ಬೀದರ್‌ | ಜಾನಪದ ಸಾಹಿತ್ಯದಲ್ಲಿ ನೆಲಮೂಲ ಸಂಸ್ಕೃತಿ ಅಡಗಿದೆ: ಸಂಗಮೇಶ ಜವಾದಿ

Date:

Advertisements
  • ಜಾನಪದ ಸಾಹಿತ್ಯ ಸಂರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕು
  • ಮಹಿಳೆಯರಿಂದ ಜಾನಪದ ಸಾಹಿತ್ಶವನ್ನು ಹೆಚ್ಚು ಶ್ರೀಮಂತಗೊಳಿಸಬಹುದು

ಕವಿವಾಣಿ ಹೂವಾದರೆ ಜನವಾಣಿ ಬೇರು ಎಂಬಂತೆ ಯಾವುದೇ ಭಾಷೆಯಾಗಲಿ ಅದು ಸ್ವಯಂ ಸಹಜ ಭಾವದಿಂದ ಭಾವದೀಪ್ತಿಯಾಗಿ ಬಂದಿರುತ್ತದೆ, ಅದೇ ಜಾನಪದ ಸಾಹಿತ್ಯವಾಗಿ ರೂಪುಗೊಂಡಿದೆ ಎನಿಸುತ್ತದೆ ಎಂದು ವಿಶ್ರಾಂತ ಪ್ರಾಚಾರ್ಯ ಮಹಾದೇವಪ್ಪ ಉಪ್ಪಿನ ಹೇಳಿದರು.

ಚಿಟಗುಪ್ಪ ಪಟ್ಟಣದ ಸದ್ಬೋದಿನಿ ಮಹಿಳಾ ಕಲಾ ಮಹಾವಿದ್ಶಾಲಯದಲ್ಲಿ ತಾಲೂಕಾ ಜಾನಪದ ಪರಿಷತ್ತಿನ ವತಿಯಿಂದ ಹಮ್ಮಿಕೊಂಡ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಅವರು ವಿಶೇಷ ಉಪನ್ಯಾಸ ನೀಡಿ,”ಜನಪದ ಸಾಹಿತ್ಶ ಜನಪದರ ಉಸಿರಿರುವವರೆಗೂ ಜೀವಂತವಿರುತ್ತದೆ ಮತ್ತು ಅದು ಗೇಯಗುಣ ಪ್ರಧಾನವಾಗಿದೆ” ಹೇಳಿದರು.

ತಾಲೂಕಾ ಜಾನಪದ ಪರಿಷತ್ತಿನ ಅಧ್ಶಕ್ಷ ಸಂಗಮೇಶ ಎನ್ ಜವಾದಿ, “ನಿಜವಾದ ಸಾಹಿತ್ಶವೆಂದರೆ ಜಾನಪದ ಸಾಹಿತ್ಶವೇ ಆಗಿದ್ದು, ಜನಪದ ಸಾಹಿತ್ಯ ರಕ್ಷಣೆ ಮಾಡಬೇಕಾಗಿದ್ದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಹಳ್ಳಿ ಸಂಸ್ಕೃತಿ ಉಳಿಸಿ, ಬೆಳೆಸಬೇಕು, ಇದು ಈ ನಾಡಿನ ನೆಲದ ಮೂಲ ಸಂಸ್ಕೃತಿಯಾಗಿದೆ” ಎಂದರು.

Advertisements

ಸಂಸ್ಥೆಯ ಅಧ್ಯಕ್ಷ ಪ್ರಭುಶೆಟ್ಟಿ ತುಗಾಂವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಮಹಿಳೆಯರಿಂದ ಜಾನಪದ ಸಾಹಿತ್ಶವನ್ನು ಹೆಚ್ಚು ಶ್ರೀಮಂತಗೊಳಿಸಬಹುದು” ಎಂದರು. 

ಪರಿಷತ್ತಿನ ಗೌರವ ಅಧ್ಶಕ್ಷ ಮಾರುದ್ರಪ್ಪ ಅಣದೂರೆ, ಪ್ರಾಂಶುಪಾಲೆ ಸಂಗೀತಾ ಪಾಟೀಲ ಮಾತನಾಡಿದರು.

ಈ ಸುದ್ದಿ ಓದಿದ್ದೀರಾ? ಬೀದರ್ | ಯುವ ಜೋಡಿಯ ಬದುಕು ಬೆಳಗಿದ ಎಲ್ಇಡಿ ಬಲ್ಬ್ ಉದ್ಯಮ

ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ವಿಜಯಕುಮಾರ್ ಪಾಟೀಲ, ಮುಖ್ಯೋಪಾಧ್ಯಾಯ ರತ್ನಪ್ಪಾ ನೆಲ್ವಾಳೆ, ಉಪನ್ಯಾಸಕ ಶಾಹಿನ ,ತಬಸು ,ರಾಜಕುಮಾರ್ ಸೇರಿದಂತೆ ಪರಿಷತ್ತಿನ ಪದಾಧಿಕಾರಿಗಳು, ವಿದ್ಯಾರ್ಥಿನಿಯರು ಹಾಜರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೋರುತಿಹದು ನಿಟ್ಟೂರ(ಬಿ) ನಾಡ ಕಚೇರಿ, ಆವರಣದಲ್ಲಿ ಮಳೆ ನೀರು!

ಬೀದರ್‌ ಜಿಲ್ಲಾದ್ಯಂತ ಕಳೆದ ಎರಡ್ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ...

ಬೀದರ್‌ | ವಿನಯ ಮಾಳಗೆಗೆ ರಾಜ್ಯ ಯುವ ಪ್ರಶಸ್ತಿ ಪ್ರದಾನ

ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರೂ ಆದ ಬೀದರ್‌ನ ಟೀಂ ಯುವಾ...

ಬೀದರ್‌ | ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ದೀನ ದಲಿತರ ಹಿಂದುಳಿದ...

ಔರಾದ್‌ ತಾಲೂಕಿನಲ್ಲಿ ಅತಿವೃಷ್ಟಿ ಹಾನಿ : ₹10 ಕೋಟಿ ಪರಿಹಾರ ಧನ ನೀಡುವಂತೆ ಸಿಎಂಗೆ ಮನವಿ

ಔರಾದ್ ಹಾಗೂ ಕಮಲನಗರ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ರಸ್ತೆ, ಚರಂಡಿ ಹಾಗೂ ಸೇತುವೆಗೆ...

Download Eedina App Android / iOS

X