ಧಾರವಾಡ | ದನದ ಕೊಟ್ಟಿಗೆಗೆ ಬೆಂಕಿ; 6 ಜಾನುವಾರುಗಳು ಸಜೀವ ದಹನ

Date:

Advertisements

ದನದ ಕೊಟ್ಟಿಗೆಗೆ ಬೆಂಕಿ ಬಿದ್ದು, ಆರು ಜಾನುವಾರುಗಳು ಜೀವಂತ ದಹನವಾಗಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಂಬೂರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಯಲ್ಲಪ್ಪ ಹುಡೆದ ಎಂಬುವರ ಹೊಲದಲ್ಲಿದ್ದ ಗುಡಿಸಲಿಗೆ (ದನದ ಕೊಟ್ಟಿಗೆ) ಮಂಗಳವಾರ ಸಂಜೆ ಬೆಂಕಿ ಬಿದ್ದಿದೆ. ಪರಿಣಾಮವಾಗಿ ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಜೀವಂತವಾಗಿ ಸುಟ್ಟುಹೋಗಿವೆ.

ಘಟನೆ ಬಗ್ಗೆ ಗ್ರಾಮದ ನಿವಾಸಿ ಎಸ್.ಎನ್ ಪಾಟೀಲ್ ಈದಿನ.ಕಾಮ್ ಜೊತೆ ಮಾತನಾಡಿದ್ದು, “ಬೆಂಕಿಬಿದ್ದ ಗುಡಿಸಲು ಊರಿನಿಂದ ಅರ್ಧ ಕಿಲೋಮೀಟರ್ ದೂರದಲ್ಲಿದೆ. ಗುಡಿಸಲಿನ ಮಾಲೀಕ ಯಲ್ಲಪ್ಪ ಸೊಳ್ಳೆಗಳನ್ನು ಓಡಿಸಲು ಒಲೆ ಹಚ್ಚಿದ್ದಾರೆ. ಅವರು ಊರಿನೊಳಗಿದ್ದ ಮನೆಗೆ ತೆರಳಿದ ಬಳಿಕ, ಬೆಂಕಿ ಹೊತ್ತಿಕೊಂಡಿದೆ. ಕೊಟ್ಟಿಯಲ್ಲಿದ್ದ ಒಂದು ಜಾನುವಾರು ಅಪಾಯದಿಂದ ಪಾರಗಿದೆ” ಎಂದು ತಿಳಿಸಿದ್ದಾರೆ.

Advertisements

ಈದಿನ.ಕಾಮ್ ಜೊತೆಗೆ ನಿಂಗಮ್ಮ ಸವಣೂರ ಮಾತನಾಡಿ, “ಈಗಾಗಲೇ ಅವಘಡ ಸಂಭವಿಸಿದ ಸ್ಥಳಕ್ಕೆ ತಹಶೀಲ್ದಾರ್ ಮತ್ತು ಗ್ರಾಮ ಲೆಕ್ಕಾಧಿಕಾರಿ (ತಲಾಟಿ) ಭೆಟ್ಟಿನೀಡಿ ಪರಿಶೀಲನೆ ನಡೆಸಿದ್ದಾರೆ. ನಷ್ಟದಲ್ಲಿ ಸಿಲುಕಿರುವ ಯಲ್ಲಪ್ಪ ಹುಡೇದ ಅವರಿಗೆ ಅಧಿಕಾರಿಗಳು ನಷ್ಟಪರಿಹಾರ ನೀಡಬೇಕು” ಎಂದು ಆಗ್ರಹಿಸಿದ್ದಾರೆ.

ಬಸವರಾಜ ಕಳಸೂರ ಮಾತನಾಡಿ, “ಹೊಲದಲ್ಲಿದ್ದ ದನದ ಕೊಟ್ಟಿಗೆ ಅಷ್ಟೇ ಅಲ್ಲದೆ ಪಕ್ಕದಲ್ಲಿರುವ ಹುಲ್ಲಿನ ಬಣವೆಯೂ ಸುಟ್ಟು ಹೋಗಿದೆ. ಎರಡು ಜರ್ಸಿ ಆಕಳು, ಎರಡು ಎತ್ತುಗಳು, ದನಗಳು ಎಲ್ಲವೂ ಬೆಂಕಿಯಲ್ಲಿ ಸುಟ್ಟು ಹೋಗಿವೆ. ಸರ್ಕಾರವು ನಷ್ಟ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಬ್ಬಳ್ಳಿ | ಹುಲಿ ಉಗುರು ಪ್ರಕರಣ: ವಾಣಿಜ್ಯನಗರಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ

ರಾಜ್ಯದಲ್ಲಿ ಹುಲಿ ಉಗುರು ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿದ್ದು, ವಾಣಿಜ್ಯನಗರಿಯಲ್ಲಿ ಅರಣ್ಯ...

ಧಾರವಾಡ | ಸರ್ಕಾರ ʼಗ್ಯಾರಂಟಿʼ ಯೋಜನೆ ನೀಡದಿದ್ದರೂ ಪರವಾಗಿಲ್ಲ, ಮದ್ಯ ಮಾರಾಟ ಬಂದ್‌ ಮಾಡಲಿ

ರಾಜ್ಯದ 600 ಸಣ್ಣ ಗ್ರಾಮ ಪಂಚಾಯತಿಗಳಲ್ಲಿ ಮದ್ಯ ಮಾರಾಟಕ್ಕೆ ಪರವಾನಿಗೆ ಕೊಡುವ...

ಧಾರವಾಡ | ಆಯುಷ್ ಕೋರ್ಸ್ ಶುಲ್ಕ ಹೆಚ್ಚಳ; ಎಐಡಿಎಸ್‌ಓ ಖಂಡನೆ

ಆಯುಷ್ ಕೋರ್ಸ್ ಶುಲ್ಕವನ್ನು ಏಕಾಏಕಿ  ಶೇ 25ರಷ್ಟು ಹೆಚ್ಚಿಸಿರುವ  ರಾಜ್ಯ ಸರ್ಕಾರದ...

ನಮ್ಮ ಸಚಿವರು | ಸಂತೋಷ್ ಲಾಡ್: ಅಕ್ರಮ ಗಣಿಗಾರಿಕೆಯ ನೆರಳಿನ ರಾಜಕಾರಣ

ಬಿಜೆಪಿ ಸರ್ಕಾರದ ಕೆ.ಸುಧಾಕರ್, ಮುನಿರತ್ನ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಕೆಂಪಣ್ಣ ವಿರುದ್ಧ...

Download Eedina App Android / iOS

X