ಬೆಂಗಳೂರು | ಈಜಿಪುರ ಮೇಲ್ಸೇತುವೆಯ ಸ್ಥಳ ಇದೀಗ ‘ಸ್ಮಾರಕ’; ನೆಟ್ಟಿಗರ ಅಪಹಾಸ್ಯ

Date:

Advertisements
  • ಈಜಿಪುರ ಮೇಲ್ಸೇತುವೆ ನೀವು ನೋಡಲೇಬೇಕಾದ ಸ್ಮಾರಕವೆಂದು ನೆಟ್ಟಿಗರು ಅಪಹಾಸ್ಯ
  • ಕಳೆದ 6 ವರ್ಷಗಳಿಂದ ನಿಂತಲ್ಲೇ ನಿಂತಿರುವ ಈಜಿಪುರ ಮೇಲ್ಸೇತುವೆ ಕಾಮಗಾರಿ

ರಾಜ್ಯ ರಾಜಧಾನಿ ಬೆಂಗಳೂರಿನ ಕೋರಮಂಗಲದಲ್ಲಿ ಆರು ವರ್ಷಗಳಿಂದ ನಿರ್ಮಾಣ ಹಂತದಲ್ಲಿಯೇ ಉಳಿದಿರುವ ಈಜಿಪುರ ಮೇಲ್ಸೇತುವೆಯ ಸ್ಥಳವನ್ನು ಗೂಗಲ್ ಲೊಕೇಶನ್​ನಲ್ಲಿ ಹುಡುಕಿದಾಗ ‘ಸ್ಟೋನ್‌ಹೆಂಜ್’ ಎಂದು ತೋರಿಸುತ್ತಿದೆ. ಇದೀಗ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳಾಗುತ್ತಿವೆ.

ಕ್ಯಾಲೆಬ್ ಫ್ರೈಸೆನ್ ಎಂಬ ಟ್ವಿಟ್ಟರ್ ಬಳಕೆದಾರವೊಬ್ಬರು ‘ಸ್ಟೋನ್‌ಹೆಂಜ್’ ಎಂಬ ಟೈಟಲ್​ನಡಿ ಸರ್ಚ್ ಮಾಡಲಾದ ಗೂಗಲ್ ಲ್ಯಾಂಡ್ ಮಾರ್ಕ್ ಹಂಚಿಕೊಂಡಿದ್ದಾರೆ. ಅದರಲ್ಲಿ ಅಪೂರ್ಣವಾಗಿರುವ ಈಜಿಪುರ ಮೇಲ್ಸೇತುವೆ ಕೂಡ ಲಿಸ್ಟ್ ಆಗಿದೆ. ಈ ಬಗ್ಗೆ ಹಲವರು ನೀವು ನೋಡಲೇಬೇಕಾದ ಸ್ಮಾರಕವೆಂದು ನೆಟ್ಟಿಗರು ಅಪಹಾಸ್ಯ ಮಾಡಿದ್ದಾರೆ.

ಈಜಿಪುರ ಮೇಲ್ಸೇತುವೆ ಬಗ್ಗೆ ರಾಮ್‌ಕುಮಾರ್ ಎಂಬುವವರು, “ಈ ಮೇಲ್ಸೇತುವೆಯನ್ನು ನನ್ನ ಹೆಂಡತಿ ಗರ್ಭಿಣಿಯಾಗಿದ್ದಾಗ ಪ್ರಾರಂಭಿಸಲಾಯಿತು. ಈಗ ನನ್ನ ಮಗು 5 ವರ್ಷಕ್ಕೆ ಬೆಳೆದಿದೆ. ಶಾಲೆಗೆ ಹೋಗುತ್ತಿದೆ. ನಾನು ನನ್ನ ಮಗುವಿನೊಂದಿಗೆ ಈ ಸ್ಥಳದಲ್ಲಿ ಹಾದುಹೋಗುವಾಗ ಪ್ರತಿ ಬಾರಿ ಈ ಮೇಲ್ಸೇತುವೆ ಬಗ್ಗೆ ಉತ್ತಮ ಕಥೆಯನ್ನು ಹೇಳುತ್ತಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.

Advertisements
ಈ ಸುದ್ದಿ ಓದಿದ್ದೀರಾ? ಇನ್ಸ್‌ಪೆಕ್ಟರ್ ವಿರುದ್ಧ ಸುಳ್ಳು ಆರೋಪ; ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದಿದ್ದ ಪೇದೆಗಳು ಅಮಾನತು

“ಮೇಲ್ಸೇತುವೆ ಬಳಿಯ ಸೋನಿ ಸಿಗ್ನಲ್ ಪಕ್ಕದಲ್ಲಿಯೇ ವಾಸಿಸುತ್ತಿದ್ದೇನೆ. ಇಲ್ಲಿ ಉದ್ದನೆಯ ಪಿಲ್ಲರ್‌ಗಳನ್ನು ನಿರ್ಮಿಸಿ ಹಾಗೆಯೇ ಕೈ ಬಿಟ್ಟಿದ್ದಾರೆ. ಈ ಮೇಲ್ಸೇತುವೆ ಈಜಿಪುರ ಮತ್ತು ಮಡಿವಾಳಕ್ಕೆ ಸಂಪರ್ಕ ಕಲ್ಪಿಸಬೇಕಿತ್ತು. ಕಳೆದ 5 ವರ್ಷಗಳಿಂದ ಪ್ರತಿದಿನ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇನ್ನೂ ಯೋಜನೆಯನ್ನು ಪೂರ್ಣಗೊಳಿಸಲು ಯಾವುದೇ ಯೋಜನೆಗಳಿಲ್ಲ. ಇದು ನಿಜವಾಗಿಯೂ ಕರುಣಾಜನಕ” ಎಂದು ಅಶ್ವತ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಚುನಾವಣೆ ಹಿನ್ನಲೆ, ಹಲವು ರಸ್ತೆ, ಹೆದ್ದಾರಿ ಹಾಗೂ ಮೇಲ್ಸೇತುವೆಗಳನ್ನು ಉದ್ಘಾಟನೆ ಮಾಡಲಾಗಿದೆ. ಆದರೆ, ಕಳೆದ 6 ವರ್ಷಗಳಿಂದ ನಿಂತಲ್ಲೇ ನಿಂತಿರುವ ಕಾಮಗಾರಿ ಬಗ್ಗೆ ಸರ್ಕಾರ ಇನ್ನೂ ಗಮನ ಹರಿಸುತ್ತಿಲ್ಲ, ಈ ಬಗ್ಗೆ ಹಲವು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ‘ಸ್ಟೋನ್‌ಹೆಂಜ್’ನಲ್ಲಿ ಈಜಿಪುರ ಮೇಲ್ಸೇತುವೆಯನ್ನು ಗೂಗಲ್​ನಿಂದ ತೆಗೆದು ಹಾಕಲಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X