ಕೋಲಾರ ನಗರದ ಮೌಲನಾ ಆಜಾದ್ ಭವನದಲ್ಲಿ ವಿವಿಧ ಇಲಾಖೆಯ ‘ಎ’ ಮತ್ತು ‘ಬಿ’ ಗುಂಪಿನ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ವಿಪತ್ತು ನಿರ್ವಹಣೆ ಯೋಜನೆ ಪರಿಷ್ಕರಣೆ-2025 ತರಬೇತಿ ಕಾರ್ಯಕ್ರಮಕ್ಕೆ ಅಪರ ಜಿಲ್ಲಾಧಿಕಾರಿ ಮಂಗಳ ಚಾಲನೆ ನೀಡಿದರು.
ಕೋಲಾರ ಜಿಲ್ಲಾಧಿಕಾರಿಗಳ ಅಧ್ಯಕತೆಯಲ್ಲಿ, ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಸಹಯೋಗದೊಂದಿಗೆ ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆ ಪರಿಷ್ಕರಣೆ-2025ರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿಪತ್ತು ನಿರ್ವಹಣೆಯ ಮೂಲಗಳು, ವಿಪತ್ತು ನಿರ್ವಹಣಾ ಕಾಯ್ದೆ 2005ರ ಕೋಲಾರ ಜಿಲ್ಲೆಯ ನಿರ್ದಿಷ್ಟ ವಿಪತ್ತು ಪರಿಸ್ಥಿತಿ ಮತ್ತು ಅಧಿಕಾರಿಗಳ ಪಾತ್ರ ಹಾಗೂ ಜವಾಬ್ದಾರಿಗಳನ್ನು ತಿಳಿಸಿದರು.
ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಪೂರಕ ದತ್ತಾಂಶದೊಂದಿಗೆ ಜಿಲ್ಲೆಯ ಅಪಾಯ, ದುರ್ಬಲತೆ ಮತ್ತು ಸಾಮರ್ಥ್ಯ ವಿಶ್ಲೇಷಣೆ, ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆಗೆ ಆರೋಗ್ಯ ಪ್ರತಿಕ್ರಿಯೆ ಕಾರ್ಯವಿಧಾನಗಳನ್ನು ಸಂಯೋಜಿಸುವುದು, ಆರೋಗ್ಯ ಸಂಬಂಧಿತ ವಿಪತ್ತುಗಳಿಗೆ ಆಕಸ್ಮಿಕ ಯೋಜನೆ, ಸಾಮೂಹಿಕ ಸಾವುನೋವುಗಳ ಪ್ರಥಮ ಚಿಕಿತ್ಸೆ ಹಾಗೂ ನಿರ್ವಹಣೆಯ ಕುರಿತು ವೈದ್ಯಕೀಯ ಸಿದ್ಧತೆ ಮತ್ತು ಪ್ರದರ್ಶನಗಳನ್ನು ನಡೆಸಿದರು.
ವಿಪತ್ತು ನಿರ್ವಹಣಾ ತಿದ್ದಿಪಡಿ ಮಸೂದೆ 2024, ಡಿಡಿಎಂಪಿ ಸುಧಾರಣೆಗಳು, ದತ್ತಾಂಶ ಮೌಲ್ಯೀಕರಣ ಮತ್ತು ಚರ್ಚೆಯ ಫಲಿತಾಂಶಗಳು, ವಿಪತ್ತು ನಿರ್ವಹಣೆಯಲ್ಲಿ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಪಾತ್ರ, ಅಗ್ನಿ ಸುರಕ್ಷತೆ ನಿಯಮಗಳು ಮತ್ತು ಮಾನದಂಡಗಳ ಬಗ್ಗೆ ತರಬೇತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಜಯದೇವ ಪಿಸಿಎಡಿ ವರದಿ ಬಹಿರಂಗ: ಹಾಸನದ ಯುವಜನರಲ್ಲಿ ಹೃದಯಾಘಾತಕ್ಕೆ ಕಾರಣವೇನು?
ತುರ್ತು ಅಣಕು ವ್ಯಾಯಾಮಗಳು: ಅಗ್ನಿಶಾಮಕ ಮತ್ತು ತುರ್ತು ಸೇವೆಗಳನ್ನು ಜಿಲ್ಲೆಗಳಲ್ಲಿ ಸಂಯೋಜಿಸುವಲ್ಲಿ ಉತ್ತಮ ಅಭ್ಯಾಸಗಳನ್ನು ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾ. ವಿಶ್ವನಾಥ್, ಹಿರಿಯ ಬೋಧಕರು, ಆಡಳಿತ ತರಬೇತಿ ಸಂಸ್ಥೆ, ಮೈಸೂರ್, ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಮೈಲಾರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರೇಮ, ಮಧು ಎಸ್ ವಿಪತ್ತು ನಿರ್ವಹಣಾ ಪರಿಣಿತರು ಸೇರಿದಂತೆ ಇತರರು ಇದ್ದರು.