ದಾವಣಗೆರೆ | ಸಾಹಿತಿ, ಸಾಹಿತ್ಯ ವ್ಯಕ್ತಿತ್ವವನ್ನು ಬದಲಾಯಿಸಬೇಕು: ಡಾ. ಲೋಕೇಶ್ ಅಗಸನಕಟ್ಟೆ

Date:

Advertisements
  • ವೆಂಕಟ್ರಮಣ ಬೆಳಗೆರೆಯವರ ‘ಧರಣಿ ಮಂಡಲ’ ಕವನ ಸಂಕಲನ ಲೋಕಾರ್ಪಣೆ.
  • ಕವಿ, ಸಾಹಿತಿ, ರಾಜಕಾರಣಿಗಳು ಸದಾ ಎಲ್ಲರನ್ನೂ ತಲುಪವಂತಿರಬೇಕು.

ಸಾಹಿತಿ ಮತ್ತು ಸಾಹಿತ್ಯ ನಮ್ಮ ವ್ಯಕ್ತಿತ್ವವನ್ನು ಬದಲಾಯಿಸುವಂತಾಗಬೇಕು. ಮಾನವೀಯತೆಯು ಮತ್ತೆ ಜಾಗೃತಿ ಮೂಡಿಸುವಂತಾಗಬೇಕು. ಸಾಹಿತ್ಯ ಓದಿದಾಗ ಕೆಲವು ಗಂಟೆಗಳಿಗಾದರೂ ಹೊಸತನದ ಅನುಭವ ತಂದುಕೊಡುವಂತಾಗಬೇಕು ಎಂದು ಸಾಹಿತಿ ಡಾ. ಲೋಕೇಶ್ ಅಗಸನಕಟ್ಟೆ ಹೇಳಿದರು.

ದಾವಣಗೆರೆ ನಗರದಲ್ಲಿ ನೀವು-ನಾವು ಸಾಂಸ್ಕೃತಿಕ ವೇದಿಕೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ವೆಂಕಟ್ರಮಣ ಬೆಳಗೆರೆಯವರ ‘ಧರಣಿ ಮಂಡಲ’ ಕವನ ಸಂಕಲನ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

“ಕವಿ, ಸಾಹಿತಿ, ರಾಜಕಾರಣಿ ಸದಾ ಎಲ್ಲರನ್ನೂ ತಲುಪವಂತಿರಬೇಕು. ದ್ವೀಪಗಳಂತಾಗಿರುವ ಕಾರಣಕ್ಕೆ ಸಂಬಂಧ ದೂರವಾಗಿ ಅಂತರ್ಮುಖಿ ಆಗುತ್ತಿದ್ದೇವೆ. ಸಾಹಿತಿಗಳು ಒಳಗೊಂಡಂತೆ ಎಲ್ಲರಿಗೂ ಚಲನಶೀಲತೆ ಬೇಕು. ಇಲ್ಲದಿದ್ದರೆ ಸತ್ತಂತೆ. ಅನೇಕ ಕಾರಣಗಳಿಂದ ಸಹಜ ಶೀಲತೆಯಿಂದ ಕೃತಿಮತೆಯೆಡೆಗೆ ಸಾಗುತ್ತಿದ್ದೇವೆ. ಮಾನವೀಯತೆಯೇ ಕಾಣೆಯಾಗಿ ಪ್ರಯತ್ನ ಪೂರ್ವಕವಾಗಿ ಅಂತರ ಕಾಪಾಡಿಕೊಳ್ಳುತ್ತಿದ್ದೇವೆ. ಈಗಿನ ವಾತಾವರಣ ನೋಡಿದರೆ ಏನು ಕಲಿಯಬೇಕು” ಎಂದು ಪ್ರಶ್ನಿಸಿದರು.

Advertisements

ಈ ಸುದ್ದಿ ಓದಿದ್ದೀರಾ? ಕೊಡಗು | ಬಸ್‌ ಢಿಕ್ಕಿ; ಉರುಳಿ ಬಿದ್ದ ಜ.ತಿಮ್ಮಯ್ಯ ಪ್ರತಿಮೆ

“ಸಾಹಿತಿ ವೆಂಕಟ್ರಮಣ ಬೆಳಗೆರೆಯವರ ಕವನ ಸಂಕಲನಗಳಲ್ಲಿ ಎಲ್ಲದರ ಮುಕ್ತತೆ ಇದೆ. ಕವಿತೆಗಳು ನೇರವಾಗಿ ಗದ್ಯದ ಮೂಲಕ ಹೋಗುತ್ತಿರುವಾಗ ಗುರಿ ತಲುಪುತ್ತಿವೆ. ಆದರೆ, ನೈಜ ಗುರಿ ತಲುಪುತ್ತವೆ ಎಂದು ಹೇಳುವಂತಿಲ್ಲ” ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ. ವಾಮದೇವಪ್ಪ, ಸಾಹಿತಿ ವೆಂಕಟ್ರಮಣ ಬೆಳಗೆರೆ, ಮೋಹನ್ ಕುಮಾರ್, ಸಂತೆಬೆನ್ನೂರು ಫೈಜಟ್ರಾಜ್, ಅರುಣಾ ಕುಮಾರಿ ಬಿರಾದಾರ್, ಸಿದ್ದರಾಜು ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

Download Eedina App Android / iOS

X