ಬೆಂಗಳೂರು | ವಿದ್ಯುತ್ ಬಿಲ್ ಜಾಸ್ತಿ ಬಂತೆಂದು ಮೀಟರ್ ರೀಡರ್ ಮೇಲೆ ಹಲ್ಲೆ; ದೂರು ದಾಖಲು

Date:

Advertisements
  • ಗೋವಿಂದಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
  • ವಿದ್ಯುತ್ ಮೀಟರ್ ರೀಡ್ ಮಾಡಿ ಬಿಲ್ ನೀಡುವಾಗ ನಡೆದ ಘಟನೆ

ಕಳೆದ ಬಾರಿಗಿಂತ ಈ ತಿಂಗಳು ವಿದ್ಯುತ್ ದರ ಹೆಚ್ಚಳ ಬಂದ ಹಿನ್ನೆಲೆ, ಬೆಂಗಳೂರು ವಿದ್ಯುತ್ ಸರಬರಾಜು ನಿಗಮ (ಬೆಸ್ಕಾಂ)ದ ಮೀಟರ್ ರೀಡರ್ ಸಿಬ್ಬಂದಿಯೊಬ್ಬರನ್ನು ಥಳಿಸಿರುವ ಘಟನೆ ಬೆಂಗಳೂರಿನ ಗೋವಿಂದಪುರದಲ್ಲಿ ನಡೆದಿದೆ.

ಬೆಸ್ಕಾಂ ಸಿಬ್ಬಂದಿ ನಾಗರಾಜ್ ನಾಯಕ್ ಎಂಬವರ ಮೇಲೆ ಶಂಶಾದ್ ಖಾನ್‌ ಎಂಬಾತ ಹಲ್ಲೆ ಮಾಡಿದ್ದಾರೆ. ಎಂದಿನಂತೆ ನಾಗರಾಜ್ ಅವರು ಮೀಟರ್ ರೀಡಿಂಗ್ ಮಾಡಿ ವಿದ್ಯುತ್ ಬಿಲ್ ನೀಡುವ ಕೆಲಸದಲ್ಲಿ ತೊಡಗಿದ್ದರು. ಆ.4 ರಂದು ಬೆಳಿಗ್ಗೆ 11:30ರ ಸುಮಾರಿಗೆ ಬೆಂಗಳೂರಿನ ಗೋವಿಂದಪುರದ 16ನೇ ಕ್ರಾಸ್‌ನಲ್ಲಿರುವ ಶಂಶಾದ್‌ ಖಾನ್ ಎಂಬುವವರ ಮನೆಯ ವಿದ್ಯುತ್ ಮೀಟರ್ ರೀಡಿಂಗ್ ಮಾಡಿ ₹458 ಬಾಕಿ ಬಿಲ್​ ಸೇರಿದಂತೆ ಒಟ್ಟು ₹4,026 ಬಿಲ್​ ನೀಡಿದ್ದಾರೆ.

ಇದಕ್ಕೆ ಕೋಪಗೊಂಡ ಶಂಶಾದ್ ಖಾನ್ ಕಳೆದ ಬಾರಿಗಿಂತ ಈ ಬಾರಿ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಮೊತ್ತದ ಬಿಲ್ ಬಂದಿದೆ ಎಂದು ಸಿಬ್ಬಂದಿ ಜತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಅವರ ಜತೆಗೆ ನಾಗರಾಜ್ ಜಗಳ ಮುಂದುವರೆಸದೆ ಮುಂದಿನ ಮನೆಗಳಿಗೆ ಬಿಲ್ ನೀಡಲು ತೆರಳಿದ್ದಾರೆ. ಅವರನ್ನೇ ಹಿಂಬಾಲಿಸಿಕೊಂಡ ಬಂದ ಶಂಶಾದ್ ಖಾನ್ ಪದೇಪದೆ ಜಗಳಕ್ಕೆ ಇಳಿದಿದ್ದಾರೆ.

Advertisements

ಮೀಟರ್​ ರೀಡಿಂಗ್​ ಆಧರಿಸಿಯೇ ಬಿಲ್​ ನೀಡಿದ್ದೇನೆ. ಬೆಸ್ಕಾಂ ಕಚೇರಿಗೆ ಭೇಟಿ ನೀಡುವಂತೆ ಶಂಶಾದ್ ಕಾನ್ ಅವರಿಗೆ ಸಲಹೆ ನೀಡಿದ್ದಾರೆ. ಆದರೂ ಕೇಳದ ಶಂಶಾದ್ ಖಾನ್ ನಾಗರಾಜ್ ಅವರ ಮುಖಕ್ಕೆ ನಾಲ್ಕೈದು ಬಾರಿ ಗುದ್ದಿದ್ದಾರೆ. ಇದರಿಂದ ನಾಗರಾಜ್ ಅವರ ಒಂದು ಹಲ್ಲು ಮುರಿದಿದೆ.

ನಾಗರಾಜ್​ ನಾಯಕ್  ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿಗಳು ನಾಗರಾಜ್​ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಡ್ಯೂಟಿ ನೀಡದ್ದಕ್ಕೆ ಬಿಎಂಟಿಸಿ ಬಸ್ ಡಿಪೋ‌ ಮುಂದೆಯೇ ಚಾಲಕ ಆತ್ಮಹತ್ಯೆ

ಗೋವಿಂದಪುರ ಪೊಲೀಸ್​ ಠಾಣೆಗೆ ನಾಗರಾಜ್​ ನಾಯಕ್ ಅವರು ದೂರು ನೀಡಿದ್ದು, ಪೊಲೀಸರು ಶಂಶಾದ್​ ಖಾನ್​ಅವರನ್ನು ಬಂಧಿಸಿ ಠಾಣಾ ಜಾಮೀನು ನೀಡಿ ಬಿಡುಗಡೆ ಮಾಡಿದ್ದಾರೆ.

“300ಕ್ಕೂ ಹೆಚ್ಚು ಯೂನಿಟ್‌ ವಿದ್ಯುತ್​ ಅನ್ನು ಶಂಶಾದ್​ ಖಾನ್ ಅವರು ಬಳಸಿದ್ದರಿಂದ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್‌ಗೆ ಅರ್ಹರಲ್ಲ” ಎಂದು ನಾಗರಾಜ್​ ನಾಯಕ್ ತಿಳಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟ, ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್‌ ಕೇಸ್‌ ದಾಖಲು

ಬೆಂಗಳೂರು ನಗರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪೂಜಿಸಬೇಕಾಗಿ ಮತ್ತು...

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮಹಿಳೆ ವಿರುದ್ಧದ ಪೋಕ್ಸೋ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಬೆಂಗಳೂರಿನ ವಿಲ್ಲಾವೊಂದರಲ್ಲಿ ವಾಸವಿದ್ದ 53 ವರ್ಷದ ಮಹಿಳೆ ತನ್ನ ಕಾಮ ತೃಷೆಗಾಗಿ...

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

Download Eedina App Android / iOS

X