ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

Date:

Advertisements

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್ ಮೆರವಣಿಗೆ ನಡೆಸಿ ವರ್ಗಾ ಕಂಪನಿ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ನಮಗೆ ಕೆಲಸ ನೀಡಬೇಕು, ಇಲ್ಲದಿದ್ದರೆ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕಾರ್ಮಿಕರು ಎಚ್ಚರಿಕೆ ನೀಡಿದ್ದಾರೆ.

ವರ್ಗಾ ಅಟ್ಯಾಚ್ಮೆಂಟ್ ಪ್ರೈ . ಲಿಮಿಟೆಡ್ ನಲ್ಲಿ ಸುಮಾರು 81 ಖಾಯಂ ಕಾರ್ಮಿಕರು 19 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ, ಅವರೆಲ್ಲರೂ ಮಾಲೂರು, ಕೆಜಿಎಫ್, ಕೋಲಾರ, ಬಂಗಾರಪೇಟೆ, ನರಸಾಪುರ, ಮಾಸ್ತಿ ಮತ್ತು ಮುಳಬಾಗಿಲಿನವರು. ಈ ಕಂಪನಿಯು 19 ವರ್ಷಗಳಿಂದ ಬುಲ್ಡೋಜರ್ ಗಳಿಗೆ ಸಂಬಂಧಿಸಿದ ಬಿಡಿಭಾಗಗಳನ್ನು ತಯಾರಿಸುತ್ತಿದೆ ಮತ್ತು ಯುಎಸ್, ನ್ಯೂಜಿಲೆಂಡ್, ನೆದರ್‌ಲ್ಯಾಂಡ್‌, ಯುಕೆ, ನಾರ್ವೆ ಇತ್ಯಾದಿಗಳಿಗೆ ರಫ್ತು ಮಾಡುತ್ತಿದೆ. ಆದಾಗ್ಯೂ, ಈ ಕಾರ್ಮಿಕರಿಗೆ ಸರಿಯಾದ ವೇತನ ಇಲ್ಲ. ವರ್ಗಾ ಅಟ್ಯಾಚ್‌ಮಂಟ್ ಯೂನಿಟ್ -1 ರಿಂದ ಗಳಿಸಿದ ಲಾಭದಿಂದ ಈ ಕಂಪನಿಯ ಆಡಳಿತ ಮಂಡಳಿಯು ಇನ್ನೂ ಎರಡು ಹೊಸ ಘಟಕಗಳನ್ನು (ಯೂನಿಟ್ -2 ಮತ್ತು ಯೂನಿಟ್ -3) ತೆರೆಯಲು ಸಾಧ್ಯವಾಯಿತು, ಇದನ್ನು ಈ ಕಂಪನಿಯ ಕಾರ್ಮಿಕರು ಸಕ್ರಿಯಗೊಳಿಸಿದರು. ಆದರೆ ಇದೀಗ ಕಂಪನಿ 81 ಕಾರ್ಮಿಕರನ್ನು ಹೊರಹಾಕಿರುವುದು ಅಷ್ಟೂ ಕಾರ್ಮಿಕರ ಜೀವನವನ್ನು ಸಂಕಷ್ಟಕ್ಕೆ ಈಡು ಮಾಡಿದಂತಾಗಿದೆ ಎಂದು ಕಾರ್ಮಿಕರು ಅಳಲು ತೋಡಿಕೊಂಡರು.

IMG 20250822 WA0005

ಸಿಐಟಿಯು ತಾಲೂಕು ಸಂಚಾಲಕ ವೀರಭದ್ರ ಮಾತನಾಡಿ, “ನಿರಂತರವಾಗಿ ಕಾನೂನು ರೀತಿಯಲ್ಲಿ ನಾವು ಪ್ರತಿಭಟನೆ ಮಾಡಕತ್ತಿದ್ದೇವೆ, ಮಾಲೂರು ಶಾಸಕ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೂ ಸಹ ತಂದಿದ್ದೇವೆ. ವರ್ಗಾ ಕಂಪನಿ 81 ಕಾರ್ಮಿಕರನ್ನು ಹೊರ ಹಾಕಿದ್ದು ಸರಿಯಲ್ಲ ಇದರ ವಿರುದ್ಧ ನಾವು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದೇವೆ” ಎಂದರು.

Advertisements

ಇದನ್ನೂ ಓದಿ: ಕೋಲಾರ | ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್ ಗಾಂಧಿ, ದೇವರಾಜ ಅರಸು ಜನ್ಮ ದಿನಾಚರಣೆ

ವರ್ಗಾ ಕಂಪನಿಯ ಕಾರ್ಮಿಕ ಮಾತಾನಾಡಿ, “ನಾವು ರಾತ್ರಿ ಹಗಲು ಕೆಲಸ ಮಾಡಿ ಕಂಪನಿ ಬೆಳೆಸಿದ್ದೇವೆ. ಆದ್ರೆ ವರ್ಗಾ ನ ವೀರ್ಯ ಅಂತ ಮಾಡಿ ನಮಗೆ ನೋಟಿಸ್ ನೀಡಿ ಹೊರಹಾಕಿದ್ದಾರೆ, ನಾವು ನಮ್ಮ ಬೆವರು ಸುರಿಸಿ ಕೆಲಸ ಮಾಡಿದ್ದೇವೆ, ನಮಗೆ ನ್ಯಾಯ ಸಿಗಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡ್ತೇವೆ” ಎಂದು ತಿಳಿಸಿದರು.

20 ವರ್ಷದಿಂದ ದುಡಿದ ಕಾರ್ಮಿಕರನ್ನೂ ಹೊರ ಹಾಕಿದ್ದು ಸರಿಯಲ್ಲ. ಕೂಡಲೇ ಶಮಾಲೂರು ಶಾಸಕರು ಹಾಗೂ ಕೋಲಾರ ಜಿಲ್ಲಾಧಿಕಾರಿಗಳು ಸಮಸ್ಯೆ ಬಗೆಹರಿಸಿ ಕಾರ್ಮಿಕರಿಗೆ ಕೆಲಸ ಕೊಡಿಸಬೇಕು, ನಾವು ಸರ್ಕಾರ ಹಾಗೂ ಕಾರ್ಮಿಕ ಸಚಿವರ ಗಮನಕ್ಕೆ ತಂದಿದ್ದೇವೆ ಕೂಡಲೇ ಸಮಸ್ಯೆ ಬಗೆಹರಿಸಿ ಎಂದು ಹೇಳಿದ ಸಿಐಟಿಯು ರಾಜ್ಯ ಮುಖಂಡ ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X