ಕಲಬುರಗಿ | ಪಟ್ಟಣ ಗ್ರಾಮದಲ್ಲಿಲ್ಲ ಶೌಚಾಲಯಗಳು; ಈಗಲೂ ಬಯಲಿಗೆ ಹೋಗುತ್ತಿರುವ ಮಹಿಳೆಯರು

Date:

Advertisements

ಕಲಬುರಗಿ ಜಿಲ್ಲೆಯ ಪಟ್ಟಣ ಗ್ರಾಮದಲ್ಲಿ 1,600 ಮನೆಗಳಿದ್ದರೂ, ಸರ್ಕಾರದಿಂದ ಸ್ವಚ್ಛ ಭಾರತ್ ಅಡಿಯಲ್ಲಿ ಶಾಚಾಲಯ ವ್ಯವಸ್ಥೆಯನ್ನು ಒದಗಿಲಾಗಿಲ್ಲ. ಹೀಗಾಗಿ, ಈಗಲೂ ಗ್ರಾಮದ ಮಹಿಳೆಯರು ಮತ್ತು ಮಕ್ಕಳು ಚೆಂಬು ಹಿಡಿದು ಬಯಲಿಗೆ ಹೋಗುವ ಪರಿಸ್ಥಿತಿ ಇದೆ. ಕೂಡಲೇ, ಶೌಚಾಲಯಗಳನ್ನು ಕಟ್ಟಿಸಿಕೊಡಬೇಕು ಎಂಧು ಗ್ರಾಮದ ಹೆಣ್ಣು ಮಕ್ಕಳು ಒತ್ತಾಯಿಸಿದ್ದಾರೆ.

ಗ್ರಾಮದ ನಿವಾಸಿ ಕಸ್ತೂರಿಬಾಯಿ ಮಾತನಾಡಿ, “ಶೌಚಾಲಯ ಇಲ್ಲದೆ ಇರುವ ಕಾರಣ ನಾವೆಲ್ಲ ಬಯಲು ಪ್ರದೇಶಕ್ಕೆ ಹೋಗಬೇಕಾಗಿದೆ. ಊರು ಆಗಸಿಯಲ್ಲಿ ಸುಮಾರು ಗಂಡಸರು ಕುತ್ತಿರುತ್ತಾರೆ ಹಾಗೆ ಅವರ ಮುಂದೆ ಚಂಬು ಹಿಡಿದುಕೊಂಡು ಹೋಗಬೇಕು. ನಾವು ಹಿರಿಯರು ವಯಸ್ಸಾದವರು ಹೇಗೊ ಹೋಗತ್ತೀವಿ. ಸಣ್ಣ ಸಣ್ಣ ಹೆಣ್ಣುಮಕ್ಕಳು ಪರಿಸ್ಥಿತಿ ಏನು? ನಮಗೆ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಕಲ್ಪಿಸಿಕೊಡಬೇಕು” ಎಂದು ಅಗ್ರಹಿಸಿದರು.

ಕಮಲಬಾಯಿ ಪಟ್ಟಣ ಗ್ರಾಮದ ನಿವಾಸಿ ಈದಿನ.ಕಾಮ್ ಜೊತೆ ಮಾತನಾಡಿ, “ಮನೆ ಮನೆಗೆ ಶೌಚಾಲಯ ಎಂದು ಮಾಡಿದ್ದಾರೆ. ಆದರೆ, ಅದು ನಾಮಕೆ ವಾಸ್ತೆಗಷ್ಟೇ ಇದೆ. ಶೌಚಾಲಯ ಬಾಗಿಲು ಮುರಿದು ಹೋಗಿವೆ. ಸರಿಯಾದ ರೀತಿಯಲ್ಲಿ ನಿರ್ಮಾಣ ಆಗಿಲ್ಲ” ಎಂದು ಆರೋಪಿಸಿದರು.

Advertisements

ಗ್ರಾಮದ ನಿವಾಸಿ ಶಿವಲಿಂಗಮ್ಮ ಮಾತನಾಡಿ, “ಮನೆ ಮನೆಗೆ ಶೌಚಾಲಯ ಮಾಡ್ತೀವಿ ಅಂತ ಹೇಳುತ್ತಲೇ ಇದ್ದಾರೆ. ಅದರೆ, ಈವರೆಗೂ ಯಾರ ಮನೆಗೂ ಶೌಚಾಲಯ ನೀಡಲಾಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ನಿವಾಸಿ ಜಯಶ್ರೀ ಮಾತನಾಡಿ, “ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲ. ನಾವೆಲ್ಲರೂ ರೋಡಿಗೆ ಹೋಗುತ್ತೇವೆ. ನಮ್ಮ ಗ್ರಾಮದಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಹೆಣ್ಣುಮಕ್ಕಳಿಗೆ ಇದರಿಂದ ತುಂಬಾ ಸಮಸ್ಯೆ ಆಗುತ್ತಿದೆ. ಸಾರ್ವಜನಿಕರ ಶೌಚಾಲಯ ಬೇಕೇ ಬೇಕು” ಎಂದು ಅಗ್ರಹಿಸಿದರು.

ವೀರಣ್ಣ ಗೌಡ ಗ್ರಾಮ ಪಂಚಾಯತ್ ಕಾರ್ಯದರ್ಶಿ ಈದಿನ.ಕಾಮ್ ಪ್ರತಿನಿಧಿಯೊಂದಿಗೆ ಮಾತನಾಡಿ,
“ಪಟ್ಟಣ ಗ್ರಾಮದಲ್ಲಿ ಒಟ್ಟು ಸಾವಿರದ ಅರನ್ನೂರು ಮನೆಗಳಿವೆ. ಎಂಟುನ್ನೂರು ಮನೆಗಳಿಗೆ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಇನ್ನು ಉಳಿದ ಎಂಟುನ್ನೂರು ಮನೆಗಳಿಗೆ ಶೌಚಾಲಯ ನಿರ್ಮಾಣ ಮಾಡುವುದು ಬಾಕಿ ಇದೆ” ಎಂದು ತಿಳಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X