ಗುಬ್ಬಿ | ರೈತನ ಕೃಷಿ ಚಟುವಟಿಕೆಗೆ ಜೇನು ಸಾಕಾಣಿಕೆ ವರದಾನ : ಪುಷ್ಪಲತಾ

Date:

Advertisements

ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಘಟವಾದ ಪರಾಗಸ್ಪರ್ಶ ಕ್ರಿಯೆಗೆ ಜೇನು ಸಾಕಾಣಿಕೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನಲೆ ರೈತರು ಹೆಚ್ಚು ಜೇನು ಸಾಕಾಣಿಕೆ ತರಬೇತಿ ಪಡೆಯಿರಿ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಪುಷ್ಪಲತಾ ಕರೆ ನೀಡಿದರು.

ಗುಬ್ಬಿ ಪಟ್ಟಣದ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ನಡೆದ ಜೇನು ಸಾಕಾಣಿಕೆ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು ಜೇನು ಹುಳು ಗಿಡದಿಂದ ಗಿಡಕ್ಕೆ ಪರಾಗಸ್ಪರ್ಶ ಕ್ರಿಯೆ ಅತ್ಯುತ್ತಮವಾಗಿ ನಡೆಸುತ್ತದೆ. ಈ ಹಿನ್ನಲೆ ಬೆಳೆ ಇಳುವರಿ ಹೆಚ್ಚಲಿದೆ. ಈಗಾಗಲೇ ತೆಂಗು ಅಡಿಕೆ ಬೆಳೆ ಇಳುವರಿ ಕುಸಿತ ಕಾಣುತ್ತಿದೆ. ಈ ಸಮಯ ಜೇನುಕೃಷಿ ಉತ್ತಮ ಸಲಹೆ ಎಂದರು.

ಪ್ರತಿ ವರ್ಷ ಬೆಳೆಗಳಿಗೆ ಹೊಸ ರೋಗಗಳು ಕಾಣಿಸಿಕೊಳ್ಳುತ್ತದೆ. ಪರಾಗಸ್ಪರ್ಶ ಎನ್ನುವುದು ಕಡಿಮೆಯಾಗಿರುವುದು ಸಹ ಇದಕ್ಕೆ ಒಂದು ಕಾರಣ ಎನ್ನುವುದು. ಜೇನು ಕೃಷಿಗೆ ಕಡಿಮೆ ಸಮಯ ವ್ಯಯ ಮಾಡಿದರೆ ಸಾಕು. ಕೃಷಿ ಮಧ್ಯೆ ನಡೆಯುವ ಹುಳು ಸಾಕಾಣಿಕೆ ಉತ್ತಮ ಜೇನುತುಪ್ಪ ಸಹ ಸಿಗಲಿದೆ. ಇದಕ್ಕೂ ಮಾರುಕಟ್ಟೆಯಲ್ಲಿ ಬೇಡಿಕೆಯ ಮೊತ್ತ ಸಿಗಲಿದೆ. ಕೆಜಿಗೆ 500 ರಿಂದ ಮಾರಾಟ ಆಗುತ್ತದೆ. ಮರದಿಂದ ಮರಕ್ಕೆ ಹಾರುವ ಜೇನುಹುಳು ಹೂವಿನಲ್ಲಿ ತುಪ್ಪ ಹೀರುವ ಜೊತೆ ಹೂವಿನ ಪರಾಗಸ್ಪರ್ಶ ಮಾಡುತ್ತದೆ. ಈ ಬಗ್ಗೆ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ರೈತರಿಂದ ಮಾಹಿತಿ ಸಿಗುತ್ತದೆ. ಸರ್ಕಾರ ಜೇನು ಕೃಷಿಗೆ ಸಬ್ಸಿಡಿ ನೀಡುತ್ತಿದೆ. ಹೆಚ್ಚಿನ ಮಾಹಿತಿ ತೋಟಗಾರಿಕೆ ಇಲಾಖೆಯಲ್ಲಿ ಪಡೆಯಬಹುದಾಗಿದೆ ಎಂದರು.

Advertisements

ಜೇನು ಸಾಕಾಣಿಕೆ ತರಬೇತಿದಾರ ಶ್ರೀಧರ್ ಮಾತನಾಡಿ ಜೇನುಹುಳು ಸಾಕಾಣಿಕೆ ಭಯ ಪಡುವ ಅಗತ್ಯವಿಲ್ಲ. ತೋಟದಲ್ಲಿ ಸ್ವಲ್ಪ ಜಾಗ ನಿಗದಿ ಮಾಡಬೇಕಿದೆ. ಸ್ವಚ್ಛತೆ ಕಾಪಾಡಿದರೆ ಜೇನುಕೃಷಿ ಅಚ್ಚುಕಟ್ಟಾಗಿ ನಡೆಸಬಹುದು. ತುಡುವೆ ಜೇನು ನಮ್ಮಲ್ಲಿ ಬಹು ಬೇಡಿಕೆಯ ಸಾಕಾಣಿಕೆ ಹುಳು. ಪ್ರತಿ ನಿತ್ಯ ಅರ್ಧ ಗಂಟೆ ಸಮಯ ಸಾಕಾಣಿಕೆಗೆ ನೀಡಿದರೆ ನಿಮ್ಮ ತೋಟದಲ್ಲಿ ವರ್ಷದಲ್ಲೇ ಉತ್ತಮ ಇಳುವರಿ ನೋಡಬಹುದಾಗಿದೆ. ಜೇನು ಕೃಷಿಗೆ ಸರ್ಕಾರ ಸಾಕಾಣಿಕೆ ಪೆಟ್ಟಿಗೆಗೆ ಸಬ್ಸಿಡಿ ನೀಡುತ್ತದೆ. ಇಚ್ಛೆಯುಳ್ಳ ರೈತರು ಪೆಟ್ಟಿಗೆ ಖರೀದಿಗೆ ತೋಟಗಾರಿಕೆ ಇಲಾಖೆಯಲ್ಲಿ ಅರ್ಜಿ ಪಡೆದು ಜೇನು ಸಾಕಾಣಿಕೆ ಮಾಡಬಹುದು. ತರಬೇತಿ ಪಡೆದ ರೈತರು ನಮ್ಮ ಜಿಲ್ಲೆಯಲ್ಲಿ ಬಹಳ ಮಂದಿ ಇದ್ದಾರೆ. ಯಶಸ್ಸು ಕಂಡ ರೈತರು ಸಹ ಇದ್ದಾರೆ. ತುಪ್ಪ ಸಹ ಬೇಡಿಕೆ ಇದೆ. ಆಸಕ್ತ ರೈತರು ತೋಟಗಾರಿಕೆ ಇಲಾಖೆ ಮೂಲಕ ಸಂಪರ್ಕಿಸಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಫಲಾನುಭವಿ ರೈತರಿಗೆ ಜೇನು ಪೆಟ್ಟಿಗೆ ವಿತರಣೆ ಮಾಡಲಾಯಿತು. ವೇದಿಕೆಯಲ್ಲಿ ತೋಟಗಾರಿಕೆ ಅಧಿಕಾರಿಗಳಾದ ಜಗದೀಶ್, ಗವಿರಂಗಸ್ವಾಮಿ, ಐಡಿಎಫ್ ಸಂಸ್ಥೆಯ ಗಿರೀಶ್ ಸೇರಿದಂತೆ ತರಬೇತಿಗೆ ನೂರಾರು ರೈತರು ಆಗಮಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X