ರಾಯಚೂರು| ಚುನಾವಣಾ ಆಯೋಗವನ್ನು ದುರ್ಬಲಗೊಳಿಸುವ ಹುನ್ನಾರ; ಟಿಯುಸಿಐ ಆರೋಪ

Date:

Advertisements

ಕೇಂದ್ರದ ಮೋದಿ ಸರ್ಕಾರವು ರಾಜ್ಯಸಭೆಯಲ್ಲಿ ಮಂಡಿಸಿದ ಹೊಸ ಚುನಾವಣಾ ಮಸೂದೆ ಅಂಗೀಕಾರವಾಗಿದ್ದೇ ಆದರೆ, ಸಂಸತ್ತು ಕೇವಲ ಕಲ್ಲು ಮಣ್ಣಿನ ಕಟ್ಟಡವಾಗಿ ಉಳಿಯಲಿದೆ ಎಂದು ಟಿಯುಸಿಐ ರಾಜ್ಯಾಧ್ಯಕ್ಷ ಆರ್ ಮಾನಸಯ್ಯ ಆತಂಕ ವ್ಯಕ್ತಪಡಿಸಿದರು.

“ಪ್ರಜಾಪ್ರಭುತ್ವದ ಆಧಾರ ಸ್ಥಂಭವಾದ ಭಾರತ ಚುನಾವಣಾ ಆಯೋಗವು ನೂತನ ಮಸೂದೆ ಜಾರಿಯಾದರೆ ಭಾಜಪ ಚುನಾವಣಾ ಆಯೋಗವಾಗಲಿದೆ. ಪ್ರಸ್ತಾಪಿತ ಮಸೂದೆಯು ಭಾರತದ ಮುಖ್ಯ ನ್ಯಾಯಮೂರ್ತಿಯನ್ನು, ಸರ್ಕಾರದ ಕಾರ್ಯದರ್ಶಿ ದರ್ಜೆಗೆ ತಳ್ಳಲಿದೆ. ಭಾರತ ಮುಖ್ಯ ಚುನಾವಣಾಯುಕ್ತರನ್ನು ಚುನಾಯಿಸುವ(ನೇಮಿಸುವ)ಅಧಿಕಾರ ಪ್ರಧಾನಿ ಕಾರ್ಯಾಲಯದ ಪಾಲಾಗುತ್ತದೆ” ಎಂದು ಹೇಳಿದರು.

“ಸ್ವಾಯತ್ತತೆ ಕಳೆದುಕೊಂಡ, ಬಿಜೆಪಿ ಪ್ರಾಯೋಜಿತ ಚುನಾವಣಾ ಆಯೋಗವು ಬಿಜೆಪಿಯೇತರ ಪಕ್ಷಗಳನ್ನು ಅಧಿಕಾರಕ್ಕೇರಲು ಬಿಡಬಹುದೆ? ಪ್ರಜಾಪ್ರಭುತ್ವ ಹಾಗೂ ಪಾರದರ್ಶಕ ಪದ್ದತಿಯಡಿ ಬರುವ ಲೋಕಸಭಾ ಚುನಾವಣೆ ನಡೆದರೆ ಕರ್ನಾಟಕ ಕಲಿಸಿದ ಪಾಠವನ್ನೇ ಬಿಜೆಪಿ ಮರಳಿ ಕಲಿಯಬೇಕಾಗುತ್ತದೆ” ಎಂದರು.

Advertisements

ಈ ಸುದ್ದಿ ಓದಿದ್ದೀರಾ? ಯಾದಗಿರಿ | ಅನಧಿಕೃತ ಇ-ಖಾತೆಗಳು ಸೃಷ್ಠಿ; ಕ್ರಮಕ್ಕೆ ನಗರಸಭೆ ಪೌರಾಯುಕ್ತ ಆಗ್ರಹ

“ಬಿಜೆಪಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಾಗಿದೆ. ದರಿಂದ ಪಾರಾಗಲು ಚುನಾವಣಾ ಆಯೋಗವನ್ನೇ ತನ್ನ ರಾಜಕೀಯ ಸಂಸ್ಥೆಯನ್ನಾಗಿಸಲು ಈ ಮಸೂದೆಯ ಅಂಗೀಕಾರಕ್ಕೆ ಮುಂದಾಗಿದೆ” ಎಂದು ಆರೋಪಿಸಿದರು.

ದೇಶದ ಎಲ್ಲ ಪ್ರತಿಪಕ್ಷಗಳು, ಎಡ ಶಕ್ತಿಗಳು, ಕಾರ್ಮಿಕ-ರೈತ ಸಂಘಟನೆಗಳು, ದಮನಿತ ಸಮುದಾಯಗಳಾದ ದಲಿತ, ಕ್ರೈಸ್ತ, ಮುಸ್ಲಿಂ, ಆದಿವಾಸಿ ಜನಾಂಗಗಳು ವಿಶೇಷವಾಗಿ ಮಹಿಳೆ, ವಿದ್ಯಾರ್ಥಿಗಳು, ಯುವಜನಾಂಗಗಳು ಚುನಾವಣಾ ಆಯೋಗದ ಉಳಿವಿಗಾಗಿ ದನಿ ಎತ್ತಬೇಕಿದೆ ಎಂದು ಕರೆ ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X