ಸಂವಿಧಾನವು ನಮಗೆ ಭಗವದ್ಗೀತೆ, ಕುರಾನ್, ಬೈಬಲ್ಗಿಂತ ಶ್ರೇಷ್ಠ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ತಿಳಿಸಿದ್ದಾರೆ.
ಐದು ದಿನಗಳ ವಿಶೇಷ ಅಧಿವೇಶನದ ಎರಡನೇ ದಿನದಂದು ಲೋಕಸಭೆಯಲ್ಲಿ ಮಾತನಾಡಿದ ಅಧೀರ್ ರಂಜನ್ ಚೌಧರಿ, ಈ ಸಂವಿಧಾನವು ನಮಗೆ ಗೀತಾ, ಕುರಾನ್ ಮತ್ತು ಬೈಬಲ್ಗಿಂತ ಕಡಿಮೆಯಿಲ್ಲ. 1ನೇ ವಿಧಿ ಹೇಳುತ್ತದೆ, ಇಂಡಿಯಾ, ಅದುವೇ ಭಾರತ, ರಾಜ್ಯಗಳ ಒಕ್ಕೂಟವಾಗಿರುತ್ತದೆ. ”ಅಂದರೆ ಇಂಡಿಯಾ ಮತ್ತು ಭಾರತಕ್ಕೆ ಯಾವುದೇ ವ್ಯತ್ಯಾಸವಿಲ್ಲ. ಎರಡರ ನಡುವೆ ಅನಗತ್ಯವಾಗಿ ಬಿರುಕು ಮೂಡಿಸಲು ಪ್ರಯತ್ನಿಸದಿದ್ದರೆ, ಅದು ಉತ್ತಮವಾಗಿರುತ್ತದೆ” ಎಂದು ಹೇಳಿದರು.
“ಮಹಿಳಾ ಮೀಸಲಾತಿಯನ್ನು ಪ್ರಧಾನಿ ರಾಜೀವ್ ಗಾಂಧಿ ಅವರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಾರಿಗೊಳಿಸಿದರು. ಅಂದಿನಿಂದ, ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ನೀಡಲು ಕಾಂಗ್ರೆಸ್ ಕಾನೂನು ತರಲು ಪ್ರಯತ್ನಿಸುತ್ತಿದೆ. ಇದು ಕೆಲವೊಮ್ಮೆ ಲೋಕಸಭೆಯಲ್ಲಿ ಅಂಗೀಕಾರವಾಗುತ್ತಿತ್ತು, ಆದರೆ ರಾಜ್ಯಸಭೆಯಲ್ಲಿ ವಿಫಲವಾಗುತ್ತಿತ್ತು. ಮನಮೋಹನ್ ಸರ್ಕಾರ ತಂದ ಮಸೂದೆ ಇನ್ನೂ ಸಕ್ರಿಯವಾಗಿದೆ,” ಚೌಧರಿ ಪ್ರತಿಪಾದಿಸಿದರು.
ಈ ಸುದ್ದಿ ಓದಿದ್ದೀರಾ? ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ: 2027ರಲ್ಲಿ ಜನಗಣತಿ 2029ಕ್ಕೆ ಜಾರಿ!
ಸಾಮಾನ್ಯವಾಗಿ ‘ಇಂಡಿಯಾದ ರಾಷ್ಟ್ರಪತಿ’ ಎಂದು ಬಳಸಲಾಗುತ್ತದೆ. ಆದರೆ ಜಿ20 ಔತಣಕೂಟದ ಆಹ್ವಾನದಲ್ಲಿ ‘ಭಾರತದ ಅಧ್ಯಕ್ಷ’ ಹೆಸರಿನಲ್ಲಿ ಕಳುಹಿಸಲಾಯಿತು. ಇದು ಇಂಡಿಯಾ ಮತ್ತು ಭಾರತ ನಡುವಿನ ರಾಜಕೀಯ ಗದ್ದಲಕ್ಕೆ ಕಾರಣವಾಯಿತು. ಇಂದು ಲೋಕಸಭೆಯಲ್ಲಿ ಈ ವಿಚಾರವನ್ನು ಕಾಂಗ್ರೆಸ್ ನಾಯಕ ಚೌಧರಿ ಪ್ರಸ್ತಾಪಿಸಿದರು.
ಈ ನಡುವೆ ಮಹಿಳಾ ಮೀಸಲಾತಿ ಮಸೂದೆಯ ಶ್ರೇಯವನ್ನು ನಮ್ಮದು ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಸಂವಿಧಾನವೇ ಧರ್ಮ ಗ್ರಂಥಗಳನ್ನು ಗೌರವಿಸಿದೆ,ಇನ್ನು
ನಿಮ್ಮ ಲೆಕ್ಕಾಚಾರ ಯಾವ ಲೆಕ್ಕ.