ಕೂಲಿ ಮಾಡುತ್ತಲೇ ‘ಸೋಬಾನೆ’ ತಂಡ ಕಟ್ಟಿದ ಸಿದ್ಧಗಂಗಮ್ಮ!

Date:

Advertisements

‘ನಾನು ಹಾಡುವುದೇ ನನ್ನ ಹಾಗೂ ನಮ್ಮೂರ ಜನರ ಖುಷಿಗಾಗಿ. ಹೀಗಾಗಿ ಪದ ಹಾಡಿದಾಗ ಏನನ್ನೂ ಬಯಸುವುದಿಲ್ಲ’ – ಹೀಗಂತ ಹೇಳಿದ್ದು 65 ವರ್ಷದ ಹಿರಿಯ ಜೀವ ಸಿದ್ಧಗಂಗಮ್ಮ. ಅವರ ಮುಗ್ಧ ಮಾತುಗಳು ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ಅವರ ‘ಎದೆ ತುಂಬಿ ಹಾಡುವೆನು’ ಗೀತೆಯ ‘ಹಾಡೋ ಹಕ್ಕಿಗೆ ಬೇಕೇ ಬಿರುದು ಸನ್ಮಾನ’ ಸಾಲನ್ನು ನೆನಪಿಸಿದವು.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸೋಮಲಾಪುರ ಎಂಬ ಪುಟ್ಟ ಗ್ರಾಮದಲ್ಲಿ ಕಳೆದ 40 ವರ್ಷಗಳಿಂದ ಸೋಬಾನೆ ಪದ ಹಾಡುತ್ತ ಬಂದಿರುವ ಸಿದ್ಧಗಂಗಮ್ಮ, ಅಳಿವಿನಂಚಿನಲ್ಲಿರುವ ಈ ಜಾನಪದ ಕಲೆಯ ರಾಯಭಾರಿಯೂ ಹೌದು. ಇಂದಿಗೂ ದಣಿವರಿಯದೆ ಗಂಟೆಗಟ್ಟಲೆ ಸೋಬಾನೆ ಪದಗಳನ್ನು ಹಾಡುತ್ತಾರೆ.

ಜನಪದ ಸಂಸ್ಕೃತಿಯಲ್ಲಿ ಸೋಬಾನೆ ಪದಕ್ಕೆ ವಿಶಿಷ್ಟ ಸ್ಥಾನವಿದೆ. ಅದು ಮೌಖಿಕವಾಗಿ ಒಬ್ಬರಿಂದ ಒಬ್ಬರಿಗೆ ದಾಟಿಬಂದಂತಹ ಕಲೆ. ಇಂತಹ ಕಲೆ ಈಗ ಟಿವಿ, ಸಾಮಾಜಿಕ ಜಾಲತಾಣಗಳ ಅಬ್ಬರದಿಂದಾಗಿ ಕಣ್ಮರೆಯಾಗುತ್ತಿದೆ ಎಂಬುದು ವಿಷಾದದ ಸಂಗತಿ. ಹಳ್ಳಿಗಳಲ್ಲಿ ಸೋಬಾನೆ ಪದ ಹಾಡುವವರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ಹೊಸ ತಲೆಮಾರಿನ ಮಕ್ಕಳಲ್ಲಿ ಕಲಿಯುವ ಉತ್ಸಾಹವೂ ಕ್ಷೀಣಿಸಿದೆ. ಇವೆಲ್ಲದರ ನಡುವೆಯೂ ಸಿದ್ಧಗಂಗಮ್ಮ ಅವರ ಹಾಡುವ ಉತ್ಸಾಹ ಕುಂದಿಲ್ಲ.

Advertisements
6212849659328709861

5ನೇ ತರಗತಿಯವರೆಗೂ ಓದಿರುವ ಸಿದ್ಧಗಂಗಮ್ಮ, ಈಗಲೂ ಕೂಲಿ ಮಾಡಿಯೇ ಬದುಕು ನಡೆಸುತ್ತಿದ್ದಾರೆ. ತಮ್ಮ ತಾಯಿ ಹಾಗೂ ಅಜ್ಜಿಯಿಂದ ಕಲಿತಿರುವ ಸೋಬಾನೆ ಪದಗಳನ್ನು ಗ್ರಾಮದ ಇತರ ಹೆಣ್ಣು ಮಕ್ಕಳಿಗೂ ಕಲಿಸಿದ್ದಾರೆ. ಈ ಮೂಲಕ ಕಲೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಮಾಡಿದ್ದಾರೆ.

ಸೋಮಲಾಪುರದಲ್ಲಿ ತಮ್ಮದೇ ತಂಡ ಕಟ್ಟಿಕೊಂಡಿರುವ ಸಿದ್ಧಗಂಗಮ್ಮ, ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಅಲ್ಲಿಗೆ ಹೋಗಿ ಪದ ಹಾಡುತ್ತಾರೆ. ಅವರ ತಂಡದಲ್ಲಿ ರೇಣುಕಮ್ಮ (55), ಕರಿಯಮ್ಮ (48), ನರಸಮ್ಮ (80), ತಿಮ್ಮಕ್ಕ (55) ಹಾಗೂ ಲಕ್ಷ್ಮಮ್ಮ (50) ಇದ್ದಾರೆ.

ಸಿದ್ಧಗಂಗಮ್ಮ ಮತ್ತು ತಂಡದಿಂದ ಸೋಬಾನೆ ಪದ

ಊರಿನ ಜಾತ್ರೆ, ಮದುವೆ, ಪೂಜೆ ಸೇರಿದಂತೆ ಗ್ರಾಮದಲ್ಲಿ ಯಾವುದೇ ಸಮಾರಂಭ ಇರಲಿ, ಅಲ್ಲಿ ಸಿದ್ಧಗಂಗಮ್ಮ ತಂಡ ಇರಲೇಬೇಕು. ಆದರೆ ಇಂತಹ ಅಪರೂಪದ ಕಲಾವಿದೆಯನ್ನು ಗುರುತಿಸುವಲ್ಲಿ ಸರ್ಕಾರ ಗುರುತಿಸುವಲ್ಲಿ ವಿಫಲವಾಗಿದೆ.

‘ಕಳೆದ 4 ದಶಕದಿಂದ ಸೋಬಾನೆ ಪದಗಳನ್ನು ಹಾಡಿಕೊಂಡು ಬಂದಿರುವ ಸಿದ್ಧಗಂಗಮ್ಮ ಅವರು ಇಂದಿಗೂ ಸಂಕಷ್ಟದಲ್ಲೇ ಬದುಕು ಸಾಗಿಸುತ್ತಿದ್ದಾರೆ. ತಾವು ಹಾಡುವ ಜೊತೆಗೆ ಬೇರೆಯವರಿಗೂ ಕಲಿಸುವ ಮೂಲಕ ಜಾನಪದ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರ ನೆರವಾಗಬೇಕು’ ಎಂದು ಗ್ರಾಮದ ಅಂಜಲಿ ಮನವಿ ಮಾಡಿದರು.

‘ಸರ್ಕಾರದಿಂದ ಆಯೋಜಿಸುವ ಜಾನಪದ ಕಾರ್ಯಕ್ರಮಗಳಲ್ಲಿ ನಮ್ಮೂರಿನ ಹೆಮ್ಮೆ ಆಗಿರುವ ಸಿದ್ಧಗಂಗಮ್ಮ ಅವರಿಗೆ ಅವಕಾಶ ಕೊಡಬೇಕು. ಅವರ ಸಾಧನೆ ಗುರುತಿಸಿ ಪ್ರಶಸ್ತಿ ನೀಡಬೇಕು’ ಎಂಬುದು ಗ್ರಾಮದ ಮುಖಂಡರ ಒತ್ತಾಯವಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

Download Eedina App Android / iOS

X