ಪಾಟೀಲರೇ, ಸ್ವಲ್ಪವಾದರೂ ಜನಪರವಾಗಿ ಇರಿ, ಜವಾಬ್ದಾರಿಯಿಂದ ನಡೆದುಕೊಳ್ಳಿ: ನಟ ಪ್ರಕಾಶ್‌ ರಾಜ್‌ ತಿರುಗೇಟು

Date:

Advertisements

ನಮಸ್ಕಾರ ಎಂ ಬಿ ಪಾಟೀಲರೇ, ಇದು ಕರ್ನಾಟಕ ರೈತರ ಸಮಸ್ಯೆ. ಕರ್ನಾಟಕದಲ್ಲಿಯೇ ಪ್ರತಿಭಟನೆ ಮಾಡಬೇಕು. ದೇವನಹಳ್ಳಿ ರೈತರ ಸಮಸ್ಯೆ ಬಗ್ಗೆ ಬೇರೆ ಕಡೆ ಪ್ರತಿಭಟಿಸಲು ಆಗುತ್ತದಾ? ಇಲ್ಲಿಯೇ ಹೋರಾಟ ಮಾಡಬೇಕು ಅಲ್ವಾ? ಎಂದು ನಟ ಪ್ರಕಾಶ್‌ ರಾಜ್‌ ಅವರು ಸಚಿವರಿಗೆ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಬೆಂಗಳೂರಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ್ದ ಎಂ ಬಿ ಪಾಟೀಲ ಅವರು, ರೈತರ ಭೂಸ್ವಾಧೀನಕ್ಕೆ ಪ್ರಕಾಶ್ ರೈ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿ, “ಕೇವಲ ಕರ್ನಾಟಕದಲ್ಲಿ ಮಾತ್ರ ಪ್ರಕಾಶ್ ಹೋರಾಟ ಯಾಕೆ? ಅವರು ಕರ್ನಾಟಕದಲ್ಲಿ ಮಾತ್ರವಲ್ಲ.‌ ಯುಪಿಯಲ್ಲೂ ಹೋರಾಟ ಮಾಡಲಿ, ಅ‌ಸ್ಸಾಂನಲ್ಲೂ, ಅಷ್ಟೇ ಯಾಕೆ ಗುಜರಾತ್​ನಲ್ಲೂ ಹೋರಾಟ ಮಾಡಲಿ” ಎಂದಿದ್ದರು.

ಎಂ ಬಿ ಪಾಟೀಲರ ಈ ಹೇಳಿಕೆಗೆ ವಿಡಿಯೋ ಮಾಡಿ ಪ್ರತಿಕ್ರಿಯಿಸಿರುವ ನಟ ಪ್ರಕಾಶ್‌ ರಾಜ್‌, “ನಾವು ದೇಶದ ಹಲವು ಕಡೆ ಹೋರಾಟ ಮಾಡಿದ್ದೇವೆ. ತಮಿಳುನಾಡಿನ ರೈತರ ಪರ ದೆಹಲಿಯಲ್ಲಿ ಪ್ರತಿಭಟನೆ ಮಾಡಿದ್ದೇನೆ. ಪಂಜಾಬ್​​​ ಮತ್ತು ಹರಿಯಾಣದಲ್ಲಿ ರೈತರು ಹೋರಾಟ ಮಾಡಿದಾಗಲೂ ಭಾಗವಹಿಸಿದ್ದೆ. ಮಣಿಪುರದಲ್ಲೂ ಅನ್ಯಾಯವಾದಾಗಲೂ ಧ್ವನಿ ಎತ್ತಿದ್ದೆ” ಎಂದು ತಿರುಗೇಟು ನೀಡಿದ್ದಾರೆ.

Advertisements

“ಗುಜರಾತ್‌ ಬಗ್ಗೆ ಹೇಳಿದ್ದೀರಿ, ಗುಜರಾತಿನ ಮಹಾಪ್ರಭು ಪ್ರಧಾನಿ ಮೋದಿ ಅವರನ್ನು ನಿಮಗಿಂತ ಹೆಚ್ಚು ಪ್ರಶ್ನೆ ಮಾಡುವವನು ನಾನೇ. ಆಯಾ ಹೋರಾಟಗಳಲ್ಲಿ ಮಾತನಾಡುತ್ತಿರುತ್ತೇನೆ. ಏಕೆಂದರೆ ನಾವು ಯಾವ ಪಕ್ಷದವರು ಅಲ್ಲ. ಜನರೇ ನಮಗೆ ಪಕ್ಷ. ನೀವು ಒಂದು ಪಕ್ಷದವರು. ಹೀಗಾಗಿ ಜನರಿಗೆ ಎಲ್ಲೇ ಸಮಸ್ಯೆ ಆದ್ರೂ ಮಾತನಾಡುವುದು ನನ್ನ ಜವಾಬ್ದಾರಿ” ಎಂದು ಹೇಳಿದ್ದಾರೆ.

“ದೇವನಹಳ್ಳಿ ವಿಷಯಕ್ಕೆ ಬರೋಣ. ನೋಡಿ, ಮುಖ್ಯಮಂತ್ರಿಗಳು ಕರೆದು ಸಭೆ ಮಾಡಿದರು. ಆ ಸಭೆಯಲ್ಲಿ ನಾವು ಜನಪರವಾಗಿ ನಿರ್ಧಾರ ತಗೋಬೇಕು ಅಂತ ನಿರ್ಧಾರ ಮಾಡಿದ್ದೇವೆ, ಆದರೆ ಒಂದಿಷ್ಟು ಕಾನೂನು ತೊಡಕುಗಳು ಇವೆ. ಅದನ್ನು ನಾವು ಬಗೆಹರಿಸಿಕೊಂಡು ಜು.15ಕ್ಕೆ ಸರ್ಕಾರದ ಅಭಿಪ್ರಾಯ ತಿಳಿಸುತ್ತೇವೆ ಎಂದಿದ್ದಾರೆ. ಅದರ ಬಗ್ಗೆ ಯೋಚನೆ ಮಾಡಿ ಎಂ ಬಿ ಪಾಟೀಲರೇ” ಎಂದು ಕುಟುಕಿದ್ದಾರೆ.

ಈ ಸುದ್ದಿ ಓದಿದ್ದೀರಾ? ಪ್ರಕಾಶ್ ರಾಜ್ ಬಹುಭಾಷಾ ನಟರಲ್ವಾ? ಬೇರೆ ರಾಜ್ಯಗಳಲ್ಲೂ ಹೋರಾಟ ಮಾಡಲಿ: ಎಂ ಬಿ ಪಾಟೀಲ್

“ದೇವನಹಳ್ಳಿಯಲ್ಲಿ ನಿಮ್ಮದೇ ಒಂದಿಷ್ಟು ಪುಡಾರಿಗಳು ಹೋಗಿ ನಿಮಗೆ 3 ಕೋಟಿ ರೂ. ಕೊಡುತ್ತೇವೆ ಅಂತ ಆಮಿಷವೊಡ್ಡುತ್ತಿದ್ದಾರೆ. ನಿಮಗೆ ಅವರು ಪರಿಚಯ ಇದ್ದರೆ ಆ ತಪ್ಪು ಮಾಡಬೇಡಿ ಅಂತ ಹೇಳಿ. ಕಾನೂನು ರೀತಿ ಒಂದು ಪರಿಹಾರ ಇದೆ. ನೀವು ಕುಳಿತು ಮಾತನಾಡಿ. ನಿಮಗೆ ಸಮಸ್ಯೆ ಬಗೆಹರಿಯದಿದ್ದರೆ ನಮ್ಮ ಹತ್ರ ಬನ್ನಿ. ನಮ್ಮಲ್ಲೂ ತಜ್ಞರು ಇದ್ದಾರೆ” ಎಂದು ಎದುರೇಟು ನೀಡಿದ್ದಾರೆ.

“ನಿವೃತ್ತ ನ್ಯಾಯಾಧೀಶ ಗೋಪಾಲಗೌಡರು ನಮ್ಮ ಜೊತೆ ಇದ್ದಾರೆ. ಅವರು ಬೆಂಗಳೂರಿನಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಎಕರೆ ಭೂಮಿ ರೈತರಿಗೆ ಸೇರಬೇಕು ಅಂತ ಐತಿಹಾಸಿಕ ತೀರ್ಪು ನೀಡಿದವರು. ನಿಮಗೆ 15ನೇ ತಾರೀಖಿನಲ್ಲಿ ಇತ್ಯರ್ಥವಾಗದಿದ್ದರೆ ನಮ್ಮನ್ನು ಭೇಟಿಯಾಗಿ. ನಾವು ಸಲಹೆ ಕೊಡುತ್ತೇವೆ. ಸ್ವಲ್ಪ ಜವಾಬ್ದಾರಿಯಿಂದ ನಡೆದುಕೊಳ್ಳಿ ಎಂ ಬಿ ಪಾಟೀಲರೇ, ಮತ್ತೆ ಸಿಗೋಣ ಮಾತನಾಡೋಣ” ಎಂದು ನಗುತ್ತಲೇ ಉತ್ತರಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X