ದೇಶದ ಬೆನ್ನೆಲುಬು ರೈತ ಮತ್ತು ಸೈನಿಕರನ್ನು ನಾವೆಲ್ಲ ನೆನೆಯಬೇಕಾದ ಇಂದಿನ ಸಂದರ್ಭದಲ್ಲಿ ಅವಮಾನ ಪರಿಸ್ಥಿತಿಯಿಂದಾಗಿ ರೈತನ ಬಾಳು ಸಂಕಷ್ಟದಲ್ಲಿದೆ. ಆತನಿಗೆ ಬ್ಯಾಂಕುಗಳು ಸಕಾಲದಲ್ಲಿ ಸಾಲ ಸೌಲಭ್ಯ ನೀಡಿ ಬೆಂಬಲಿಸಬೇಕಾಗಿದೆ ಎಂದು ಬಿಜಾಪುರ್ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯ ಮಹಾಲಿಂಗಪುರದ ರೋಹಿಣಿ ಸಂಸ್ಥೆಯ ಬೋಧಿ ವೃಕ್ಷ ಸವಾಂಗಣದಲ್ಲಿ ಬ್ಯಾಂಕ್ ಆಫ್ ಬರೋಡ ವತಿಯಿಂದ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ರೋಹಿಣಿ ಬಯೋಟೆಕ್ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಲಾದ ಕೃಷಿ ಪರವಾದ ಬೃಹತ್ ರೈತ ಮೇಳದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ಸುಸ್ಥಿರ, ಸಾವಯವ, ಸಮಗ್ರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡ ಸ್ವಾಲಂಬಿ ಬದುಕು ರೂಪಿಸಿಕೊಳ್ಳಬೇಕು. ಇಂದು ರೈತರು ಅಗತ್ಯಕ್ಕಿಂತ ಹೆಚ್ಚಿಗೆ ನೀರು, ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆಯಿಂದಾಗಿ, ಬೆಳೆಯುವ ಆಹಾರ ವಿಷವಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕಾರಣ ರೈತರು ಮಣ್ಣು ಮತ್ತು ನೀರನ್ನು ಸಂರಕ್ಷಿಸಬೇಕು ಬೆಳೆಗಳಿಗೆ ಸಾವಯವ ಗೊಬ್ಬರಗಳ ಬೆಳಕೆಯನ್ನು ಹೆಚ್ಚಿಗೆ ಮಾಡಿಕೊಳ್ಳಬೇಕು. ಉಪ ಕಸಬುಗಳಾದ ಹೈನುಗಾರಿಕೆ, ಕುರಿ ಕೋಳಿ ಸಾಕಾಣಿಕೆ, ರೇಷ್ಮೆ ಕೃಷಿ ಮಾಡಬೇಕು, ಕೃಷಿ ತಜ್ಞರ ಸಲಹೆಯನ್ನು ನಿರಂತರವಾಗಿ ಪಡೆದು ಆರ್ಥಿಕವಾಗಿ ಸ್ವಾಲಂಬಿಗಳಾಗಬೇಕು ಎಂದರು.
ರೋಹಿಣಿ ಬಯೋಟೆಕ್ ಸಂಸ್ಥಾಪಕ ಡಾ. ಎಂ. ವೈ. ಕಟ್ಟಿ ಮಾತನಾಡಿ, ರೋಹಿಣಿ ಬಯೋಟೆಕ್ ಸಂಸ್ಥೆ ಕಟ್ಟುವಾಗ ಬಹಳ ಸಮವಹಿಸಿದ್ದು, ಇಂದು ಎರಡು ನೂರುಕ್ಕಿಂತ ಹೆಚ್ಚಿನ ಜನರಿಗೆ ಉದ್ಯೋಗ ನೀಡಿ, ವಿವಿಧ ಜೈವಿಕ ಪರಿಕರಗಳ ಉತ್ಪಾದನೆ, ಮಣ್ಣು ನೀರು ಪ್ರಯೋಗಾಲಯ, ಗುಣಮಟ್ಟದ ಟೆಶ್ಯೊ ಕಲ್ಚರ್ ಸಸಿಗಳ ಉತ್ಪಾದನೆ, ಸಾವಯವ ಡೈರಿ ಮುಂತಾದ ಉದ್ಯಮಗಳನ್ನು ಸ್ಥಾಪಿಸಲು ಸಾಧ್ಯವಾಯಿತು ಎಂದರು.
ಈ ವರದಿ ಓದಿದ್ದೀರಾ? ವಿಜಯಪುರ | ವಾರ್ಡ್ ನಂ. 29ರ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಗಿರೀಶ್ ಬಿರಾದಾರ್ ಗೆಲುವು
ಕಾರ್ಯಕ್ರಮದಲ್ಲಿ ಬಾಗಲಕೋಟ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಆರ್ ವಿ ನಂದಗಾವಿ, ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಎಸ್ ಎಸ್ ಚೌಹಾಣ, ವಿಜ್ಞಾನಿ ಡಾ. ವೆಂಕಣ್ಣ ಬಳಗಾನೂರ, ಡಾ. ರಮಿತಾ ರೈತರಿಗೆ ವಿವಿಧ ತಾಂತ್ರಿಕತೆಗಳ ಕುರಿತು ಸಂವಾದ ನಡೆಸಿಕೊಟ್ಟರು. ಕೃಷಿ ಅಧಿಕಾರಿ ಟಿಸಿಕಿನ್ ಡಾಂಗೆ ಇಲಾಖೆ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಬ್ಯಾಂಕಿನ ಕ್ಷೇತ್ರಾಧಿಕಾರಿ ಶ್ರದ್ಧಾ ಸ್ವಾಗತಿಸಿದರು. ಶ್ರೀಕಾಂತ್ ಕುಂಬಾರ್ ಕಾರ್ಯಕ್ರಮವನ್ನು ನಿರೋಪಿಸಿದರು.