ಬೈಯಪ್ಪನಹಳ್ಳಿ-ಶೆಟ್ಟಿಗೆರೆ ಏರ್‌ಪೋರ್ಟ್ ಲೈನ್ ಮೆಟ್ರೋ ಘಟಕ ನಿರ್ಮಾಣಕ್ಕೆ ಗುತ್ತಿಗೆ ನೀಡಿದ ಬಿಎಂಆರ್‌ಸಿಎಲ್

Date:

Advertisements
  • ಕೆ.ಆರ್.ಪುರ ಮತ್ತು ವೈಟ್‌ಫೀಲ್ಡ್‌ ನಡುವಿನ ಪ್ರಯಾಣದ ಸಮಯ 25 ನಿಮಿಷವಾಗಲಿದೆ
  • ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಚಾರ ಡಿಸೆಂಬರ್ 2024 ಅಥವಾ 2025ರಲ್ಲಿ ಆರಂಭ

ರಾಜಧಾನಿ ಬೆಂಗಳೂರಿನಲ್ಲಿ ಬೈಯಪ್ಪನಹಳ್ಳಿ ಮತ್ತು ಶೆಟ್ಟಿಗೆರೆಯಲ್ಲಿ ಏರ್‌ಪೋರ್ಟ್ ಲೈನ್ ಮೆಟ್ರೋ ಘಟಕ ನಿರ್ಮಾಣಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಗುತ್ತಿಗೆ ನೀಡಿದೆ.

ಮಾರ್ಚ್ 18ರಂದು ಮೆಟ್ರೋ ಘಟಕ ನಿರ್ಮಾಣದ ಗುತ್ತಿಗೆಯನ್ನು ಜೆ.ಕುಮಾರ್ ಇನ್‌ಫ್ರಾಜೆಕ್ಟ್ಸ್-ಎಐಸಿಪಿಎಲ್‌ಗೆ ನೀಡಲಾಗಿದೆ. ಶೆಟ್ಟಿಗೆರೆಯಲ್ಲಿ ಏರ್‌ಪೋರ್ಟ್ ಲೈನ್ ಮೆಟ್ರೋ ಘಟಕ ನಿರ್ಮಾಣಕ್ಕೆ ಒಟ್ಟು ₹182.33 ಕೋಟಿ ಒಪ್ಪಂದವಾಗಿದೆ. ಬೈಯಪ್ಪನಹಳ್ಳಿ ಘಟಕ ಮರುರೂಪಿಸಲು ₹249.19 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಹಂತ 2ಎ ಅಡಿಯಲ್ಲಿ 18.236-ಕಿಮೀ ಸಿಲ್ಕ್ ಬೋರ್ಡ್ ಜಂಕ್ಷನ್-ಕೆಆರ್ ಪುರಂ ಮಾರ್ಗದ ಸೇವೆ ಬೈಯಪ್ಪನಹಳ್ಳಿ ಡಿಪೋವನ್ನು ಮರುರೂಪಿಸಲಾಗುತ್ತಿದೆ.

ಈಗಿರುವ 25 ಎಕರೆ ಭೂಮಿಯಲ್ಲಿ ಹೊಸ ಘಟಕ ಎರಡು ಹಂತದ ಸೌಲಭ್ಯವಾಗಲಿದೆ. ಇದು 28 ಸ್ಥಿರ ರೇಖೆಗಳನ್ನು ಹೊಂದಿರುತ್ತದೆ. 14 ಗ್ರೇಡ್ ಮತ್ತು 14 ಭೂಗತ ಹಾಗೂ ಹೊಸ ಸೌಲಭ್ಯವನ್ನು ನಿರ್ಮಿಸಲು ಈಗಿರುವ ಘಟಕವನ್ನು ತೆಗೆಯಲಾಗುತ್ತದೆ.

Advertisements

ಮರುರೂಪಿಸಲಾಗುವ ಬೈಯಪ್ಪನಹಳ್ಳಿ ಡಿಪೋ ಸಿಲ್ಕ್ ಬೋರ್ಡ್-ಕೆ.ಆರ್.ಪುರ-ವಿಮಾನ ನಿಲ್ದಾಣ ಮಾರ್ಗದಲ್ಲಿ ಶೆಟ್ಟಿಗೆರೆ ಡಿಪೋ-ವರ್ಕ್ ಶಾಪ್ ಸಿದ್ಧವಾಗುವವರೆಗೆ ಸೇವೆ ಸಲ್ಲಿಸುತ್ತದೆ. ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಚಾರ ಡಿಸೆಂಬರ್ 2024 ಅಥವಾ 2025 ರ ಆರಂಭವಾಗುವ ನಿರೀಕ್ಷೆಯಿದೆ.

ವೈಟ್‌ಫೀಲ್ಡ್‌ ಮೆಟ್ರೋ ಭಾನುವಾರದಿಂದ ಸಾರ್ವಜನಿಕರಿಗೆ ಮುಕ್ತ

ಮಾರ್ಚ್ 26 (ಭಾನುವಾರ) ಬೆಳಗ್ಗೆ 7 ಗಂಟೆಗೆ 13.71 ಕಿಮೀ ಮಾರ್ಗದ ಕೆ.ಆರ್.ಪುರಂ-ವೈಟ್‌ಫೀಲ್ಡ್‌ ಮೆಟ್ರೋ ಆರಂಭವಾಗಲಿದೆ. ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ.

ಶನಿವಾರ ಮಧ್ಯಾಹ್ನ 1 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಭಾನುವಾರ ಬೆಳಗ್ಗೆ 7 ಗಂಟೆಗೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆ.ಆರ್.ಪುರ ಮತ್ತು ವೈಟ್‌ಫೀಲ್ಡ್‌ ನಡುವಿನ ಪ್ರಯಾಣದ ಸಮಯ 25 ನಿಮಿಷ ಹಾಗೂ ಪ್ರಯಾಣ ದರ ₹35 ಇರಲಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

ಬೆಂಗಳೂರು ಮೆಟ್ರೋ: ನಾಳೆ ಹಳದಿ ಮಾರ್ಗದಲ್ಲಿ ಬೆಳಿಗ್ಗೆ 5ಕ್ಕೆ ಸಂಚಾರ ಆರಂಭ

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ಹಳದಿ ಮಾರ್ಗದಲ್ಲಿ ಸೋಮವಾರ...

Download Eedina App Android / iOS

X