ಕಲಬುರಗಿ | ಅಂಬೇಡ್ಕರ್ ದಾರಿಯಲ್ಲಿ ಬದುಕುವುದು ಅಗತ್ಯ: ಡಾ. ಕರಿಘೋಳೇಶ್ವರ

Date:

Advertisements

ಅಂಬೇಡ್ಕರ್ ಅವರು ಬರೆದ ಸಂವಿಧಾನದ ಪ್ರತಿಫಲದಿಂದ ನಾವೆಲ್ಲರೂ ಉತ್ತಮ ಉದ್ಯೋಗ ಪಡೆದಿದ್ದೇವೆ. ಆದರೆ, ಮುಂದೆ ನೌಕರರ ಮಕ್ಕಳು ಕೂಲಿ ಕಾರ್ಮಿಕರಾಗಬಾರದು. ಅದಕ್ಕಾಗಿ, ಎಲ್ಲರೂ ಬಾಬಾಸಾಹೇಬರ ನೈಜ ದಾರಿಯಲ್ಲಿ ಬದುಕುವುದು ಅಗತ್ಯ ಎಂದು ಜೇವರ್ಗಿ ಪ್ರಥಮ ದರ್ಜೆ ಕಾಲೇಜು ಪಾಂಶುಪಾಲ ಡಾ. ಕರಿಘೋಲೇಶ್ವರ ಹೇಳಿದ್ದಾರೆ.

ಕಲಬುರಗಿಯ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನರಾಮ್‌ ವಸತಿ ನಿಲಯದಲ್ಲಿ ಪ್ರಬುದ್ಧ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಭಾರತೀಯರಾದ ನಾವೆಲ್ಲರೂ ಬಾಬಾಸಾಹೇಬರ ಋಣದ ಮಕ್ಕಳಾಗಿದ್ದೇವೆ. ಅಂಬೇಡ್ಕರರು 1956 ಜುಲೈ 31ರಂದು ತಮ್ಮ ಅಪ್ತ ಕಾರ್ಯದರ್ಶಿ ನಾನಕ ಚಂದ್ ರತ್ತು ಅವರೊಂದಿಗೆ ಹಂಚಿಕೊಂಡ ಅಂತರಂಗದ ನೋವಿನ ಮಾತುಗಳನ್ನು ಇಂದು ದಮನಿತರು ಮರೆತಿದ್ದಾರೆ. ಬಾಬಾಸಾಹೇಬರು ತಮ್ಮ ಜೀವನದುದ್ದಕ್ಕೂ ವಿರೋಧಿಗಳೊಂದಿಗೆ ಹೋರಾಡಿ ಯಾವ ಕತ್ತಲೆಯಿಂದ ಬೆಳಕಿನೆಡೆಗೆ ಕರೆತಂದರೋ, ಅದೇ ಕತ್ತಲೆ ಕಡೆಗೆ ನಾವು ಮುಖಮಾಡಿ ನಿಂತಿದ್ದೇವೆ. ಇದು ಬಹುದೊಡ್ಡ ದುರಂತ” ಎಂದರು.

ಕಾರ್ಯಕ್ರಮದಲ್ಲಿ ಅನಂದ ಅಂಕಲಗಿಕರ, ವಿವಿಧ ವಸತಿ ನಿಲಯದ ವಿದ್ಯಾರ್ಥಿಗಳು ಇದ್ದರು. ಸಂದೀಪ ಸ್ವಾಗತಿಸಿದರು. ಸತೀಶ ಹೊನ್ನಾನಗ‌ ಕುಮಾರ, ಮಲ್ಲಪ್ಪ, ಸಂತೋಷ ನಿರೂಪಿಸಿದರು. ನಿಲಯಗಳ ವಾರ್ಡನ್‌ ಸಂಜು ಸರಡಗಿ, ರಾಜಕುಮಾರ ಹುಲಿಕರ
ವಂದಿಸಿದರು.

Advertisements

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X