ಐಸಿಸಿ ವಿಶ್ವಕಪ್ | ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲುಂಡ ಬಾಂಗ್ಲಾ

Date:

Advertisements

ಮುಂಬೈನಲ್ಲಿ ನಡೆದ ಐಸಿಸಿ ವಿಶ್ವಕಪ್‌ನ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಹಣಾಹಣಿಯಲ್ಲಿ ಬಾಂಗ್ಲಾ ತಂಡ ಹೀನಾಯ ಸೋಲುಕಂಡಿದೆ. ಬರೋಬ್ಬರಿ 149 ರನ್‌ಗಳ ಅಂತರದಲ್ಲಿ ಸೋಲುಂಡ ಬಾಂಗ್ಲಾ ತಂಡ ಐಸಿಸಿ ವಿಶ್ವಕಪ್‌ನ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ. ಭರ್ಜರಿ ಗೆಲುವು ಕಂಡ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ದಕ್ಷಿಣ ಆಫ್ರಿಕಾ ತಂಡದ ಕ್ವಿಂಟನ್ ಡಿಕಾಕ್ (174), ಐಡೆನ್ ಮಾರ್ಕ್ರಾಮ್ (60) ಮತ್ತು ಹೆನ್ರಿಚ್ ಕ್ಲಾಸೆನ್ (90) ಅವರ ಅಬ್ಬರದ ಆಟದಿಂದ 382 ರನ್​ ಕಲೆ ಹಾಕಿತ್ತು. ದುಬಾರಿ ರನ್‌ನ ಬೆನ್ನತ್ತಿದ ಬ್ಲಾಂಗ್ಲಾ ತಂಡ 46.4 ಓವರ್‌ಗಳಲ್ಲಿ 233 ರನ್‌ ಕಲೆ ಗಳಿಸಿ ಆಲ್‌ಔಟ್‌ ಆಗುವ ಮೂಲಕ ಹೀನಾಯ ಸೋಲು ಕಂಡಿತು.

ಭಾರೀ ರನ್‌ಗಳ ಒತ್ತಡದಲ್ಲಿದ್ದ ಬಾಂಗ್ಲಾ ಬ್ಯಾಟರ್‌ಗಳು ಎದುರಾಳಿ ತಂಡದ ಬೌಲರ್‌ಗಳ ಬೌಲಿಂಗ್‌ಗೆ ಕಂಗಾಲಾದರು. ಕೇಳವ 15 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಬಾಂಗ್ಲಾ ಒಪ್ಪಿಸಿತು. ಆರಂಭಿಕ ಆಟಘಾರಾದ ತಂಝೀದ್ ಹಸನ್ ಮತ್ತು ಲಿಟ್ಟನ್ ದಾಸ್ 30 ರನ್​ಗಳ ಜತೆಯಾಟಕ್ಕೆ ಸೀಮಿತವಾದರು.  ಹಸನ್‌ 12 ರನ್‌ ಗಳಿಸಿ ವಿಕೆಟ್‌ ನೀಡಿದರು.

Advertisements

ಬಳಿಕ ಬಂದ ನಜ್ಮುಲ್ ಹೊಸೈನ್ ಶಾಂಟೊ (0), ಶಕೀಬ್ ಅಲ್ ಹಸನ್(1), ಮುಶ್ಫಿಕರ್ ರಹೀಮ್ (8) ಟಿಕೆಟ್‌ ಇತ್ತು ಹೊರನಡೆದರೆ, ಇನ್ನೋರ್ವ ಆರಂಭಿಕ ಲಿಟ್ಟನ್ ದಾಸ್ 22 ರನ್‌ಗಳಿಗೆ ಧಣಿದು ಹೋದರು.

ಮಹಮ್ಮದುಲ್ಲಾ ಅವರು ಸ್ಕ್ರೀಜ್‌ನಲ್ಲಿ ಗಟ್ಟಿಯಾಗಿ ನಿಂತು ಆಟವಾಡಿದರೂ, ಗರಿಷ್ಠ ಮೊತ್ತದ ಬೆನ್ನತ್ತಲು ಸಾಧ್ಯವಾಗಲಿಲ್ಲ. ಮಹಮ್ಮದುಲ್ಲಾ ಅವರು 11 ಬೌಂಡರಿ, 4 ಸಿಕ್ಸ್​ನಿಂದ 111 ಕಲೆಹಾಕಿ ಔಟ್‌ಆದರು. ಇನ್ನು, ಮೆಹಿದಿ ಹಸನ್ ಮಿರಾಜ್ (11), ನಸುಮ್ ಅಹ್ಮದ್ (19) ಮತ್ತು ಹಸನ್ ಮಹಮ್ಮದ್ (15) ಮಹಮ್ಮದುಲ್ಲಾ ಅವರಿಗೆ ಸಾಥ್‌ ನೀಡಿ ಹೊರನಡೆದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

Download Eedina App Android / iOS

X