ಕಾಂಗ್ರೆಸ್ಗೆ ಮತ ಹಾಕಬೇಡಿ ನಾವು ಮತ ಹಾಕಿ ಮೋಸ ಹೋಗಿದ್ದೇವೆ, ನೀವೂ ಮೋಸ ಹೋಗಬೇಡಿ ಎಂದು ರಾಯಚೂರು ಗಡಿ ಭಾಗದ ಕರ್ನಾಟಕದ ರೈತರು ತೆಲಂಗಾಣದಲ್ಲಿ ಹೋರಾಟ ನಡೆಸಿದ್ದಾರೆ.
“ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ನೀಡಿದ ಗ್ಯಾರಂಟಿ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದು, ಇದೀಗ ತೆಲಂಗಾಣದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಜಾರಿಗೆ ತಂದ ಗ್ಯಾರಂಟಿಗಳನ್ನು ತೆಲಂಗಾಣದಲ್ಲಿ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿತ್ತಿದೆ. ಯರೂ ಕಾಂಗ್ರೆಸ್ಗೆ ಮತ ಹಾಕಬೇಡಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ಗಡಿ ಭಾಗದ ರಾಯಚೂರು, ಬೂರ್ದಿಪಾಡು, ವಡ್ಡೆಪಲ್ಲಿ, ಗಾಜಲುಪಾಡು ಗ್ರಾಮದ ನೂರಾರು ರೈತರು ತೆಲಂಗಾಣದ ವರಂಗಲ್, ಗದ್ವಾಲ್, ಜೋಗಳಾಂಭದಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 6 ಗ್ಯಾರಂಟಿಯನ್ನು ಜಾರಿಗೊಳಿಸುವ ಭರವಸೆ ನೀಡುತ್ತಿರುವುದನ್ನು ರಾಜ್ಯದ ರೈತರು ಖಂಡಿಸಿದ್ದು, ಬಿಎಸ್ಆರ್ ಪಕ್ಷದ ಮುಖಂಡರು ಕರ್ನಾಟಕದ ರೈತರ ಹೋರಾಟಕ್ಕೆ ಸಾಥ್ ನೀಡಿದ್ದಾರೆ.
“ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ 6 ಗ್ಯಾರಂಟಿಗಳನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದೆ. ಮಹಿಳೆಯರಿಗೆ ₹2,000 ಹಣವನ್ನು ಒಂದು ತಿಂಗಳು ಹಾಕಿ ಕೈ ಬಿಟ್ಟಿದ್ದಾರೆ. ಯುವ ಜನಾಂಗಕ್ಕೆ ₹3,000 ಹಣ ಹಾಕುತ್ತಿಲ್ಲ. ಗಡಿಭಾಗದ ರಾಯಚೂರಿನಲ್ಲಿ ಬೆಳೆಗಳಿಗೆ ನೀರು ದೊರೆಯುತ್ತಿಲ್ಲ. ನೀರಿಗಾಗಿ ಹೋರಾಟ ನಡೆಸಿದ್ದೇವೆ” ಎಂದು ಆಕ್ರೋಶ ಹೊರ ಹಾಕಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಾನವ ಕಳ್ಳಸಾಗಣೆ ವಿರುದ್ಧ ಸಿಸಿಬಿ ಪೊಲೀಸರ ಕಾರ್ಯಾಚರಣೆ: 14 ಜನರ ಬಂಧನ
“ರೈತರ ಪಂಪ್ಸೆಟ್ಗಳಿಗೆ 7 ತಾಸು ವಿದ್ಯುತ್ ನೀಡುವುದಾಗಿ ಹೇಳಿ ಇದೀಗ ಕೇವಲ 3ರಿಂದ 4 ತಾಸು ಮಾತ್ರ ವಿದ್ಯುತ್ ನೀಡುತ್ತಿದ್ದಾರೆ. ಬೆಳೆಗಳಿಗೆ ನೀರಿಲ್ಲದೆ ಒಣಗಿ ಹೋಗಿ ನಷ್ಟ ಅನುಭವಿಸುತ್ತಿದ್ದೇವೆ. ನೀವೂ ಕೂಡ ಕಾಂಗ್ರೆಸ್ಗೆ ಮತ ಚಲಾಯಿಸಿ ಮೋಸ ಹೋಗಬೇಡಿ” ಎಂದರು.
ವರದಿ : ಹಫೀಜುಲ್ಲ