ದಾವಣಗೆರೆ | ಜಗಳೂರು ತಾಲೂಕಿನಲ್ಲಿ ಯೂರಿಯಾ ವಿತರಣೆ, ಗೊಬ್ಬರ ಸಿಗದೇ ರೈತರ ನಿರಾಸೆ

Date:

Advertisements

ಯೂರಿಯ ರಸಗೊಬ್ಬರದ ಅಭಾವದಿಂದ ಕಂಗೆಟ್ಟಿರುವ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ರೈತರಿಗೆ
ವಿವಿಧ ಭಾಗಗಳಲ್ಲಿ ಇಂದು ಕೃಷಿ ಅಧಿಕಾರಿಗಳು, ರೈತ ಸಂಘ ಮತ್ತು ಪೊಲೀಸರ ಬಂದೋಬಸ್ತ್ ನಲ್ಲಿ ಯೂರಿಯಾ ಗೊಬ್ಬರ ವಿತರಣೆ ಮಾಡಲಾಯಿತು.‌ ಆದರೂ ಬಹುತೇಕ ರೈತರು ಗೊಬ್ಬರ ಖಾಲಿಯಾದ ಹಿನ್ನಲೆಯಲ್ಲಿ ನಿರಾಸೆಯಿಂದ ಬರಿ ಕೈಯಲ್ಲಿ ಹಿಂದಿರುಗಿದರು.

1002469415

ಬಹುತೇಕ ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆ ಹಾಗೂ ಜಗಳೂರು ತಾಲೂಕಿನ ವಿವಿಧ ಭಾಗಗಳಲ್ಲಿ ರೈತರು ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳನ್ನು ಬಿತ್ತನೆ ಮಾಡಿದ್ದು, ಮಳೆ ಹೆಚ್ಚಿರುವ ಕಾರಣ ಬೆಳೆಗಳಿಗೆ ಶೀತ ತಪ್ಪಿಸಲು ಮತ್ತು ಬೆಳವಣಿಗೆಗೆ ಪೋಷಕಾಂಶಗಳನ್ನು ನೀಡಲು ಯೂರಿಯಾ ಅಭಾವ ಉಂಟಾಗಿತ್ತು. ಈ ಹಂತದಲ್ಲಿ ತಿಂಗಳಿನಿಂದಲೂ ರೈತ ಸಂಘ ಮತ್ತು ರೈತರು ಪ್ರತಿಭಟನೆಗೆ ಇಳಿದಿದ್ದರು.

1002469486

ಸಮರ್ಪಕವಾಗಿ ಗೊಬ್ಬರ ವಿತರಿಸದ ಮತ್ತು ತಾಲೂಕಿನ ಅಗತ್ಯಕ್ಕೆ ಸಾಕಷ್ಟು ಗೊಬ್ಬರ ಸರಬರಾಜು ಮಾಡದ ಕೃಷಿ ಇಲಾಖೆಯ ವೈಫಲ್ಯವನ್ನು ವಿರೋಧಿಸಿ ಗುರುವಾರವಷ್ಟೇ ವಾಸುದೇವ ಮೇಟಿ ಬಣದ ತಾಲೂಕು ಅಧ್ಯಕ್ಷ ಕುಮಾರ್ ಭರಮಸಮುದ್ರ ಸೇರಿದಂತೆ ರೈತ ಸಂಘಟನೆಗಳ ಮುಖಂಡರು, ರೈತರು ಕೃಷಿ ಇಲಾಖೆ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದ್ದರು.

Advertisements
1002469356 1

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಚಳ್ಳಕೆರೆ ರೈಲ್ವೇ ನಿಲ್ದಾಣದಲ್ಲಿ ಅದಿರು ಸಾಗಾಣಿಕೆಯಿಂದ ಜೀವಭಯ, ಮಾಲಿನ್ಯ; ತಾತ್ಕಾಲಿಕ ಸ್ಥಗಿತಕ್ಕೆ ಜಿಲ್ಲಾಧಿಕಾರಿ ಸೂಚನೆ

ಈ ಹಿನ್ನೆಲೆಯಲ್ಲಿ ದಾವಣಗೆರೆ ಕೃಷಿ ಜಂಟಿ ನಿರ್ದೇಶಕರು ಮತ್ತು ತಾಲೂಕು ಸಹಾಯಕ ನಿರ್ದೇಶಕರು ಶುಕ್ರವಾರ ತಾಲೂಕಿಗೆ 170 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರವನ್ನು ಸರಬರಾಜು ಮಾಡಿ ಜಗಳೂರು ಎಪಿಎಂಸಿ ಆವರಣದಲ್ಲಿ 80 ಟನ್ ಸೇರಿದಂತೆ ತಾಲೂಕಿನ ಬಿದರೇಕೆರೆ, ಹೊಸಕೆರೆ, ಮುಸ್ಟೂರು ಅಣಬೂರು ಗ್ರಾಮಗಳಲ್ಲಿ ಯೂರಿಯಾ ವಿತರಣೆ ಮಾಡಲಾಯಿತು. ಗೊಬ್ಬರಕ್ಕಾಗಿ ಜಾತಕ ಪಕ್ಷಿಯಂತೆ ಕಾದಿದ್ದ ರೈತರು ಬೆಳಗ್ಗಿನಿಂದಲೂ ಸರತಿ ಸಾಲಿನಲ್ಲಿ ನಿಂತು ಗೊಬ್ಬರವನ್ನು ಕೊಂಡುಕೊಂಡರು. ಮಹಿಳೆಯರು ಕೂಡ ಸರತಿಯಲ್ಲಿ ನಿಂತು ಗೊಬ್ಬರವನ್ನು ಕೊಂಡುಕೊಂಡರು. ತಾಲೂಕಿನ ವಿವಿಧ ಭಾಗಗಳಿಂದಲೂ ಸೇರಿ ಒಟ್ಟು ನಾಲ್ಕರಿಂದ ಐದು ಸಾವಿರ ರೈತರು ಗೊಬ್ಬರಕ್ಕಾಗಿ ಆಗಮಿಸಿದ್ದರು. ಮಧ್ಯಾಹ್ನದ ವೇಳೆಗೆ ಯೂರಿಯಾ ಖಾಲಿಯಾದ ಹಿನ್ನೆಲೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ರೈತರು ಗೊಬ್ಬರವಿಲ್ಲದೆ ಖಾಲಿ ಕೈಯಲ್ಲಿ ನಿರಾಸೆಯಿಂದ ಹಿಂದಿರುಗಿದರು.

IMG 20250205 WA0034
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಬೀದಿ ನಾಯಿ ದಾಳಿಗೆ ಗಾಯಗೊಂಡು ರೇಬೀಸ್ ತಗುಲಿದ್ದ ಮಗು ಸಾವು

ದಾವಣಗೆರೆ ನಗರದ ಶಾಸ್ತ್ರೀನಗರದಲ್ಲಿ ಮನೆ ಮುಂದೆ ಆಟ ಆಡುವ ವೇಳೆ ಬೀದಿ...

ಚಿಕ್ಕಮಗಳೂರು l ಧಾರಾಕಾರ ಮಳೆ: ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ನಾಳೆ ರಜೆ ಘೋಷಣೆ

ಮಲೆನಾಡಿನಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಮಕ್ಕಳ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ...

ದಾವಣಗೆರೆ | ನಾಗಮೋಹನ ದಾಸ್ ಆಯೋಗದ ವೈಜ್ಞಾನಿಕ ಒಳಮೀಸಲಾತಿ ವರದಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

ನ್ಯಾ.ನಾಗಮೋಹನ ದಾಸ್ ಆಯೋಗದ ಒಳಮೀಸಲಾತಿ ವರದಿಯು ವೈಜ್ಞಾನಿಕವಾಗಿದ್ದು, ಪ್ರಸ್ತುತ ಅಧಿವೇಶನದಲ್ಲಿ ಜಾರಿಗೊಳಿಸಬೇಕು...

Download Eedina App Android / iOS

X