ಬಳ್ಳಾರಿ | ಹರಪನಹಳ್ಳಿ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ₹4.8 ಲಕ್ಷ ದಾಭ

Date:

Advertisements

ಹರಪನಹಳ್ಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ (ಟಿಎಪಿಸಿಎಂಎಸ್‌) ಪ್ರಸಕ್ತ ಸಾಲಿಗೆ 4,87,364.45 ಲಕ್ಷ ರೂ. ಲಾಭವಾಗಿದೆ ಎಂದು ಸಂಘದ ಅಧ್ಯಕ್ಷೆ ಎಚ್. ನೇತ್ರಾವತಿ ಹೇಳಿದರು.

ಹರಪನಹಳ್ಳಿಯಲ್ಲಿ ನಡೆದ ಸಂಘದ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು. “ಮುಂದಿನ ದಿನಗಳಲ್ಲಿ ಆಹಾರ ಧಾನ್ಯ ಮತ್ತು ಸಗಟು ನಿಯಂತ್ರಿತ ಪಡಿತರ ಹಾಗೂ ಇತರೆ ವ್ಯವಹಾರವನ್ನು ಆರಂಭಿಸಲು ಪ್ರಯತ್ನಿಸಲಾಗುವುದು” ಎಂದರು.

“ರೈತರಿಗೆ ರಸಗೊಬ್ಬರ ಪೂರೈಕೆಗಾಗಿ ಹೆಚ್ಚಿನ ಪ್ರಮಾಣದಲ್ಲಿ ವ್ಯವಹರಿಸಬೇಕಾಗಿದೆ. ಸಂಘದ ಎಲ್ಲ ಸದಸ್ಯರು ಮತ್ತು ತಾಲೂಕಿನ ಎಲ್ಲ ರೈತರು ಸಂಘದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಖರೀದಿ ಮಾಡಲು ವಿನಂತಿಸಿಕೊಳ್ಳುತ್ತೇವೆ” ಎಂದು ತಿಳಿಸಿದರು.

Advertisements

“ಸಂಘದಲ್ಲಿ ರೈತರಿಗೆ ಮತ್ತು ಸದಸ್ಯರ ಅನುಕೂಲಕ್ಕಾಗಿ ಬಂಗಾರದ ಆಭರಣಗಳ ಮೇಲೆ ಸಾಲ ನೀಡಲು ಪ್ರಾರಂಬಿಸಲಾಗವುದು. ಸರ್ಕಾರದ ಷೇರು ಬಂಡವಾಳ ಸರಿದೂಗಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ ಷೇರು ಹಣವನ್ನು ಸಂಘದಲ್ಲಿ ತೊಡಗಿಸಬೇಕು” ಎಂದರು.

ಸಭೆಯಲ್ಲಿ ಸಂಘದ ಪ್ರಭಾರಿ ಕಾರ್ಯದರ್ಶಿ ಎಚ್.ತಿರುಪತಿ ಬಳಿಕ ಹಿರಿಯ ಸದಸ್ಯ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಕುಲಮಿ ಅಬ್ದುಲ್ಲಾ, ನಿರ್ದೇಶಕರಾದ ಬಿ.ಕೆ ಪ್ರಕಾಶ, ಎಚ್.ತಿಮ್ಮನಾಯ್ಕ, ಎಲ್.ಬಿ.ಹಾಲೇಶನಾಯ್ಕ, ಪಿ.ಪ್ರೇಮಕುಮಾರ, ಗಿಡ್ಡಳ್ಳಿ ನಾಗರಾಜ, ತಳವಾರ ಮಂಜಪ್ಪ, ಬಿ.ರೇವಣಸಿದ್ದಪ್ಪ, ಎಂ.ವಿ.ಕೃಷ್ಣಕಾAತ, ಕೆ.ವಿರುಪಾಕ್ಷಪ್ಪ, ವಿ.ಜಿ. ಪ್ರಕಾಶಗೌಡ, ಯು.ಹನುಮಂತಪ್ಪ, ಮಂಜುಳಾ ಮೂರ್ತಿ ಹಾಗೂ ಚಿಕ್ಕೇರಿ ಬಸಪ್ಪ, ಮುಖಂಡರಾದ ಮಲ್ಲಿಕಾರ್ಜುನ ಸ್ವಾಮಿ ಕಲ್ಮಠ, ಡಿ.ಅಬ್ದುಲ್ ರಹಿಮಾನ್ ಸಾಹೇಬ್, ಆಲಮರಸಿಕೇರಿ ಪರುಶುರಾಮಪ್ಪ, ಕಂಚಿಕೇರಿ ಜಯಲಕ್ಷೀ. ಗುಂಡಗತ್ತಿ ನೇತ್ರಾವತಿ, ಸೋಗಿ ಇಬ್ರಾಹಿಂ, ಶ್ರಿಕಾಂತ, ಶಿವಮೂರ್ತಿಯ್ಯ ತಿರುಕಪ್ಪ, ಪಿ.ಪರುಶುರಾಮ, ಸೇರಿದಂತೆ ಇತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯನಗರ | ಸೇವಾ ನಿವೃತ್ತಿ: ಮಾಹಿತಿ ಕೇಂದ್ರದ ಉಪನಿರ್ದೇಶಕಿ ಡಾ. ಡಿ ಮೀನಾಕ್ಷಿಗೆ ಬೀಳ್ಕೊಡುಗೆ

ಮಾಹಿತಿ‌ ಕೇಂದ್ರದ ಉಪನಿರ್ದೇಶಕಿ ಡಾ. ಡಿ ಮೀನಾಕ್ಷಿಯವರು ಸುಮಾರು 30 ವರ್ಷಗಳ...

ಬಳ್ಳಾರಿ | ಹಾಲು ಉತ್ಪಾದಕರ ಸಂಘ ಅಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಹಿಟ್ನಾಳ ಅವಿರೋಧ ಆಯ್ಕೆ

ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಗೂ ರಾಯಚೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ...

ಮೈಸೂರು | ಅಣ್ಣಾವ್ರ ಅಭಿನಯದಲ್ಲಿ ಇತಿಹಾಸ ಪುರುಷರ ಕಾಣುವಂತಾಯಿತು; ನಟ ಮಂಡ್ಯ ರಮೇಶ್

ಮೈಸೂರಿನ, ಹೆಬ್ಬಾಳ ಹೊರ ವರ್ತುಲದಲ್ಲಿರುವ ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ನಾಡೋಜ ಡಾ....

Download Eedina App Android / iOS

X