆ ಜೋರಾಗಿದೆ. ಅವರ ಅಲ್ಪಾವಧಿ ನೇಮಕಾತಿಯು ಸಾಂಕೇತಿಕ ಮಹತ್ವವನ್ನು ಹಾಳು ಮಾಡುತ್ತದೆ. ಬಿಜೆಪಿಯ ಸಾಮಾಜಿಕ ನ್ಯಾಯದ ಬದ್ಧತೆಗೆ ಸವಾಲು ಹಾಕಿದೆ. ಈ ಬೇಡಿಕೆಯನ್ನು ಬೆಂಬಲಿಸಲು ದಲಿತ ಸಂಘಟನೆಗಳು, ರಾಜಕೀಯ ಒತ್ತಡ ಗುಂಪುಗಳು ಮತ್ತು ಸಾಮಾಜಿಕ ಮಾಧ್ಯಮ ಕಾರ್ಯಕರ್ತರು ಪ್ರಧಾನಿ ಮೋದಿ, ಸಿಎಂ ಭಜನ್ ಲಾಲ್ ಶರ್ಮಾ ಮತ್ತು ಬಿಜೆಪಿ ಕೇಂದ್ರೀಯ ನಾಯಕತ್ವಕ್ಕೆ ಮನವಿಗಳು, ಇಮೇಲ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಅಭಿಯಾನಗಳನ್ನು ನಡೆಸುತ್ತಿದ್ದಾರೆ. ಇದು ಹೆಚ್ಚಿನ ರಾಜಕೀಯ ಸಂದಿಗ್ಧತೆಯಾಗಿ ಮಾರ್ಪಟ್ಟಿದೆ.

Advertisements

ಡಾ. ರವಿ ಪ್ರಕಾಶ್ ಮೆಹರ್ಡಾ ಯಾರು?

1990ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾದ ಡಾ. ಮೆಹರ್ಡಾ, ಜೈಪುರ ಮೂಲದವರಾಗಿದ್ದು, ರಾಜಸ್ಥಾನ ಪೊಲೀಸ್ ಸೇವೆಯಿಂದ ಐಪಿಎಸ್‌ಗೆ ಬಡ್ತಿ ಪಡೆದವರು. ಅವರು ಕೋಟಾದ ಐಜಿ, ಸಿಆರ್‌ಪಿಎಫ್‌ನ ಡಿಐಜಿ ಮತ್ತು ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ಬ್ಯೂರೋ(ಎಸಿಬಿ) ಡಿಜಿ ಸೇರಿದಂತೆ ವಿವಿಧ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಅರ್ಥಶಾಸ್ತ್ರದಲ್ಲಿ ಪದವಿ, ಸಾಮಾಜಿಕ ವಿಜ್ಞಾನದಲ್ಲಿ ಎಂ.ಫಿಲ್, ಎಂಬಿಎ ಮತ್ತು ಪಿಎಚ್‌ಡಿ ಅಧ್ಯಯನದಲ್ಲಿ ಶೈಕ್ಷಣಿಕ ಶ್ರೇಷ್ಠತೆಯನ್ನು ಹೊಂದಿದ್ದಾರೆ. ಅಲ್ಲದೆ ಅಂಬೇಡ್ಕರ್ ವೆಲ್ಫೇರ್ ಸೊಸೈಟಿಯ ರಾಜಸ್ಥಾನ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ದಲಿತ ಸಮುದಾಯದಲ್ಲಿ ಗಣನೀಯ ಪ್ರಭಾವ ಹೊಂದಿದ್ದಾರೆ.

ಚರ್ಚೆಗೆ ಕಾರಣ:

ಮೆಹರ್ಡಾ ಅವರು ಆರಂಭದಲ್ಲಿ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಇಷ್ಟವಿರಲಿಲ್ಲ. ಈ ಬಗ್ಗೆ ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದರ ಹೊರತಾಗಿಯೂ, ಬಿಜೆಪಿ ತನ್ನ ಕಾರ್ಯತಂತ್ರದ ನಿರ್ಧಾರವನ್ನು ಮುಂದುವರೆಸಿತ್ತು. ಉತ್ತಮವಾಗಿ ಯೋಜಿತ ರಾಜಕೀಯ ತಂತ್ರದ ಭಾಗವಾಗಿ ಅವರ ಹೆಸರನ್ನು ಘೋಷಿಸಿತು. ಈ ಕ್ರಮವು ರಾಜಕೀಯ ವಲಯಗಳಲ್ಲಿ ಆಘಾತದ ಅಲೆಗಳು ಉಂಟಾಗಿದ್ದು, ರಾಜ್ಯದ ರಾಜಕೀಯ ಭೂದೃಶ್ಯದಲ್ಲಿ ಪ್ರಬಲವಾದ ಹೊಡೆತವನ್ನು ನೀಡಿದೆ.

ಬಿಜೆಪಿಯು ದಲಿತ ಸಮುದಾಯದ ಬೆಂಬಲವನ್ನು ಗಳಿಸುವ ಸಲುವಾಗಿ ಡಾ. ಮೆಹರ್ಡಾ ಅವರ ನೇಮಕವನ್ನು ತಂತ್ರವಾಗಿ ಬಳಸಿಕೊಂಡಿದ್ದು, ಕೇವಲ 20 ದಿನಗಳ ಅಧಿಕಾರಾವಧಿಯು ಈ ನಿರ್ಧಾರದ ಸಾಂಕೇತಿಕ ಮಹತ್ವವನ್ನು ಕುಗ್ಗಿಸಿದೆ ಎಂದು ದಲಿತ ಸಂಘಟನೆಗಳು ಆರೋಪಿಸಿವೆ.

ಡಾ. ಮೆಹರ್ದಾ ಅವರ ಅವಧಿಯನ್ನು ವಿಸ್ತರಿಸುವುದರಿಂದ ಸಾಮಾಜಿಕ ನ್ಯಾಯದ ಬಗ್ಗೆ ಬಿಜೆಪಿಯು ತನ್ನ ಬದ್ಧತೆಯನ್ನು ತೋರಿಸಬೇಕು. ಬಿಜೆಪಿ ಇದರಲ್ಲಿ ವಿಫಲವಾದರೆ ಮುಂಬರುವ ಪಂಚಾಯಿತಿ ಚುನಾವಣೆಗಳು ಮತ್ತು 2028ರ ರಾಜ್ಯ ಚುನಾವಣೆಗಳಿಗೆ ಮುಂಚಿತವಾಗಿ ದಲಿತ ಮತದಾರರು ತಮ್ಮ ಕೈಚಳಕವನ್ನು ತೋರಿಸಬೇಕಾಗುತ್ತದೆ ಎಂದು ಹಲವರು ಅಭಿಪ್ರಾಯ ಪಡುತ್ತಿದ್ದಾರೆ.

ಆಲ್ ಇಂಡಿಯಾ ಸರ್ವೀಸಸ್ (ಡೆತ್-ಕಮ್-ರಿಟೈರ್ಮೆಂಟ್ ಬೆನಿಫಿಟ್ಸ್) ನಿಯಮ 16ರ ಅಡಿಯಲ್ಲಿ ಕೇಂದ್ರದ ಅನುಮತಿಯೊಂದಿಗೆ ಮೂರು ತಿಂಗಳ ಸೇವಾ ವಿಸ್ತರಣೆ ಸಾಧ್ಯವಿದೆ. ಈ ನಿಯಮವನ್ನು ಬಳಸಿಕೊಂಡು ಮೆಹರ್ಡಾ ಅವರ ಅಧಿಕಾರಾವಧಿಯನ್ನು ವಿಸ್ತರಿಸಬೇಕೆಂದು ಬಿಜೆಪಿ ನಾಯಕರು, ದಲಿತ ಸಂಘಟನೆಗಳು ಮತ್ತು ನಿವೃತ್ತ ಐಪಿಎಸ್ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ.

ಅಂಬೇಡ್ಕರ್ ಮೆಮೋರಿಯಲ್ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ಹಾಗೂ ನಿವೃತ್ತ ಐಪಿಎಸ್ ಜಸ್ವಂತ್ ಸಂಪತ್‌ರಾಮ್, ಬಿಜೆಪಿ ನಾಯಕರಾದ ಶಾರದಾ ಯಾದವ್, ಗೋಪಿಚಂದ್ ಮೇಘವಾಲ್ ಮತ್ತು ವಕೀಲೆ, ಬುಂಡಿ ಬುಡಕಟ್ಟು ಸಮಾಜದ ನಾಯಕಿ ಮತ್ತು ನಗರ ಪಾಲಿಕಾ ನಾರಾಯಣ ಅಧ್ಯಕ್ಷೆ ಸಾವಿತ್ರಿ ದೇವಿ ಅವರು ಮೆಹರ್ಡಾ ಅವರ ಸೇವಾ ವಿಸ್ತರಣೆಗಾಗಿ ಮುಖ್ಯಮಂತ್ರಿಗೆ ಜ್ಞಾಪಕ ಪತ್ರಗಳನ್ನು ಸಲ್ಲಿಸಿದ್ದಾರೆ.

ರಾಜಕೀಯ ಪರಿಣಾಮ: ಮೆಹರ್ಡಾ ಅವರ ಸೇವಾ ವಿಸ್ತರಣೆಯನ್ನು ಒಪ್ಪದಿದ್ದರೆ, ಬಿಜೆಪಿಯು ದಲಿತ ಸಮುದಾಯದ ಬೆಂಬಲವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಇದು ಮುಂಬರುವ ಚುನಾವಣೆಗಳಲ್ಲಿ ರಾಜಕೀಯವಾಗಿ ಬೆಲೆ ತೆರಬೇಕಾಗಬಹುದು. ಆದಾಗ್ಯೂ, ಸರ್ಕಾರ ವಿಸ್ತರಣೆಯನ್ನು ನೀಡಿದರೆ, ಅದು ಅಂಚಿನಲ್ಲಿರುವ ಸಮುದಾಯಗಳಿಗೆ ಪಕ್ಷದ ಸಂಪರ್ಕವನ್ನು ಬಲಪಡಿಸಬಹುದು.

ಇದನ್ನೂ ಓದಿದ್ದೀರಾ? ಇಂದಿನ ಅಘೋಷಿತ ತುರ್ತುಪರಿಸ್ಥಿತಿಯ ಬುಡಮೇಲು ಬಹು ಕಠಿಣ; ಚಿಂತಕ ಆಶೀಶ್ ನಂದಿ

ರಾಜಸ್ಥಾನ ಸರ್ಕಾರವು ಈಗಾಗಲೇ ಡಿಜಿಪಿ ಆಯ್ಕೆಗಾಗಿ ಏಳು ಐಪಿಎಸ್ ಅಧಿಕಾರಿಗಳ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿದ್ದು, ಯುಪಿಎಸ್‌ಸಿ ಮೂರು ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಲಿದೆ. ಈ ಪ್ರಕ್ರಿಯೆಯು ಶಾಶ್ವತ ಡಿಜಿಪಿ ನೇಮಕಕ್ಕೆ ಕಾರಣವಾಗಬಹುದು. ಆದರೆ ತಾತ್ಕಾಲಿಕವಾಗಿ ಮೆಹರ್ಡಾ ಅವರ ಸೇವಾ ವಿಸ್ತರಣೆಯನ್ನು ಪರಿಗಣಿಸುವ ಒತ್ತಡವೂ ಇದೆ.

ಒಟ್ಟಾರೆಯಾಗಿ ಡಾ. ರವಿ ಪ್ರಕಾಶ್ ಮೆಹರ್ಡಾ ಅವರ ಕಾರ್ಯಕಾರಿ ಡಿಜಿಪಿ ನೇಮಕವು ರಾಜಸ್ಥಾನದ ರಾಜಕೀಯದಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದೆ. ಆದರೆ ಅವರ ಅಲ್ಪಾವಧಿ ಅಧಿಕಾರಾವಧಿಯು ಗಂಭೀರ ಚರ್ಚೆಗೆ ಕಾರಣವಾಗಿದೆ. ಸೇವಾ ವಿಸ್ತರಣೆಯ ಬೇಡಿಕೆಯು ದಲಿತ ಸಮುದಾಯದ ಆಕಾಂಕ್ಷೆಗಳು ಮತ್ತು ಬಿಜೆಪಿಯ ರಾಜಕೀಯ ತಂತ್ರದ ಮಧ್ಯೆ ಆಡಳಿತಾತ್ಮಕ ಮಾನದಂಡಗಳ ಸಮತೋಲನಕ್ಕೆ ಸವಾಲು ಎದುರಾಗಿದೆ. ಈ ನಿರ್ಧಾರವು ರಾಜಕೀಯ ಮತ್ತು ಸಾಮಾಜಿಕವಾಗಿ ದೂರಗಾಮಿ ಪರಿಣಾಮಗಳನ್ನು ಬೀರಬಹುದು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X