ಹೊಳೆನರಸೀಪುರ | ದೇವೇಗೌಡರದ್ದು ಕುಟುಂಬ ರಾಜಕಾರಣ ಅನ್ನದೆ ಮತ್ತೇನು ಹೇಳಬೇಕು: ಈಶ್ವರಪ್ಪ

Date:

Advertisements
  • ʼಮೋದಿ ಬಗ್ಗೆ ಖರ್ಗೆ ಹೇಳಿದ್ದು ಸರಿ ಅಂದರೆ ಕಾಂಗ್ರೆಸ್‌ಗೆ ಓಟು ಕೊಡಿʼ
  • ʼರಾಮಸ್ವಾಮಿ ಬಿಜೆಪಿಗೆ ಬಂದಿದ್ದು ನಮ್ಮೆಲ್ಲರಿಗೂ ಭೀಮ ಬಲ ಬಂದಂತಾಗಿದೆʼ

ದೇವೇಗೌಡರ ಕುಟುಂಬದ ಬಗ್ಗೆ ಎಷ್ಟೇ ಹೇಳಿದರೂ ತಪ್ಪೆ. ಅವರ ಕುಟುಂಬವನ್ನು ವಂಶ ಪಾರಂಪರ್ಯ ಸರ್ಕಾರ, ಒಂದೇ ಕುಟುಂಬದ ಸರ್ಕಾರ ಎನ್ನದೆ ಮತ್ತೆ ಏನಂತ ಕರೀಬೇಕು ಎಂದು ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ಟೀಕಿಸಿದರು.

ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಹೋಬಳಿಯಲ್ಲಿ ಬಿಜೆಪಿ ಅಭ್ಯರ್ಥಿ ಯೋಗಾ ರಮೇಶ್ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, “ದೇವೇಗೌಡ ಅವರ ಕುಟುಂಬದ ಮಧ್ಯೆ ಮುಖ ತೋರ್ಸೋಕೆ ಇಬ್ರಾಹಿಂನನ್ನು ಇಟ್ಟುಕೊಂಡಿದ್ದಾರೆ. ಇದಲ್ಲಾ ವ್ಯವಸ್ಥೆ” ಎಂದು ಲೇವಡಿ ಮಾಡಿದರು.

“ಒಂದೇ ಕುಟುಂಬದ ಕೈಯಲ್ಲಿ ಒಂದು ಪಕ್ಷ ಇರಬೇಕಾದರೆ, ಅಂತಹ ಕುಟುಂಬವನ್ನು ಬೆಂಬಲಿಸಬೇಕಾ. ಬಿಜೆಪಿ ಅಭ್ಯರ್ಥಿ ಯೋಗಾ ರಮೇಶ್‌ ಅವರು ಜಾತಿ ನೋಡಿಲ್ಲ. ಅವರು ಪಕ್ಷಕ್ಕಾಗಿ ದುಡಿದ ಒಬ್ಬ ʼರಾಷ್ಟ್ರಭಕ್ತʼ. ಎಲ್ಲರೂ ಸೈನಿಕರ ರೀತಿ ಕೆಲಸ ಮಾಡುವ ಮೂಲಕ ರಮೇಶ್ ಅವರನ್ನು ಗೆಲ್ಲಿಸಬೇಕು” ಎಂದು ಕರೆ ನೀಡಿದರು.

Advertisements

“ರಾಮಸ್ವಾಮಿ ಅವರನ್ನು 1989ರಲ್ಲಿ ವಿಧಾನಸಭೆಗೆ ಬಂದಾಗಿನಿಂದ ಇಲ್ಲಿಯವರೆಗೂ ನೋಡುತ್ತಾ ಬಂದಿದ್ದೀನಿ. ಅವರು ಮಾತನಾಡುವಾಗ ‘ಸರಿಯಾದ ವ್ಯಕ್ತಿ, ಸರಿಯಾದ ಪಕ್ಷದಲ್ಲಿ ಇಲ್ವಲ್ಲಾ’ ಅನ್ನಿಸುತ್ತಿತ್ತು. ಸರಿಯಾದ ವ್ಯಕ್ತಿ ಬಿಜೆಪಿಗೆ ಬಂದಿದ್ದು ನಮ್ಮೆಲ್ಲರಿಗೂ ಭೀಮ ಬಲ ಬಂದಂತಾಗಿದೆ” ಎಂದು ಶ್ಲಾಘಿಸಿದರು.

ಈ ಸುದ್ದಿ ಓದಿದ್ದೀರಾ? ಅರಸೀಕೆರೆ ಕ್ಷೇತ್ರ | ಶಿವಲಿಂಗೇಗೌಡ-ಸಂತೋಷ್ ನಡುವೆ ನೇರ ಕದನ

ಮೋದಿಯನ್ನು ವಿಷಸರ್ಪ ಎಂದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, “ನಾವು ನಿಮಗೆಲ್ಲಾ ಗೌರವ ಕೊಡುತ್ತಿದ್ದೆವು. ನಿಮ್ಮ ಬಾಯಲ್ಲಿ ಇಂತಹ ಮಾತು ಬಂದ ಮೇಲೆ, ನೀವು ರಾಜಕೀಯ ನಿವೃತ್ತಿ ಪಡೆಯೋದೇ ಒಳ್ಳೆಯದು. ಖರ್ಗೆ ಹೇಳಿದ್ದು ತಪ್ಪೋ, ಸರಿಯೋ ಅನ್ನೋದನ್ನು ಜನರ ನಿರ್ಧಾರಕ್ಕೇ ಬಿಡುವೆವು” ಎಂದರು.

“ಮೋದಿ ಬಗ್ಗೆ ಖರ್ಗೆ ಹೇಳಿದ್ದು ಸರಿ ಅಂದರೆ ಕಾಂಗ್ರೆಸ್‌ಗೆ ಓಟು ಕೊಡಿ, ಅಯೋಗ್ಯದ ಮಾತು ಅನ್ನಿಸಿದರೆ ಬಿಜೆಪಿ ಬೆಂಬಲಿಸಿ” ಎಂದು ಮನವಿ ಮಾಡಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X