ಕಾವಡ್ ಯಾತ್ರಿಗಳ ಗುಂಪೊಂದು ಸಿಆರ್ಪಿಎಫ್ ಯೋಧನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಶನಿವಾರ ನಡೆದಿದೆ.
ಕೇಂದ್ರ ಮೀಸಲು ಪೊಲೀಸ್ ಪಡೆಯ ಯೋಧರೊಬ್ಬರು, ಮಿರ್ಜಾಪುರ ನಿಲ್ದಾಣದಲ್ಲಿ ಬ್ರಹ್ಮಪುತ್ರ ರೈಲಿಗಾಗಿ ಕಾಯುತ್ತಿದ್ದರು. ಈ ವೇಳೆ ಫ್ಲಾಟ್ಫಾಮ್ಗೆ ಬಂದ ಕೆಲವು ಕಾವಡ್ ಯಾತ್ರಿಗಳು ಟಿಕೆಟ್ ಖರೀದಿ ವಿಚಾರವಾಗಿ ಯೋಧನೊಂದಿಗೆ ವಾಗ್ವಾದ ನಡೆಸಿದ್ದಾರೆ. ಬಳಿಕ ಅವರನ್ನು ನೆಲಕ್ಕೆ ಬೀಳಿಸಿ, ಕಾಲಿನಿಂದ ಒದ್ದು ಮನಬಂದಂತೆ ಥಳಿಸಿದ್ದಾರೆ. ಘಟನೆ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮ: ಪೊಲೀಸ್ ಇಲಾಖೆಯ ಮಾದರಿ ಹೆಜ್ಜೆ
ಕೇಸರಿ ಬಣ್ಣದ ವಸ್ತ್ರ ಧರಿಸಿದ ಸುಮಾರು ಏಳೆಂಟು ಮಂದಿ ಕಾವಡ್ ಯಾತ್ರಿಗಳು ಯೋಧನನ್ನು ಸುತ್ತುವರೆದಿದ್ದು, ಅವರನ್ನು ಹಿಡಿದು ಎಳೆಯುತ್ತಿರುವುದು, ಕಾಲಿನಿಂದ ಒದೆಯುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಪ್ರಕರಣ ಸಂಬಂಧ ಏಳು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ರೈಲ್ವೆ ಪೊಲೀಸ್ ಪಡೆಯ ಇನ್ಸ್ಪೆಕ್ಟರ್ ಚಮನ್ ಸಿಂಗ್ ತೋಮರ್ ತಿಳಿಸಿದ್ದಾರೆ.
ಶನಿವಾರ ಬೆಳಿಗ್ಗೆ 9.30ರ ಸುಮಾರಿಗೆ, ಸಿಆರ್ಪಿಎಫ್ ಯೋಧರೊಬ್ಬರು ಮಿರ್ಜಾಪುರ ನಿಲ್ದಾಣದಲ್ಲಿ ಬ್ರಹ್ಮಪುತ್ರ ರೈಲಿಗಾಗಿ ಕಾಯುತ್ತಿದ್ದರು. ಆಗ ಅಲ್ಲಿಗೆ ಬಂದ ಕಾವಡ್ ಯಾತ್ರಿಗಳು ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ. ಸದ್ಯ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
These drugged GuNDAs are shaming the holy Kanwar Yatra, the Hindus and defaming our sacred practice by their hooliganism. They need to be STOPPED.
— Gaurav Pandhi (@GauravPandhi) July 19, 2025
It's outrageous to see how brutally they are beating the CRPF Jawan.
I hope @crpfindia will take a stand! pic.twitter.com/iFoaeZWgsy
ಕಾವಡ ಯಾತ್ರಿಗಳ ಉಗ್ರವಾದಿಗಳ ಕೃತ್ಯಕ್ಕೆ ಸರಕಾರವೇ ಹೊಣೆ ಆದಷ್ಟು ಬೇಗ ಬ್ರಿಕ್ ಹಾಕಬೇಕು ಇದೇ ಕೃತ್ಯ ಮುಸ್ಲಿಂ ಸಮುದಾಯ ಮಾಡಿದ್ದರೆ ಈ ಗೋದಿ ಮಿಡಿಯಾಗಳು ಬಾಯ್ ಬಾಯ್ ಬಡ್ಕೊಳ್ತಾಯಿದ್ದು ಈಗ ನಿಮ್ಮ ಬಾಯಿ ಸತ್ತು ಹೋಗಿವೆ