ಪ್ರಯಾಣಿಕರಿಗೆ ಪ್ರಯಾಣ ಸೇವೆ ಒದಗಿಸುತ್ತಿರುವ ಸರ್ಕಾರಿ ಸ್ವಾಮ್ಯದ ಕೆಎಸ್ಆರ್ಟಿಸಿ, ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಪಾರ್ಸೆಲ್ಗಳನ್ನು ಸಾಗಾಟ ಮಾಡುವ ಸೇವೆಯನ್ನು ಆರಂಭಿಸಿದೆ. ಇದರಿಂದ ತನ್ನ ಆದಾಯವೂ ಹೆಚ್ಚಲಿದೆ ಎಂದು ಸಂಸ್ಥೆ ಭಾವಿಸಿದೆ.
ಪಾರ್ಸೆಲ್ ಸಾಗಾಟ ಸೇವೆಯನ್ನು ಒಗಿಸಲು ಕೆಎಸ್ಆರ್ಟಿಸಿ 20 ಲಾರಿ ಟ್ರಕ್ಗಳನ್ನು ಖರೀದಿಸಿದೆ. ಸಾರ್ವಜನಿಕರು ಪಾರ್ಸೆಲ್ಗಳನ್ನು ತಾವು ತಲುಪಿಸಲು ಇಚ್ಛಿಸುವ ಪ್ರದೇಶಗಳಿಗೆ ಕೆಎಸ್ಆರ್ಟಿಸಿ ಮೂಲಕ ತಲುಪಿಸಬಹುದು ಎಂದು ಹೇಳಿದೆ.
ಅಲ್ಲದೆ, ಮುಂದಿನ ನಾಲ್ಕು ವರ್ಷಗಳಲ್ಲಿ 4,000 ಬಸ್ಗಳಲ್ಲಿ ಪಾರ್ಸೆಲ್ ಸಾಗಾಟ ಮಾಡುವ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಕೆಎಸ್ಆರ್ಟಿಸಿ ಹೊಂದಿದೆ ಎಂದು ತಿಳಿಸಿದೆ.
“ವಿಮಾನ ನಿಲ್ದಾಣ, ಬಂದರು ಸೇರಿದಂತೆ ಗ್ರಾಹಕರು ತಿಳಿಸಿದ ಸ್ಥಳದಿಂದ, ತಲುಪಿಸಬೇಕಾದ ಸ್ಥಳಕ್ಕೆ ಕೆಎಸ್ಆರ್ಟಿಸಿ ಟ್ರಕ್ಗಳು ಪಾರ್ಸೆಲ್ ಒಯ್ಯಲಿವೆ” ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಕೆಎಸ್ಆರ್ಟಿಸಿ ಆದಾಯ ಹೆಚ್ಚಿಸಲು 20 ಲಾರಿ ಟ್ರಕ್ಗಳನ್ನು ಖರೀದಿಸಲಾಗಿದೆ. ಇನ್ನು ನಾಲ್ಕು ವರ್ಷಗಳಲ್ಲಿ 4,000 ಬಸ್ಗಳಲ್ಲಿ ಪಾರ್ಸೆಲ್ ಸಾಗಾಟ ಮಾಡುವ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಕೆಎಸ್ಆರ್ಟಿಸಿ ಹೊಂದಿದೆ.
ವಿಮಾನ ನಿಲ್ದಾಣ, ಬಂದರು ಸೇರಿದಂತೆ ಗ್ರಾಹಕರು ತಿಳಿಸಿದ ಸ್ಥಳದಿಂದ , ತಲುಪಿಸಬೇಕಾದ ಸ್ಥಳಕ್ಕೆ ನಮ್ಮ ಟ್ರಕ್ಗಳು… pic.twitter.com/9dUbtsFbTD
— DIPR Karnataka (@KarnatakaVarthe) November 15, 2023