ಬೆಳಗಾವಿ : ತಾಲ್ಲೂಕಿನ ಜನತೆ ತೋರಿಸುವ ನಿಷ್ಠಾವಂತ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು: ರಮೇಶ ಕತ್ತಿ

Date:

Advertisements

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಗಳ ಆಡಳಿತ ಬೇರೆಯವರ ಕೈಗೆ ಹೋಗಿರುವುದು ನಿಜವಾದ ಜನದ್ರೋಹವಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ್ ಕತ್ತಿ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ವಿಶ್ವರಾಜ ಭವನದಲ್ಲಿ ಶುಕ್ರವಾರ ನಡೆದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡುತ್ತಾ, “ಈ ದ್ರೋಹವನ್ನು ಮರೆಯಬಾರದು. ಮುಂಬರುವ ಸಹಕಾರಿ ಸಂಸ್ಥೆಗಳ ಚುನಾವಣೆಗಳಲ್ಲಿ ಈ ವ್ಯಕ್ತಿಗಳನ್ನು ಸೋಲಿಸಿ, ತಾಲ್ಲೂಕಿನ ಜನತೆ ತೋರಿಸುವ ನಿಷ್ಠಾವಂತ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು,” ಎಂದು ಕರೆ ನೀಡಿದರು.

“ಸಂಕೇಶ್ವರದ ಹಿರಾ ಸಕ್ಕರೆ ಕಾರ್ಖಾನೆಯ ನಷ್ಟವನ್ನು ಪೂರೈಸಲು ಲೀಸ್ ನೀಡುವುದು ಒಂದು ಮಾರ್ಗವಾಗಿತ್ತು. ಆದರೆ ಕೊನೆಯ ಹಂತದಲ್ಲಿ ಕೆಲವು ಸದಸ್ಯರು ನಮ್ಮ ಹಸ್ತ ಹಿಡಿದು ಬೇರೆಯವರ ಜತೆ ಕೈಜೋಡಿಸಿದರು. ಇದು ವಿಶ್ವಾಸಘಾತಕ್ಕೆ ಸರಿಸಮಾನ,” ಎಂದು ಅವರು ಕಿಡಿಕಾರಿದರು

Advertisements

ಶಾಸಕ ನಿಖಿಲ್ ಕತ್ತಿ ಮಾತನಾಡಿ, “ನಾನು ಶಾಸಕರಾಗಿ ಕಳೆದ ಎರಡು ವರ್ಷಗಳಲ್ಲಿ ₹990 ಕೋಟಿ ಅನುದಾನವನ್ನು ಕ್ಷೇತ್ರಕ್ಕೆ ತರಲು ಯಶಸ್ವಿಯಾಗಿದ್ದೇನೆ. ಇದು ದಿ. ಉಮೇಶ್ ಕತ್ತಿ ಅವರ ಕನಸುಗಳನ್ನೇ ಸಾಕಾರಗೊಳಿಸಲು ನಮ್ಮ ಬದ್ಧತೆಯನ್ನೂ ಸೂಚಿಸುತ್ತದೆ,” ಎಂದರು.

“ಇಲ್ಲಿ ಕೆಲವರು ನಮ್ಮ ಕುಟುಂಬದೊಳಗೆ ಬಿರುಕು ತಂದು ‘ಮನೆ ಒಡೆಯುವ’ ಯತ್ನ ಮಾಡಿದ್ದಾರೆ. ಆದರೆ ಕತ್ತಿ ಕುಟುಂಬ ಎಂದೂ ಒಗ್ಗಟ್ಟಿನಿಂದ ಜನಪರ ಕೆಲಸಕ್ಕೆ ಬದ್ಧವಾಗಿದೆ,” ಎಂದು ಸ್ಪಷ್ಟನೆ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದವರು:
ಬೇಮುಲ್ ನಿರ್ದೇಶಕ ರಾಯಪ್ಪ ಡೂಗ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದುರದುಂಡಿ ಪಾಟೀಲ, ನಿರ್ದೇಶಕ ಶೀತಲ ಬ್ಯಾಳಿ, ಗುರು ಕುಲಕರ್ಣಿ, ಪುರಸಭೆ ಸದಸ್ಯ ಮಹಾವೀರ ನಿಲಜಗಿ, ಹಿರಿಯ ಸಹಕಾರಿ ಬಸವರಾಜ ಮಟಗಾರ, ಪ್ರಥ್ವಿ ಕತ್ತಿ, ಪವನ್ ಕತ್ತಿ, ಪಿ.ಎಸ್. ಮುತಾಲಿಕ, ಗಜಾನನ ಕಳ್ಳಿ, ಈರಣ್ಣ ಹೂಗಾರ, ಸುರೇಶ ಬೆಲ್ಲದ, ಶಿವನಗೌಡ ಪಾಟೀಲ, ಸುನೀಲ ನೇರ್ಲಿ, ಎ.ಕೆ. ಪಾಟೀಲ, ಮೀರಾಸಾಬ್ ಮುಲ್ತಾನಿ, ಅಶೋಕ ಪಾಟೀಲ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.

ee dina logo with tagline copy
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ : ಜಿಲ್ಲೆಯಲ್ಲಿ ಇಂದು ತಂಪು ವಾತಾವರಣ – ಮಧ್ಯಮ ಮಳೆಯ ಮುನ್ಸೂಚನೆ

ಇಂದು ಬೆಳಗಾವಿ ಜಿಲ್ಲೆಯಾದ್ಯಂತ ಮೋಡ ಆವರಿಸಿಕೊಂಡಿದ್ದು, ಹವಾಮಾನ ಇಲಾಖೆ ಮಧ್ಯಮ ಮಳೆಯ...

ಬೆಳಗಾವಿ : ಮನೆ ಚಾವಣಿ ಕುಸಿದು ಬಿದ್ದು ವ್ಯಕ್ತಿ ಸಾವು

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನಿಂಗಾಪೂರ ಪೇಟೆಯಲ್ಲಿ ಬುಧವಾರ ನಸುಕಿನಲ್ಲಿ, ಮಳೆಯಿಂದಾಗಿ...

ಬೆಳಗಾವಿ: ಇಂದಿನ ಹವಾಮಾನ ವರದಿ – ಆಗಸ್ಟ್ 20, 2025

ಬೆಳಗಾವಿ ಜಿಲ್ಲೆಯ ಹಲವೆಡೆ ಬುಧವಾರ ದಿನ ಪೂರ್ತಿ ಮೋಡ ಮುಸುಕಿದ ಆಕಾಶ...

ಬೈಕ್ ಮತ್ತು ಬಸ್ ನಡುವೆ ಅಪಘಾತ ಗರ್ಭಿಣಿ ಸಾವು

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಠ ರಸ್ತೆಯಲ್ಲಿ ಬಸ್ ಮತ್ತು ಬೈಕ್...

Download Eedina App Android / iOS

X