ಶಿವಮೊಗ್ಗ, ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಡಾ || ಶಿವರಾಜ್ ಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಶಿವಮೊಗ್ಗದ ಪ್ರಸಿದ್ಧ ಶ್ರೀ ಕೋಟೆ ಮಾರಿಕಾಂಬ ದೇವಸ್ಥಾನದಲ್ಲಿ ಶಿವರಾಜ್ ಕುಮಾರ್ ಅವರಿಗೆ ಹೆಚ್ಚಿನ ಆರೋಗ್ಯ, ಆಯಸ್ಸು, ಯಶಸ್ಸು, ನೀಡಲೆಂದು ಗ್ರಾಮ ದೇವತೆ ಕೋಟೆ ಮಾರಿಕಾಂಬಾ ದೇವಿಗೆ ವಿಶೇಷವಾದ ಪೂಜೆ ಸಲ್ಲಿಸಿ ನಂತರ ಸಿಹಿ ವಿತರಣೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದಂತಹ ಸುನಿಲ್ ಎ ಎಚ್, ಪ್ರಭಾಕರ ಗೌಡ, ಸತೀಶ್, ಯುವ ಮುಖಂಡರಾದ ವಿನಯ್ ತಾಂದಲೆ, ಗ್ಯಾರಂಟಿ ಯೋಜನ ಸದಸ್ಯರಾದ ಬಸವರಾಜ್, ಹೋಟೆಲ್ ಬಸವಣ್ಣ, ಮಂಜುನಾಥ್ ನವಲೆ, ಮೆಸ್ಕಾಂ ಸದಸ್ಯರಾದ ಮಧುಸೂದನ್, ಶಿವಮೂರ್ತಿ ಮಹಾರಾಜ್, ಒಬಿಸಿ ನಗರ ಅಧ್ಯಕ್ಷರು ಆದ ಮೋಹನ್, ಯುವ ಮುಖಂಡರಾದ ಪುರ್ಲೆ ಮಂಜು, ಗಿರೀಶ್ ಸಾಕ್ರೆ, ಶಿವುಕುಮಾರ್,ಪ್ರವೀಣ್, ಶಬರಿ, ಚಂದನ್, ದರ್ಶನ್, ಭಾರತ್, ಹಾಲೇಶ್, ವಿಜಯ್, ಸುಜಿತ್, ಇನ್ನಿತರರು ಉಪಸ್ಥಿತರಿದ್ದರು.