ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಪೂರ್ವಭಾವಿ ನೆರವೇರಿತು.
ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲೆ ಅಲ್ಲದೆ ನೆರೆಯ ಕಲಬುರಗಿ ಸೇರಿ ಮಹಾರಾಷ್ಟ್ರ, ತೆಲಂಗಾಣ ರಾಜ್ಯದ ವಿವಿಧ ಜಿಲ್ಲೆಯ
ಅಪಾರ ಸಂಖ್ಯೆಯ ಭಕ್ತರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಉದ್ಯಮಿಗಳು, ಗಣ್ಯರು ಭಾಗವಹಿಸಿ ಅಮೃತ ಮಹೋತ್ಸವ ಯಶಸ್ವಿಗೆ ಅಗತ್ಯ ಸಲಹೆ ಸೂಚನೆ ನೀಡಿದರು.
ಅಮೃತ ಮಹೋತ್ಸವಕ್ಕೆ ರಾಷ್ಟ್ರಪತಿಗಳು, ದೇಶದ ಹೆಸರಾಂತ ಸಾಹಿತಿ, ಗಣ್ಯರನ್ನು ಆಹ್ವಾನಿಸುವುದು, ಅಭಿನಂದನಾ ಗ್ರಂಥ ಹೊರತರುವುದು, ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ಡಾ.ಬಸವಲಿಂಗ ಪಟ್ಟದ್ದೇವರ ಜೀವನ ಸಾಧನೆ ಕುರಿತು ಕಾರ್ಯಕ್ರಮ ಆಯೋಜಿಸುವುದು, ರಾಜ್ಯದಾದ್ಯಂತ ಅಭಿಯಾನ ರೂಪದಲ್ಲಿ ಪ್ರಚಾರ, ಅಂತರ ರಾಜ್ಯ ಸಮ್ಮೇಳನ ಆಯೋಜಿಸುವುದು ಸೇರಿ ವಿವಿಧ ಸಲಹೆ ಸೂಚನೆಗಳು ಭಕ್ತರಿಂದ ವ್ಯಕ್ತವಾದವು.
ಅಧ್ಯಕ್ಷತೆ ವಹಿಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ʼಹಿರೇಮಠ ಸಂಸ್ಥಾನ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಬಸವಲಿಂಗ ಪಟ್ಟದ್ದೇವರು ವಿವಿಧ ಸಮಾಜಪರ ಸೇವೆ ಮೂಲಕ ಶ್ರೀಮಠವನ್ನು ರಾಜ್ಯ, ದೇಶವನ್ನು
ಗುರುತಿಸುವಂತೆ ಮಾಡಿದ್ದಾರೆ. ಬಸವತತ್ವ ಪ್ರಚಾರ ಪ್ರಸಾರದ ಜತೆಗೆ ಶಿಕ್ಷಣ, ಅನಾಥ ಮಕ್ಕಳ ಸೇವೆಗೈಯುತ್ತಿರುವುದು ಹೆಮ್ಮೆ ತರಿಸಿದೆ. ಅಂತಹ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರಿಗೆ ಎಪ್ಪತ್ತೈದು ತುಂಬುತ್ತಿರುವುದು ಸಂತಸ ತರಿಸಿದೆ. ಜನ್ಮದಿನದ ಸವಿನೆನಪಿಗಾಗಿ ಆಚರಿಸಲು ಉದ್ದೇಶಿಸಿರುವ ಅಮೃತ ಮಹೋತ್ಸವ ಅರ್ಥಪೂರ್ಣ ಆಚರಣೆಗೆ ಅಗತ್ಯ ಸಹಾಯ ಸಹಕಾರದೊಂದಿಗೆ ತನು, ಮನ, ಧನದಿಂದ ಸಹಕರಿಸುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ʼಕಲ್ಯಾಣ ಕರ್ನಾಟಕ ಭಾಗದಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ವಿಶಿಷ್ಟವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲೆ ಅಲ್ಲದೆ ನೆರೆಯ ರಾಜ್ಯಗಳಲ್ಲಿ ಬಸವತತ್ವ ಪ್ರಚಾರ ಪ್ರಸಾರದ ಜತೆಗೆ ಶಿಕ್ಷಣ ಸಂಸ್ಥೆ ತೆರೆದು ವಿದ್ಯಾದಾನದ ಮೂಲಕ ಸಾವಿರಾರು ಮಕ್ಕಳ ಭವಿಷ್ಯ ಬೆಳೆಗಿಸುವ ಕೆಲಸ ಮಾಡುತ್ತಿರುವ ಪೂಜ್ಯರ ಅಮೃತ ಮಹೋತ್ಸವ ಎಲ್ಲರೂ ಸೇರಿ ಅರ್ಥಪೂರ್ಣವಾಗಿ ಆಚರಿಸೋಣʼ ಎಂದು ತಿಳಿಸಿದರು.

ನಾರಂಜಾ ಸಹಕಾರ ಸಕ್ಕರೆ ಕಾರಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ ಮಾತನಾಡಿ, ʼಬಸವಲಿಂಗ ಪಟ್ಟದ್ದೇವರ ವಿಶಿಷ್ಟ ಸೇವೆ ಮೂಲಕ ಹಿರೇಮಠ ಸಂಸ್ಥಾನ ರಾಜ್ಯದಲ್ಲಿ ಶ್ರೇಷ್ಠ ಮಠವಾಗಿ ಬೆಳೆದಿದೆ. ಪೂಜ್ಯರ ಅಮೃತ ಮಹೋತ್ಸವ ಸವಿನೆನಪಿಗಾಗಿ ಬೃಹತ ಗ್ರಂಥ ಹೊರತರುವ ಕೆಲಸ ಆಗಬೇಕುʼ ಎಂದು ತಿಳಿಸಿದರು
ನೇತೃತ್ವ ವಹಿಸಿದ ಶರಣಬಸವ ಸ್ವಾಮೀಜಿ ಮಾತನಾಡಿ, ʼಕಲ್ಯಾಣ ನಾಡಿನ ಮಠಾಧೀಶರಿಗೆ ಹಿರೇಮಠ ಸಂಸ್ಥಾನ ತವರು ಮನೆ ಇದ್ದಂತೆ ಪೂಜ್ಯರು ಬಸವತತ್ವ ಆರಾಧಕರನ್ನು ನಾಡಿಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ಪೂಜ್ಯರ
ಅಮೃತ ಮಹೋತ್ಸವಕ್ಕೆ ವಹಿಸುವ ಜವಾಬ್ದಾರಿಯನ್ನು ಚಾಚು ತಪ್ಪದೆ ಪಾಲಿಸುತ್ತೇವೆʼ ಎಂದು ತಿಳಿಸಿದರು.
ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ʼಶಿಕ್ಷಕರಾಗುವ ಕನಸು ಕಂಡಿದ್ದ ಪೂಜ್ಯರು ಶ್ರೀಮಠಕ್ಕೆ ಪೀಠಾಧಿಪತಿ ಆಗಿರುವುದು ವಿಶೇಷವೆನಿಸಿದೆ. ಆರ್ಥಿಕ ಸಂಕಷ್ಟದ ಸಮಯದಲ್ಲಿ ಶ್ರೀಮಠವನ್ನು ಮುನ್ನಡೆಸಿ ಇಂದು ರಾಜ್ಯ ದೇಶದ ಗಮನ ಸೆಳೆಯುವಂತೆ ಮಾಡಿದ್ದಾರೆ. ಅನೇಕ ವಿಧಾಯಕ ಕಾರ್ಯಗಳ ಮೂಲಕ ಶ್ರೀಮಠದ ಕೀರ್ತಿ ಹೆಚ್ಚಿಸುವುದರ ಜತೆಗೆ ವಿದ್ಯಾ ದೇಗುಲ ತೆರೆದು ಗಡಿಯಲ್ಲಿ ಗುಣಾತ್ಮಕ ಶಿಕ್ಷಣ ಕೊಡುವ ಕೆಲಸ ಮಾಡುತ್ತಿದ್ದಾರೆ. ಪೂಜ್ಯರ ಅಮೃತ ಮಹೋತ್ಸವ
ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದು ಎಲ್ಲ ಭಕ್ತರು ತನು, ಮನ, ಧನದಿಂದ ಸಹಕರಿಸಬೇಕುʼ ಎಂದು ತಿಳಿಸಿದರು.
ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ʼಬಸವಣ್ಣನವರ ಕೃಪೆ, ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರ ಆಶೀರ್ವಾದ ಶಕ್ತಿಯಿಂದ ಸಮಾಜದಲ್ಲಿ ಒಂದಿಷ್ಟು ಒಳ್ಳೆಯ ಕೆಲಸ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ಅನುಭವ ಮಂಟಪದಲ್ಲಿ ನಿರಂತರ ದಾಸೋಹ ನಡೆಯಬೇಕು. ಕೊನೆಯ ಉಸಿರಿರುವ ವರೆಗೂ ಬಸವತತ್ವ ಪ್ರಚಾರ ಪ್ರಸಾರ ಮಾಡುತ್ತೇನೆʼ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಅಂಗವಾಗಿ ಹೊಸದಾಗಿ ಲೋಗೊ ಬಿಡುಗಡೆ ಮಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಲೋಗೊ ಬಿಡುಗಡೆ ಮಾಡಿದರು.
ಸ್ವಾಗತ ಸಮಿತಿ ರಚನೆ : ಎಲ್ಲ ಭಕ್ತರ ಸಮ್ಮುಖದಲ್ಲಿ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಸಮಿತಿ ರಚಿಸಲಾಯಿತು. ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಮಾಜಿ ಶಾಸಕ ಪ್ರಕಾಶ ಖಂಡ್ರೆ, ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಮಿತಿಯ ಈ ಇಬ್ಬರನ್ನು ಉಭಯ ಪೂಜ್ಯರು ಸನ್ಮಾನಿಸಿದರು.
ಮಾಜಿ ಶಾಸಕ ಪ್ರಕಾಶ ಖಂಡ್ರೆ ಬಸವ ಗುರುವಿನ ಪೂಜೆ ನೆರವೇರಿಸಿದರು. ಉದ್ಯಮಿ ಬಸವರಾಜ ಧನ್ನೂರು, ಬಸವರಾಜ ಬುಳ್ಳಾ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನನ್ನಶೆಟ್ಟಿ, ಶಕುಂತಲಾ ಬೆಲ್ದಾಳೆ, ಡಾ.ದೇವಿಕಾ ನಾಗೂರೆ, ಪಾರ್ವತಿ ಸೋನಾರೆ
ಸೇರಿದಂತೆ ಮುಂತಾದವರು ಸಲಹೆ ಸೂಚನೆ ನೀಡಿದರು.
ಇದನ್ನೂ ಓದಿ : ಬೀದರ್ | ಬ್ರಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯ ಘಟನೆ : ಆಸ್ಪತ್ರೆಗೆ ಸಚಿವದ್ವಯರ ದಿಡೀರ್ ಭೇಟಿ
ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ, ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಶಿವಾನಂದ ಹೈಬತಪುರೆ, ಅಶೋಕ ಚಂದ್ರೆ ಸೇರಿದಂತೆ ಹಲವರು ಇದ್ದರು. ಸಂಗಯ್ಯ ಸ್ವಾಮಿ, ಲೋಕನಾಥ ಚಾಂಗ್ಲೆರಾ ವಚನ ಸಂಗೀತ ನಡೆಸಿ ಕೊಟ್ಟರು. ಬಾಬು ವಾಲಿ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿ, ವಂದಿಸಿದರು.