ದೊಡ್ಡಬಳ್ಳಾಪುರ | ಹೊರಗುತ್ತಿಗೆ ನಿಯಮಕ್ಕೆ ವಿರೋಧ; ಅರಣ್ಯ ಇಲಾಖೆ ಮುಂದೆ ನೌಕರರ ಮೌನ ಪ್ರತಿಭಟನೆ

Date:

Advertisements

ತಮ್ಮ ಜೀವದ ಹಂಗು ತೊರೆದು, ದಿನಗೂಲಿ ನೌಕರರಾಗಿ ಅರಣ್ಯ ರಕ್ಷಣೆ ಮಾಡುತ್ತಿದ್ದ ನೌಕರರನ್ನು ಏಕಾಏಕಿ ಅರಣ್ಯ ಇಲಾಖೆ ಹೊರಗುತ್ತಿಗೆ ವಿಭಾಗಕ್ಕೆ ಸೇರಿಸಿರುವುದನ್ನು ವಿರೋಧಿಸಿ ದಿನಗೂಲಿ ನೌಕರರು ಅರಣ್ಯ ಇಲಾಖೆ ಮುಂದೆ ಮೌನ ಪ್ರತಿಭಟನೆ ನಡೆಸಿದರು.

ದೊಡ್ಡಬಳ್ಳಾಪುರ ವಲಯ ಅರಣ್ಯಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ 14 ಜನ ಕಳೆದ 25-30 ವರ್ಷದಿಂದ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಈವರೆಗೂ ಇವರು ನಮೂನೆ-ಎಫ್‌ಎಸಿ-63ರಡಿಯಲ್ಲಿ ಸರ್ಕಾರದಿಂದ ನೇರವಾಗಿ ಸಂಬಳ ಪಡೆಯುತ್ತಿದ್ದರು. ಇದೀಗ ಅರಣ್ಯ ಇಲಾಖೆ 14 ದಿನಗೂಲಿ ನೌಕರರನ್ನೂ ಗುತ್ತಿಗೆ ವಿಭಾಗಕ್ಕೆ ಸೇರಿಸಿ ಗುತ್ತಿಗೆಯವರಿಂದ ಸಂಬಳ ಪಡೆಯುವಂತೆ ಮಾಡಿದೆ. ಈ ನಿರ್ಧಾರ ದಿನಗೂಲಿ ನೌಕರರ ಬದುಕು ಅತಂತ್ರವಾಗುವಂತೆ ಮಾಡಿದೆ.

WhatsApp Image 2025 07 30 at 6.46.16 PM 1

ಮಾಧ್ಯಮದೊಂದಿಗೆ ಮಾತನಾಡಿದ ದಿನಗೂಲಿ ನೌಕರ ಮಂಜುನಾಥ್ ನಾಯ್ಕ್, “ದಿನಗೂಲಿ ನೌಕರರಿಗೆ ಸದ್ಯ ತಿಂಗಳ ಸಂಬಳ ನೌಕರರ ಅಕೌಂಟ್ ಗಳಿಗೆ ನೇರವಾಗಿ ಬರುತ್ತಿದೆ. ಆದರೆ, ಈಗ ಹಣ ದೋಚುವ ದುರುದ್ದೇಶದಿಂದ ಹೊರಗುತ್ತಿಗೆಯನ್ನ ಜಾರಿ ಮಾಡಿದ್ದಾರೆ. ಹೊರಗುತ್ತಿಯಲ್ಲಿ 10 ಜನರು ಮಾಡುವ ಕೆಲಸವನ್ನ 5 ಜನರ ಕೈಯಲ್ಲಿ ಮಾಡಿಸಿ 5 ಜನರ ಹಣವನ್ನ ಲೂಟಿ ಮಾಡುತ್ತಾರೆ. ಹೊರಗುತ್ತಿಗೆಯಲ್ಲಿ ನಮ್ಮನ್ನು ಕೇಳುವರೇ ಇಲ್ಲದ ಪರಿಸ್ಥಿತಿ ಇದೆ. ಪ್ರಾಣದ ಹಂಗು ತೊರೆದು ಅರಣ್ಯ ಕಾಪಾಡುತ್ತೇವೆ. ಈ ವೇಳೆ ನಮ್ಮ ಪ್ರಾಣಕ್ಕೆ ಹಾನಿಯಾದರೆ ನಮ್ಮ ಕುಟುಂಬಗಳಿಗೂ ಇವರು ಸುದ್ದಿ ತಿಳಿಸುವುದಿಲ್ಲ. ಹೊರಗುತ್ತಿಗೆಯವರನ್ನ ಕೇಳಿದ್ರೆ ಅರಣ್ಯ ಇಲಾಖೆಯ ಜವಾಬ್ದಾರಿ ಅಂತಾರೆ, ಅರಣ್ಯ ಇಲಾಖೆ ಕೇಳಿದ್ರೆ ಹೊರಗುತ್ತಿಗೆ ನೌಕರರೆಂದು ಸಬೂಬು ಹೇಳ್ತಾರೆ. ನುಣುಕಿಕೊಳ್ಳುವುದಕ್ಕಾಗಿಯೇ ಹೊರಗುತ್ತಿಗೆ ನಿಯಮ ತಂದಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisements
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X