ಹಬ್ಬಕ್ಕೆ ಖರೀದಿ ಜೋರು: ಕೋಮು ಸಂಘಟನೆಗಳಿಂದ ಹಲಾಲ್‌ ಮುಕ್ತ ಗಣೇಶೋತ್ಸವಕ್ಕೆ ಕರೆ

Date:

Advertisements

ರಾಜ್ಯ ರಾಜ್ಯಧಾನಿ ಬೆಂಗಳೂರಿನಲ್ಲಿ ಗೌರಿ ಗಣೇಶ ಹಬ್ಬ ಸಂಭ್ರಮ ಮನೆ ಮಾಡಿದೆ. ಹಬ್ಬದ ಹಿನ್ನೆಲೆ, ನಗರದಲ್ಲಿರುವ ಜನತೆ ಎಲೆ, ಬಾಳೆ, ಪೂಜಾ ಸಾಮಗ್ರಿ, ಹೂವು-ಹಣ್ಣು-ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.

ನಗರದ ಕೆ.ಆರ್‌.ಮಾರ್ಕೆಟ್, ರಾಜಾಜಿನಗರ, ನವರಂಗ್ ಬ್ರಿಡ್ಜ್‌, ಮಲ್ಲೇಶ್ವರಂ, ವಿಜಯನಗರ ಸೇರಿದಂತೆ ಹಲವೆಡೆ ಖರೀದಿಗಾಗಿ ಜನ ಮುಗಿಬಿದ್ದಿದ್ದಾರೆ.

ಬೆಳ್ಳಂಬೆಳಗ್ಗೆ ಗಣೇಶನನ್ನು ಪೂಜೆ ಮಾಡಿ ಮನೆಗೆ ಕರೆದುಕೊಂಡು ಹೋಗಲು ಜನರು ಉತ್ಸುಕರಾಗಿದ್ದು ನಗರದ ಹಲವೆಡೆ ಕಂಡುಬಂದಿತು. ಗಂಡು ಮಕ್ಕಳು ಯಾವ ಗಣಪತಿಯನ್ನು ಮನೆಗೆ ತೆಗೆದುಕೊಂಡು ಹೋಗಬೇಕು ಎಂಬ ಆಯ್ಕೆಯಲ್ಲಿ ಮಗ್ನರಾಗಿದ್ದರೆ, ಹೆಣ್ಣುಮಕ್ಕಳು ಹೂವು, ಹಣ್ಣು ಸೇರಿದಂತೆ ಇನ್ನಿತರ ಆಲಂಕಾರಿಕ ವಸ್ತುಗಳ ಆಯ್ಕೆಯಲ್ಲಿ ತೊಡಗಿದ್ದು ಮಾರುಕಟ್ಟೆಯಲ್ಲಿ ಕಂಡುಬಂದಿತು.

Advertisements

ಗಣೇಶ ಹಬ್ಬದ ದಿನವಾದ ಇಂದು ಮನೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ, ಪೂಜೆ ಸಲ್ಲಿಸುತ್ತಾರೆ. ಮನೆಯಲ್ಲಿ ಮೋದಕ, ಕಡುಬು, ಚಕ್ಕುಲಿ, ಉಂಡೆ ಸೇರಿದಂತೆ ಗಣೇಶನಿಗೆ ಪ್ರಿಯವಾದ ತಿಂಡಿ ತಿನಿಸುಗಳನ್ನು ತಯಾರು ಮಾಡಿ ಗಣೇಶನಿಗೆ ಅರ್ಪಿಸುತ್ತಾರೆ.

ಮಾರುಕಟ್ಟೆಯಲ್ಲಿ ಹೂವು ಮತ್ತು ಹಣ್ಣಿನ ಬೆಲೆ ಕೊಂಚ ಏರಿಕೆ ಕಂಡಂತಿದ್ದು, ಮಲ್ಲಿಗೆ ಹೂವು ಕೆಜಿಗೆ ₹1000 ರಿಂದ ₹1200 ಇದೆ. ಸೇವಂತಿಗೆ ₹250 ರಿಂದ ₹350, ಗುಲಾಬಿ ₹150 ರಿಂದ ₹200, ಕನಕಾಂಬರ ₹1000 ದಿಂದ ₹1200, ಮಳ್ಳೆ ಹೂವು ₹650 ರಿಂದ ₹800 ಇದೆ.

ಹಣ್ಣುಗಳಲ್ಲಿ ಏಲಕ್ಕಿ ಬಾಳೆ ₹120 ರಿಂದ ₹140, ಅನಾನಸ್ ಹಣ್ಣು ₹30 ರಿಂದ ₹70, ದಾಳಿಂಬೆ ₹50 ರಿಂದ ₹100, ಸೇಬು ₹180 ರಿಂದ ₹250, ಸೀಬೆ ₹60 ರಿಂದ ₹80 ಇದೆ.

ಅದರಂತೆ ತರಕಾರಿ ದರ ಕೆಜಿಗೆ ಹಾಗಲಕಾಯಿ ₹60, ಬಿಟ್ರೋಟ್ ₹40, ಬೀನ್ಸ್ ₹80, ಬದನೆಕಾಯಿ ₹60, ಎಲೆಕೋಸು ₹80, ಮೂಲಂಗಿ ₹60, ಹಸಿರುಮೆಣಸಿನ ಕಾಯಿ ₹60, ಬೆಂಡೆಕಾಯಿ ₹40, ನುಗ್ಗೆಕಾಯಿ ₹60, ಟೋಮಾಟೋ ₹15, ಈರುಳ್ಳಿ ₹30, ಬೆಳ್ಳುಳ್ಳಿ ₹80 ಇದೆ.

ಕಳೆದ ಯುಗಾದಿ ಹಬ್ಬ ಮತ್ತು ಮಹಾಲಕ್ಷ್ಮೀ ಹಬ್ಬದ ಸಮಯದಲ್ಲಿ ತರಕಾರಿ, ಹೂವು-ಹಣ್ಣುಗಳ ಬೆಲೆ ಗಗನಕ್ಕೇರಿತ್ತು. ಈ ಬಾರಿ ತರಕಾರಿ ಬೆಲೆ ಎಲ್ಲವೂ ಕಡಿಮೆಯಿದೆ. ಆದರೆ, ಹೂವು-ಹಣ್ಣಿನ ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ಹಬ್ಬದ ಸಂಭ್ರಮದಲ್ಲಿ ಮುಳುಗಿರುವ ಜನತೆ ವ್ಯಾಪಾರದಲ್ಲಿ ತೊಡಗಿದ್ದಾರೆ.

ಈ ಸುದ್ದಿ ಓದಿದ್ದೀರಾ? 2026ರ ವೇಳೆಗೆ ಕೆ.ಆರ್.ಪುರಂ – ಕೆಐಎ ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ಸಿದ್ಧ

ಹಲಾಲ್‌ ಮುಕ್ತ ಗಣೇಶೋತ್ಸವಕ್ಕೆ ಕರೆ

ಯುಗಾದಿ ಬಳಿಕ ಹಿಂದುತ್ವವಾದಿ ಕೋಮು ಸಂಘಟನೆಗಳು ಈ ಬಾರಿ ಹಲಾಲ್ ಮುಕ್ತ ಗಣೇಶೋತ್ಸವಕ್ಕೆ ಕರೆ ನೀಡಿವೆ. ಗಣೇಶ ಮಂಡಳಿಗಳಿಗೆ ಭೇಟಿ ನೀಡುತ್ತಿರುವ ಹಿಂದುತ್ವವಾದಿ ಕೋಮು ಸಂಘಟನೆಗಳ ಕಾರ್ಯಕರ್ತರು ಹಲಾಲ್ ಪ್ರಮಾಣಿಕೃತ ವಸ್ತುಗಳ ಖರೀದಿ ಮಾಡದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮಹಿಳೆ ವಿರುದ್ಧದ ಪೋಕ್ಸೋ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಬೆಂಗಳೂರಿನ ವಿಲ್ಲಾವೊಂದರಲ್ಲಿ ವಾಸವಿದ್ದ 53 ವರ್ಷದ ಮಹಿಳೆ ತನ್ನ ಕಾಮ ತೃಷೆಗಾಗಿ...

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X