ಮಂಡ್ಯ| ಅಕ್ಕಿ ಹೆಬ್ಬಾಳಿನಲ್ಲಿ ‘ಚಾವುಂಡರಾಯ’ ನಾಟಕ ಪ್ರದರ್ಶನ

Date:

Advertisements

ಜಯರಾಮ ರಾಯಪುರ ಅವರ ರಚನೆಯ, ಸಮಾಜಮುಖಿ ರಂಗ ಬಳಗ ಅಭಿನಯಿಸಿರುವ ‘ಚಾವುಂಡರಾಯ’ ನಾಟಕ ಪ್ರದರ್ಶನವು ಕೆಆರ್‌ ಪೇಟೆ ತಾಲೂಕಿನ ಅಕ್ಕಿ ಹೆಬ್ಬಾಳಿನಲ್ಲಿ ನಡೆದಿದೆ.

ಲೋಕಾಯನ ಕಲ್ಚರಲ್‌ ಫೌಂಡೇಷನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಾಟಕ ಪ್ರದರ್ಶನ ನಡೆಸಿದೆ.

ರಂಗಾಯಣದ ಹಿರಿಯ ಕಲಾವಿದ, ನಿರ್ದೇಶಕ ಹುಲುಗಪ್ಪ ಕಟ್ಟಿಮನಿ ಅವರು ನಾಟಕವನ್ನು ನಿರ್ದೇಶಿಸಿದ್ದಾರೆ. ತಲಕಾಡು ಗಂಗರಸನ ದಂಡನಾಯಕ ಚಾಮುಂಡರಾಯನ ಶೌರ್ಯ, ರಾಜನಿಷ್ಠೆ ಹಾಗೂ ಅವನ ಧಾರ್ಮಿಕ ಬದುಕನ್ನು ನಾಟಕವು ಅನಾವರಣಗೊಳಿಸಿದೆ,

Advertisements

ಚಾವುಂಡರಾಯ ಒಬ್ಬ ಸೇನಾ ದಂಡನಾಯಕನಾಗಿ ವೈರಿಗಳ ನಿಗ್ರಹ ಹಾಗೂ ಸಾಮ್ರಾಜ್ಯದ ರಕ್ಷಣೆಗೆ ಅನಿವಾರ್ಯವಾಗಿ ಹಿಂಸೆ ಮಾಡುತ್ತಾನೆ. ಹಿಂಸೆಯಿಂದ ಮನನೊಂದು ಅಹಿಂಸೆಯತ್ತ ಪಯಣಿಸುವ ಹಾಗೂ ಶ್ರವಣಬೆಳಗೊಳದಲ್ಲಿ ಬಾಹುಬಲಿ ಮೂರ್ತಿಯನ್ನು ಕೆತ್ತಿಸಲು ಪ್ರೇರಣೆ ಹಾಗೂ ಸಾಧನೆಯ ಎಲ್ಲ ವಿವರಗಳು ನಾಟಕದಲ್ಲಿ ಪ್ರತಿಬಿಂಬಿತವಾಗಿದೆ.

ಅನುಭವಿ ಯುವ ಕಲಾವಿದರ ಅಭಿನಯ, ಉತ್ತಮ ಸಂಗೀತ, ವಸ್ತ್ರಾಲಂಕಾರ, ಬೆಳಕು ಹಾಗೂ ರಂಗ ಸಜ್ಜಿಕೆಯ ಶ್ರೀಮಂತಿಕೆ ನಾಟಕವನ್ನು ಬಹಳ ಆಕರ್ಷಣೀಯವಾಗಿಸಿವೆ.

ಚಾವುಂಡರಾಯನಾಗಿ ಪವನ್, ಜನ್ನ ಕವಿಯಾಗಿ ಪ್ರವೀಣ್, ಮಾರಸಿಂಹನಾಗಿ ಆನಂದ್ ಸೇರಿದಂತೆ ಎಲ್ಲ ಕಲಾವಿದರು ನಟಿಸಿದರು.

ವರದಿ: ಮಹಮ್ಮದ್ ಅಜರುದ್ದೀನ್, ಸಿಟಿಜನ್ ಜರ್ನಲಿಸ್ಟ್, ಅಕ್ಕಿ ಹೆಬ್ಬಾಳು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ನಗರದ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು

ರಾಯಚೂರು ನಗರದ ವಾರ್ಡ್ ನಂ.34ರ ಬಂದೇನವಾಜ ಕಾಲೋನಿ, ದೇವರಾಜ ಅರಸ್ ಕಾಲೋನಿ,...

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ

ನಾಲ್ಕು ದಶಕಗಳಷ್ಟು ಹಳೆಯದಾದ ಮಂಗಳೂರು ವಿಶ್ವವಿದ್ಯಾಲಯ(MU), ನಿರೀಕ್ಷಿತ ಸಂಖ್ಯೆಯ ಪ್ರವೇಶಗಳನ್ನು ಪಡೆಯಲು...

Download Eedina App Android / iOS

X