ಹಾವೇರಿ | ಪ್ರಾಣಿ-ಪಕ್ಷಿಗಳಿಂದ ಬೆಳೆ ರಕ್ಷಿಸಲು ಮೈಕ್‌ ಮೊರೆಹೋದ ರೈತರು

Date:

Advertisements
  • ಮೈಕ್‌‌ನಲ್ಲಿ ತಮ್ಮ ಧ್ವನಿ ರೆಕಾರ್ಡ್‌ ಮಾಡಿ ಹೊಲದ ಸುತ್ತಲೂ ಅಳವಡಿಸಿದ್ದಾರೆ
  • ʼಕೂಗುವ ಶಬ್ದ ಹೊರ ಬರುವುದರಿದ ಪ್ರಾಣಿ-ಪಕ್ಷಿಗಳು ಹೊಲದ ಕಡೆ ಸುಳಿಯುತ್ತಿಲ್ಲʼ

ರೈತರು ತಾವು ಬೆಳೆದ ಬೆಳೆಗಳನ್ನು ಪ್ರಾಣಿ–ಪಕ್ಷಿಗಳಿಂದ ರಕ್ಷಿಸಿ ಕೊಳ್ಳಲು ಹೊಲದ ಸುತ್ತಲೂ ಹಾಕಲಾಗುತ್ತಿದ್ದ ಮುಳ್ಳಿನ ಬೇಲಿ, ಸೀರೆಯ ಬೇಲಿ ಕಟ್ಟುವುದು, ಬೆದರು ಗೊಂಬೆ ನಿಲ್ಲಿಸುವುದು, ಗಂಟೆಗಳಿಗೆ ಪ್ರಾಣಿ-ಪಕ್ಷಗಳು ‘ಡೋಂಟ್‌ ಕೇರ್’ ಎನ್ನುತ್ತಿವೆ. ಹೀಗಾಗಿ, ಅವುಗಳನ್ನು ನಿಯಂತ್ರಿಸಲು ರೈತರು ತಂತ್ರಜ್ಞಾನದ ಮೊರೆ ಹೋಗಿದ್ದಾರೆ.

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹಳೇ ವೀರಾಪುರ ಗ್ರಾಮದ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ರಕ್ಷಣೆಗಾಗಿ ಮಿನಿ ರೆಕಾರ್ಡೆ‌ಬಲ್ ಮೈಕ್‌(ಧ್ವನಿ ದಾಖಲಿಸಬಹುದಾದ ಧ್ವನಿವರ್ಧಕ) ಬಳಸಲಾರಂಭಿಸಿದ್ದಾರೆ. ಗ್ರಾಮದ ರೈತ ಸಿದ್ದನಗೌಡ ಹೊಸಗೌಡ, ತಮ್ಮ ನಾಲ್ಕು ಎಕರೆ ಜಮೀನಿನಲ್ಲಿರುವ ಸೂರ್ಯಕಾಂತಿ ಬೆಳೆ ರಕ್ಷಣೆಗಾಗಿ ಈ ಮೈಕ್‌ಅನ್ನು ಅಳವಿಡಿಸಿದ್ದಾರೆ.

ಹೊಲದ ಸುತ್ತಲೂ ಸ್ಪೀಕರ್‌ಗಳನ್ನು ಅಳವಡಿಸಿದ್ದು, ಮೈಕ್‌‌ನಲ್ಲಿ ರೈತರು ತಮ್ಮ ಧ್ವನಿ ರೆಕಾರ್ಡ್‌ ಮಾಡಿ, ಹೊಲದಲ್ಲಿ ನಿರಂತರವಾಗಿ ಸದ್ದು ಕೇಳುವಂತೆ ಮಾಡಿದ್ದಾರೆ. ಹೀಗಾಗಿ ಪ್ರಾಣಿ–ಪಕ್ಷಿಗಳು ಹೊಲದ ಕಡೆ ಸುಳಿಯದಿರುವುದು ಕಂಡುಬಂದಿದೆ.

Advertisements

“ಬೆಳೆ ಬೆಳೆದು ನಿಂತ ನಂತರ, ಕಟಾವು ಮಾಡೋವರೆಗೆ ತಿಂಗಳುಗಟ್ಟಲೆ ದಿನಪೂರ್ತಿ ಹೊಲದಲ್ಲಿ ಶಬ್ದ ಮಾಡುವುದು ಕಷ್ಟದ ಕೆಲಸ. ಹಾಗಾಗಿ ಹೊಲದ ಸುತ್ತಲೂ ಸೀರೆಯ ಬೇಲಿ ಕಟ್ಟುವುದು, ಗಾಳಿ ಬಿಸಿದಾಗಲೆಲ್ಲ ಶಬ್ದ ಮಾಡುವಂತೆ ಗಂಟೆ ಕಟ್ಟುವುದು ಇತ್ಯಾದಿ ಪ್ರಯತ್ನಗಳನ್ನು ರೈತರು ಮಾಡುತ್ತಾರೆ. ಆದರೆ, ಇದೀಗ ತಂತ್ರಜ್ಞಾನದಿಂದ ಬೆಳೆ ರಕ್ಷಣೆ ಮಾಡುವಂತೆ ಕ್ರಮವಹಿಸಿದ್ದೇನೆ” ಎಂದು ರೈತ ಸಿದ್ದನಗೌಡ ಹೊಸಗೌಡ್ರು ಹೇಳಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಧಾರವಾಡ| ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಗತ್ಯವಿದೆ:...

“ಬೇಸಾಯದಲ್ಲಿ ಉಂಟಾಗಿರುವ ನಷ್ಟಕ್ಕಿಂತ, ಕೈಗೆ ಬಂದ ಬೆಳೆ ಉಳಿಸಿಕೊಳ್ಳುವುದು ಸವಾಲಾಗಿತ್ತು. ಪ್ರತಿ ಸಲ ಬೆಳೆ ಬಂದಾಗ ಗಿಳಿಗಳು, ಗುಬ್ಬಿ–ಕಾಗೆಗಳ ಕಾಟದಿಂದ ಹೈರಾಣಾಗಿದ್ದೆವು. ಒಮ್ಮೆ ಪಕ್ಕದ ಮಾಸೂರಿನ ಸಂತೆಯಲ್ಲಿ ಮೈಕ್‌‌ಗಳನ್ನು ಮಾರಾಟ ಮಾಡುತ್ತಿದ್ದರು. ಅದನ್ನು ₹400 ಕೊಟ್ಟು ಖರೀದಿಸಿದೆ. ಕೂಗುವ ಧ್ವನಿಯನ್ನು ಮೈಕ್‌‌ನಲ್ಲಿ ರೆಕಾರ್ಡ್ ಮಾಡಿದ್ದೇವೆ. ನಮ್ಮ ಹೊಲದ ಸುತ್ತ ನಾಲ್ಕು ಮೈಕ್‌‌ಗಳನ್ನು ಗಿಡಕ್ಕೆ ಕಟ್ಟಿದ್ದೇನೆ. ಕೂಗುವ ಶಬ್ದ ಹೊರ ಬರುವುದರಿದ ಯಾವುದೇ ಪ್ರಾಣಿ ಪಕ್ಷಿಗಳು ನಮ್ಮ ಹೊಲದ ಕಡೆ ಸುಳಿಯುತ್ತಿಲ್ಲ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ರೈತರು ಬೆಳೆದಿರುವ ತೊಗರಿ, ಜೋಳ, ಮೆಕ್ಕೆಜೋಳ, ಸೂರ್ಯ ಕಾಂತಿ ಹೀಗೆ ಹಲವು ಬೆಳೆಗಳನ್ನು ಪ್ರಾಣಿ-ಪಕ್ಷಿಗಳಿಂದ ರಕ್ಷಿಸಲು ಹಳೆಯ ವೀರಾಪುರ ಗ್ರಾಮದ ರೈತರು ಹೊಲದ ಸುತ್ತಲೂ ಮೈಕ್ ಅಳವಡಿಸಿದ್ದಾರೆ ಎಂದು ಕಂಡುಬಂದಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ನಾಲ್ಕು ದಿನಗಳಿಂದ ರೈತರು ಪ್ರತಿಭಟನೆ, ಸ್ಪಂದಿಸದ ಆಡಳಿತ: ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಕಿಡಿ

"ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ರೈತರು ನಾಲ್ಕು ದಿನಗಳಿಂದ...

ಕೊಪ್ಪಳ | ಅಕ್ರಮ ಗಾಂಜಾ ಮಾರಾಟ : ಒಂದೇ ಕುಟುಂಬದ 3 ಸೇರಿ ನಾಲ್ವರ ಬಂಧನ

ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ...

ಧಾರವಾಡ | ಹೆಬ್ಬಳ್ಳಿ ಗ್ರಾಮದಲ್ಲಿ 91 ಪಿಓಪಿ ಗಣೇಶ ವಿಗ್ರಹಗಳ ವಶಕ್ಕೆ ಪಡೆದ ತಪಾಸಣೆ ತಂಡ

ತಾಲೂಕಿನ ಹೆಬ್ಬಳ್ಳಿಯಲ್ಲಿ 91 ಪಿಓಪಿ ಗಣಪತಿಗಳನ್ನು ಜಿಲ್ಲಾಧಿಕಾರಿ ಆದೇಶದಂತೆ ರಚಿಸಿದ ಕಾರ್ಯ...

ಚಿಕ್ಕಮಗಳೂರು l ಪೋಕ್ಸೋ ಪ್ರಕರಣ: ಆರೋಪಿಗಳಿಗೆ ದಂಡ, ತಲಾ ಹತ್ತು ವರ್ಷ ಜೈಲು ಶಿಕ್ಷೆ

ಪೋಕ್ಸೋ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ತಲಾ ಹತ್ತು ವರ್ಷ ಜೈಲು ಶಿಕ್ಷೆ...

Download Eedina App Android / iOS

X